ನೋಮೋಪೋಬಿಯಾ 21ನೇ ಶತಮಾನದ ಅತಿದೊಡ್ಡ, ಔಷಧಿಗೆ ಹೊರತಾದ ವ್ಯಸನ ಎಂದರೆ ಅತಿಶಯೋಕ್ತಿಯಾಗದು. ವಿಪರ್ಯಾಸವೆಂದರೆ ಹೆಚ್ಚು ಹೆಚ್ಚು ಕಾರ್ಯಶೀಲವಾಗಿರಬೇಕಾದ ಯುವಕ ಯುವತಿಯರೇ ಈ ಮೊಬೈಲ್ಗಳಿಗೆ ಬಲಿಯಾಗುತ್ತಿರುವುದು. ಹೆತ್ತವರು ಮತ್ತು ಸ್ನೇಹಿತರು ಸಕಾಲದಲ್ಲಿ ಎಚ್ಚೆತ್ತು, ಯುವಜನರನ್ನು ಎಚ್ಚರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅನಿವಾರ್ಯತೆ
ಸುಶಾಂತ್ ಸಿಂಗ್ ರಾಜಪೂತ್ ವೃತ್ತಿ ಜೀವನದಲ್ಲಿನ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ .ಆತನ ಸಾವಿನೊಂದಿಗೆ ಬಾಲಿವುಡ್ನ ಒಳಗಿನ ಸ್ವಜನಪಕ್ಷಪಾತ, ಹುಳುಕುಗಳು ಮತ್ತು ಬಣ್ಣದ ಭ್ರಮಾಲೋಕದ ಒಳಗಿನ ಕಟುಸತ್ಯಗಳು ಒಂದೊಂದಾಗಿ ಹೊರ ಬರತೊಡಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರುತ್ತಿರುವ ಒಂದು
ಇಡೀ ಪ್ರಪಂಚವೇ ಇಂದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಭಾರತದಲ್ಲಿನ ಸಾವಿನ ಪ್ರಮಾಣದಲ್ಲಿ
ರಕ್ತಹೀನತೆ ನಾನಾ ವ್ಯಾಧಿಗಳಿಗೆ ಕಾರಣ. ಕಬ್ಬಿಣಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತಹೀನತೆ ದೂರಮಾಡಬಹುದು. ಕಬ್ಬಿಣಾಂಶ ಅಧಿಕವಾಗಿರುವ ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಬಾಳೆಹಣ್ಣು, ಸೇಬು, ಹಾಲು, ಒ ಣಹಣ್ಣು, ನೆಲಗಡಲೆ, ಕರಿಎಳ್ಳು, ಜೇನು, ದ್ವಿದಳ ಧಾನ್ಯ ಸೇವನೆ ಸೂಕ್ತ.
ಸಿಕಲ್ ಸೆಲ್ ಖಾಯಿಲೆ ಅಥವಾ ಕುಡುಗೋಲು ಕಣ ಖಾಯಿಲೆ ಒಂದು ಮಾರಣಾಂತಿಕ ಖಾಯಿಲೆಯಾಗಿದ್ದು ಅತಿಯಾದ ನೋವು ನೀಡುವ ವಿಶಿಷ್ಟ ರೋಗ. ಸಂರ್ಪೂಣವಾಗಿ ಗುಣಪಡಿಸಲಾಗದಿದ್ದರೂ ರೋಗವನ್ನು ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ಈ ರೋಗಿಗಳು ಯಾವುದೇ ಕೆಲಸ ಮಾಡುವಾಗ ಬೇಗನೆ ಬಳಲುತ್ತಾರೆ ಮತ್ತು ಸುಸ್ತಾಗಿ ಬಿಡುತ್ತಾರೆ.
ಕಣ್ಣಿನ ಸೋಂಕನ್ನು ತಡೆಯಿರಿ. ಏಕೆಂದರೆ ಕೋವಿಡ್ ಕಣ್ಣುಗಳ ಮೂಲಕವೂ ನಮ್ಮ ದೇಹವನ್ನು ಪ್ರವೇಶಿಸಬಹುದು. ಕಣ್ಣಿನ ಆರೈಕೆ ಸರಿಯಾಗಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಆಗಾಗ ಕೈ ತೊಳೆಯುವುದು ಹಾಗೂ ಕಣ್ಣನ್ನು ಪದೇಪದೇ ಮುಟ್ಟಿಕೊಳ್ಳದೇ ಇರುವುದು ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ
ಯುವಜನತೆ ಹೆಚ್ಚು ಹೆಚ್ಚು ಈ ಆತ್ಮಹತ್ಯೆಗೆ ಮುಂದಾಗುತ್ತಿರುವುದು, ನಮ್ಮ ಸಮಾಜ ಎತ್ತಕಡೆಗೆ ಸಾಗುತ್ತದೆ ಎಂಬುದರ ಮುನ್ಸೂಚನೆ. ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಛಲದಿಂದ ಜೀವನದಲ್ಲಿ ಎನ್ನಾದರೂ ಸಾಧಿಸಿ ತೋರಿಸುವ ಗಟ್ಟಿತನವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಆತ್ಮಹತ್ಯೆ ಹೆಚ್ಚುತ್ತಿದೆ. ಇದು
ರಕ್ತದಾನ – ಜೀವದಾನ. ಪ್ರತಿ ವರ್ಷ ಜೂನ್ 14 ರಂದು “ವಿಶ್ವ ರಕ್ತದಾನಿಗಳ ದಿನ” ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಏನೆಂದರೆ ಪ್ರತಿಯೊಬ್ಬರೂ ಇದರಿಂದ ಪ್ರೇರಿತರಾಗಿ ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಪ್ರೇರಣೆಗೊಳ್ಳಬೇಕೆಂಬುದು ನಮ್ಮೆಲ್ಲರ ಆಶಯ. ಜಗತ್ತಿನ ಅತೀ ದೊಡ್ಡ
ಸ್ವಯಂ ಪ್ರೇರಿತ ರಕ್ತದಾನ ಮಾಡಿ ಜೀವ ಉಳಿಸಿ.ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವಾಗಿ ಆಚರಿಸಲಾಗುತ್ತದೆ. ಜಗತ್ತಿನ ಅತಿದೊಡ್ಡ ಸಂಶೊಧನೆ ಎಂದರೆ ಒಬ್ಬ ಮನುಷ್ಯನ ರಕ್ತ ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು