ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?

ಶ್ರಾವಣ ಮಾಸದಲ್ಲಿ ಮಾಂಸಾಹಾರ  ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. 

ಶ್ರಾವಣ ಮಾಸದಲ್ಲಿ-ಮಾಂಸಾಹಾರ-ಏಕೆ-ನಿಷಿದ್ಧ-ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ. ಜುಲೈ ಮಧ್ಯದಿಂದ ಆಗಸ್ಟ್ ತಿಂಗಳ ಮಧ್ಯದವರೆಗಿನ ಒಂದು ತಿಂಗಳ ಕಾಲಾವಧಿಯನ್ನು ಶ್ರಾವಣ ಮಾಸ ಎನ್ನಲಾಗುವುದು. ಹಲವಾರು ವ್ರತ, ಹಬ್ಬಗಳನ್ನು ಆಚರಿಸುವ ಈ ಮಾಸವು ಭೋರ್ಗರೆದು ಮಳೆ ಬರುವ ವರ್ಷ ಋತು ಅಥವಾ ಮಳೆಗಾಲದಲ್ಲಿ ಬರುತ್ತದೆ. ಅತಿಯಾದ ಮಳೆಯಿಂದಾಗಿ ವಾತಾವರಣದಲ್ಲಿ ಶೀತ, ಚಳಿ ಮತು ವಾಯುವಿನ ಅಂಶ ಹೆಚ್ಚಾಗುತ್ತದೆ. ನೀರು ಮಲಿನಗೊಂಡು ಜಲಮಾಲಿನ್ಯವಾಗುತ್ತದೆ. ಇದರ ಪರಿಣಾಮದಿಂದಾಗಿ ದೇಹ ಮತ್ತು ಮನಸ್ಸುಹಲವು ಬದಲಾವಣೆ ಹೊಂದುವುದು. .

ಮಾಂಸಾಹಾರ ನಿಶಿದ್ದಿಸಲು  ವೈಜ್ನಾನಿಕ ಮತ್ತು ಆರೋಗ್ಯದ ಕಾರಣ:

ಶೀತ, ತೀವಾಂತ ಮತ್ತು ವಾಯುವಿನ ಪ್ರಭಾವದಿಂದಾಗಿ ಹಲವು ವಾಯು ವಿಕಾರಗಳು, ಸಾಂಕ್ರಾಮಿಕ ರೋಗಗಳು ಮತ್ತು ಮಾನಸಿಕ ತೊಂದರೆಗಳು ಉದ್ಬವಿಸುಬಹುದು. ಅದ್ದರಿಂದ ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಮುಖ್ಯವಾಗಿ ಈ ಮಾಸ ಪೂರ್ತಿ ಮಾಂಸಾಹಾರವನ್ನು ವರ್ಜಿಸಲಾಗಿದೆ. ಮಾಂಸಾಹಾರ ನಿಶಿದ್ದಿಸಲು ಕೆಲವು ವೈಜ್ನಾನಿಕ ಮತ್ತು ಆರೋಗ್ಯದ ಕಾರಣಗಳಿವೆ.

1. ಅತಿ ಹೆಚ್ಚು ಮಳೆಯಿಂದಾಗಿ ಜೀರ್ಣ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಸುಲಭವಾಗಿ ಜೀರ್ಣ ವಾಗುವ ಆಹಾರವನ್ನು ಮಾತ್ರ ಸೇವಿಸಲು ಸಾಧ್ಯ. ಮಾಂಸಾಹಾರ ಜೀರ್ಣವಾಗಲು ಕಷ್ಟಕರ ಮತ್ತು ತುಂಬಾ ಸಮಯ ಜೀರ್ಣಿಸಿಕೊಳ್ಳಲು ಬೇಕಾಗಿರುವುದರಿಂದ, ಮಾಂಸಾಹಾರವನ್ನು ಸೇವಿಸಿದರೆ ಅಜೀರ್ಣ, ಮಲಬದ್ದತೆ, ಹೊಟ್ಟೆ ನೋವು, ಉಬ್ಬರದ ಹಲವು ಸಮಸ್ಯೆಗಳು ಉಂಟಾಗುತ್ತದೆ.

Also Read: ಮಳೆಗಾಲದಲ್ಲಿ ಆರೋಗ್ಯ-ಸೂಕ್ತ ಆಹಾರ ಸೇವಿಸಬೇಕು

2. ಮಳೆಗಾಲದಲ್ಲಿ ನೀರು ಕಲುಶಿತವಾಗುವುದರಿಂದ ವಾಂತಿ, ಬೇಧಿ, ಮಲೇರಿಯಾ, ಟೈಫಾಯಿಡ್ ನಂತಹ ಹಲವು ಸಾಂಕ್ರಾಮಿಕ ರೋಗಗಳು ಉಂಟಾಗುತ್ತದೆ ಮತ್ತು ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಶೀಘ್ರವಾಗಿ ಹರಡುತ್ತದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

3. ಮಳೆಗಾಲ ಹಲವು ಪ್ರಾಣಿ ಪಕ್ಷಿಗಳು , ಜಂತುಗಳು ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳುವ ಕಾಲ. ಪ್ರಕೃತಿಯು ಈ ಸಂದರ್ಭದಲ್ಲಿ ಪ್ರಾಣಿ ಸಂಕುಲಗಳ ಸಂಖ್ಯೆಯನ್ನು ಅಭಿವೃದ್ದಿಸಿಕೊಳ್ಳಲು ನೀಡಿರುವ ಒಳ್ಳೆಯ ಕಾಲ. ಆದ್ದರಿಂದ ಈ ಕಾಲದಲ್ಲಿ ಮಾಂಸಾಹಾರ ಸೇವಿಸಿದರೆ ಇದರ ಸಂಕುಲವು  ಕ್ಷೀಣಿಸಬಹುದು.

Malegalada-Kayilegalu4. ಅತಿಯಾದ ಮಳೆ ಮತ್ತು ವಾತಾವರಣದಲ್ಲಿನ ವಾಯುವು ಮನಸಿನ ಮೇಲೂ ಪ್ರಭಾವವನ್ನು ಭೀರಿ, ಮನಸನ್ನು ಅಸ್ಥವ್ಯಸ್ಥಗೊಳಿಸುತ್ತದೆ. ಮನಸನ್ನು ಏಕಾಗ್ರಗೊಳಿಸಿ, ಶಾಂತವಾಗಿಸಲು ಮನಸನ್ನು ದೇವರೆಡೆಗೆ ಸೆಳೆಯಲು, ಆ ಮೂಲಕ ಮನಸಿನ ತುಮುಲಗಳಿಗೆ ಕಡಿವಾಣ ಹಾಕಲು ಧ್ಯಾನ, ದೇವರನಾಮ ಪಠಣ, ಪೂಜೆ, ವ್ರತ, ಪ್ರವಚನ, ಹಬ್ಬ ಹರಿದಿನಗಳನ್ನು ಈ ಮಾಸದಲ್ಲಿ ಸೂಕ್ಷ್ಮವಾಗಿ ಅಳವಡಿಸಲಾಗಿದೆ.

5. ನೀರು ಕಲುಶಿತವಾಗಿ ಹಲವು ಸಾಂಕ್ರಾಮಿಕ ರೋಗ ಬರುವುದರಿಂದ ಮಳೆನೀರು, ನದಿನೀರು, ಸೊಪ್ಪು, ಗೆಡ್ಡೆ ಗೆಣಸನ್ನು ವರ್ಜಿಸಲಾಗಿದೆ. ಅತಿಯಾದ ವಾಯುವಿನ ಪರಿಣಾಮ ಮಲಬದ್ದತೆ, ಹೊಟ್ಟೆ ಉಬ್ಬರ, ಗಂಟು ನೋವು ಹೆಚ್ಚಾಗುತ್ತದೆ. ಆದ್ದರಿಂದ ಕಾಳಿನ ಪದಾರ್ಥವನ್ನು ನಿಯಮಿತವಾಗಿ ಬಳಸಲು ಈ ಮಾಸದಲ್ಲಿ ತಿಳಿಸಲಾಗಿದೆ.

6. ಬದಲಿಗೆ, ಬಿಸಿನೀರು, ಹಾಲು,ಜೀರಿಗೆ, ಕಾಳು ಮೆಣಸು, ಶುಂಠಿ, ತುಪ್ಪ, ಮಂಚಕರ್ಮ ವಿಶೇಷ ಚಿಕಿತ್ಸೆಯಾದ ಬಸ್ತಿ ಚಿಕಿತ್ಸೆಯನ್ನು ರೋಗವನ್ನು ತಡೆಗಟ್ಟಲು ಈ ಮಾಸದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.

Also watch: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ನಿಷಿದ್ಧ?

https://www.youtube.com/watch?v=4dQdNJTGhuo&t=360s

ಡಾ. ಮಹೇಶ ಶರ್ಮಾ. ಎಂ ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು. Mob: 9964022654 drsharmamysr@gmail.com

ಡಾ. ಮಹೇಶ ಶರ್ಮಾ. ಎಂ
ಸಹಾಯಕ ಪ್ರಾಧ್ಯಾಪಕರು, ಕಾಯಚಿಕಿತ್ಸಾ ವಿಭಾಗ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು.
Mob: 9964022654 drsharmamysr@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!