ನೇತ್ರ ರಕ್ಷಣೆಗೆ ಕಾಳಜಿ ವಹಿಸಿ – ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ.

ನೇತ್ರ ರಕ್ಷಣೆಗೆ ಕಾಳಜಿ ವಹಿಸಿ.  ಕಣ್ಣಿನ ಬಗ್ಗೆ ಕಾಳಜಿ ವಹಿಸುವಲ್ಲಿ ಮತ್ತು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತೀಯರು ಅತ್ಯಂತ ಉದಾಸೀನ ಧೋರಣೆ ಹೊಂದಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ನಿಮ್ಮ ಕಣ್ಣು ಮತ್ತು ಮುಖವನ್ನು ಹೆಚ್ಚಾಗಿ ಸ್ಪರ್ಶಿಸಬೇಡಿ. ರಕ್ಷಣಾತ್ಮಕ ಕನ್ನಡಕವನ್ನು ಧರಿಸುವುದು ಕಣ್ಣುಗಳಿಗೆ ವೈರಸ್ ಪ್ರವೇಶಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವಿಶ್ವದ ಮೂರನೇ ಒಂದರಷ್ಟು ಜನರು ಮಾತ್ರ ತಮ್ಮ ಅಮೂಲ್ಯ ಕಣ್ಣುಗಳ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ. ಕಾಳಜಿ ವಹಿಸದೇ ಇರುವವರ ಪಟ್ಟಿಯಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಎಂಬುದು ಇತ್ತೀಚಿನ ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಮನುಷ್ಯ ತನ್ನ ದೃಷ್ಟಿಯನ್ನು ಕಳೆದುಕೊಂಡರೆ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡಂತೆ ಎಂಬ ಸತ್ಯ ತಿಳಿದಿದ್ದರೂ ಕೂಡ ಅತ್ತ ಕಡೆ ಗಮನ ಹರಿಸುತ್ತಿಲ್ಲ. ಕಣ್ಣಿನ ಸಮಸ್ಯೆ ತಾನಾಗೇ ಬರುವವರೆಗೆ ತಾವು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ ಎಂದು ಶೇ.44ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ತಮ್ಮ ದೃಷ್ಟಿಯಲ್ಲಿ ಯಾವುದೇ ದೋಷವಿಲ್ಲ. ತಾವು ಏಕೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶೇಕಡ 42ರಷ್ಟು ಜನರು ಪ್ರಶ್ನಿಸುತ್ತಾರೆ.

corona-eye

ಭಾರತದಲ್ಲಿ ಸುಮಾರು 80,00,000 ಮಂದಿ ಕಣ್ಣಿನ ಸಮಸ್ಯೆಯಿಂದ ಬಳಸುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ. ಭಾರತದಲ್ಲಿ ಶೇಕಡ 70ರಷ್ಟು ಮಂದಿ ಕಣ್ಣಿನಲ್ಲಿ ಸಮಸ್ಯೆ ಅಥವಾ ದೋಷ ಉದ್ಭವಿಸುವ ತನಕ ಕಣ್ಣಿನ ಬಗ್ಗೆ ಆಸ್ಥೆ ವಹಿಸುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ. ತಾವು ಕಣ್ಣಿನ ಬಗ್ಗೆ ಹೆಚ್ಚು ತಿಳಿದ್ದೇವೆ ಎಂದು ಭಾರತೀಯರು ಹೇಳಿಕೊಳ್ಳುತ್ತಾರೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ, ಭಾರತೀಯರಿಗೆ ಕಣ್ಣಿನ ಬಗ್ಗೆ ನಿಜವಾಗಿಯೂ ಅರಿವಿಲ್ಲ. ಸ್ಥೂಲಕಾಯ, ಮಾಲಿನ್ಯ, ಧೂಮಪಾನದಿಂದ ಭಾರತೀಯರು ಹೆಚ್ಚಾಗಿ ಕಣ್ಣಿನ ದೋಷಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಆರೋಗ್ಯಕರ ಕಣ್ಣಿನ ಆರೈಕೆಗೆ ಟಿಪ್ಸ್:

ಕಣ್ಣು ಮುಖದ ಪ್ರತಿಬಿಂಬ, ಅಕರ್ಷಕವಾದ ಕಣ್ಣು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬಹುತೇಕ ಮಂದಿ ಮುಖದ ಆರೈಕೆಗೆ ವಹಿಸುವ ಆಸಕ್ತಿಯನ್ನು ಕಣ್ಣಿನ ಕಡೆ ವಹಿಸುವುದಿಲ್ಲ. ಮುಖ ಆಕರ್ಷಕವಾಗಿ ಕಾಣಬೇಕೆಂದರೆ ನೇತ್ರ ಆರೈಕೆ ಬಗ್ಗೆಯೂ ಕೂಡ ಗಮನಹರಿಸಬೇಕಾಗುತ್ತದೆ. ಈ ಕೆಳಗಿನ ಸಲಹೆಗಳು ಸ್ಫಟಿಕದಂತಹ ಹೊಳಪಿನ ಕಣ್ಣನ್ನು ಪಡೆಯಲು ಸಹಾಯ ಮಾಡುತ್ತದೆ.

1. ಕಣ್ಣಿನ ಕೆಳಭಾಗಕ್ಕೆ ಕ್ರೀಮ್ ಲೇಪನ: ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ ಅಂದರೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಇದ್ದರೆ ಮಾತ್ರ ಕ್ರೀಮ್ ಹಚ್ಚಬೇಕೆಂದಿಲ್ಲ. ಕಣ್ಣಿನ ಸುತ್ತ ಇರುವ ತ್ವಚೆಯು ಕೆನ್ನೆಯ ತ್ವಚೆಗಿಂತ ತುಂಬಾ ಮೃದುವಾಗಿರುವುದರಿಂದ ಕ್ರೀಮ್ ಅನ್ನು ಪ್ರತಿದಿನ ಹಚ್ಚಿದರೆ ಆ ಭಾಗದಲ್ಲಿ ಕಪ್ಪು ವರ್ತುಲವಿರುವುದಿಲ್ಲ ಮತ್ತು ತ್ವಚ್ಚೆಯು ಆರೋಗ್ಯಕರವಾಗಿರುತ್ತದೆ.
2. ಕಣ್ಣಿನ ಪ್ಯಾಕ್: ಕಣ್ಣಿನ ಮೇಲೆ ಸೌತೆಕಾಯಿ ಅಥವಾ ಸ್ಟ್ರಾಬೆರಿ ಇಟ್ಟು 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಕಣ್ಣಿನಲ್ಲಿ ತುರಿಕೆಯ ಸಮಸ್ಯೆ ಇದ್ದರೆ ಹೋಗಲಾಡಿಸಬಹುದು. ಮತ್ತು ಇದರಿಂದ ಹಣ್ಣು ಹೊಳಪಿನಿಂದ ಕಾಣುತ್ತದೆ.
3. ಕಣ್ಣಿನ ಸುತ್ತ ಮಾಯಿಶ್ಚರೈಸರ್: ಕಣ್ಣಿನ ಸುತ್ತ ಮಾಯಿಶ್ಚರೈಸರ್ ಲೇಪಿಸುವುದರಿಂದ ಪ್ರಯೋಜನಗಳುಂಟು. ಮುಖದಲ್ಲಿ ನೆರಿಗೆ ಮೊದಲು ಕಣ್ಣಿನ ಸುತ್ತ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಮುಖಕ್ಕೆ ಮಾಯಿಶ್ಚರೈಸರ್ ಮಾಡುವಾಗ ಕಣ್ಣಿನ ಸುತ್ತ ಕೂಡ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಬೇಕು. ತೆಂಗಿನೆಣ್ಣೆಯನ್ನು ಹಚ್ಚಿದರೆ ಒಳ್ಳೆಯದು. ಮೊದಲು ಸ್ವಲ್ಪ ಉರಿ ಅನಿಸಿದರೂ ಕಣ್ಣಿಗೆ ಇದು ತುಂಬಾ ಒಳ್ಳೆಯದು ಮತ್ತು ಹಿತಕಾರಿ.
4. ಕನ್ನಡಕದ ಬದಲು ಲೆನ್ಸ್: ಕನ್ನಡಕವನ್ನು ಪ್ರತಿದಿನ ಬಳಸುತ್ತಿದ್ದರೆ ಕಣ್ಣಿನ ಸುತ್ತ ಕಪ್ಪು ಬಣ್ಣ ಉಂಟಾಗುತ್ತದೆ. ಆದ್ದರಿಂದ ಕನ್ನಡಕದ ಬದಲು ಲೆನ್ಸ್ ಬಳಸಿದರೆ ಮುಖದ ಅಂದ ಹೆಚ್ಚಾಗುತ್ತದೆ.
5. ಒತ್ತಡ ಕಡಿಮೆ ಮಾಡಬೇಕು: ಮಾನಸಿಕ ಒತ್ತಡವು ಕೇವಲ ಮೆದುಳಿನ ಮೇಲೆ ಅಲ್ಲದೇ ಕಣ್ಣು ಸೇರಿದಂತೆ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡವಿದ್ದರೆ ಕಣ್ಣು ನೋಡಿದಾಗ ತಿಳಿಯುತ್ತದೆ. ಕಣ್ಣು ಕೆಂಪಾಗಿ ಮಂಕಾಗಿ ಕಾಣುತ್ತದೆ. ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಇದರಿಂದ ಮನಸ್ಸು ಪ್ರಶಾಂತವಾಗಿ ಕಣ್ಣಿನ ಮೇಲೆ ಒತ್ತಡ ಕಡಿಮೆಯಾಗಿ ನೇತ್ರಗಳಲ್ಲಿ ಕಾಂತಿ ಕಂಡುಬರುತ್ತದೆ.
6. ಪ್ರಶಾಂತ ಮನಸ್ಸಿನ ನಿದ್ರೆ: ನಿದ್ರೆ ಕಣ್ಣಿಗೆ ತುಂಬಾ ಅಗತ್ಯವಿರುತ್ತದೆ. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನೆಮ್ಮದಿಯಿಂದ ಪ್ರಶಾಂತತೆಯಿಂದ ನಿದ್ದೆ ಮಾಡಬೇಕು. ಇದರಿಂದ ಕಣ್ಣಿನ ಹೊಳಪು ಹೆಚ್ಚಾಗುತ್ತದೆ.
7. ಪೋಷಕಾಂಶ ಆಹಾರ: ಇವುಗಳೊಂದಿಗೆ ದೇಹದಲ್ಲಿ ನೀರಿನಂಶ ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವ ಪೋಷಕಾಂಶ ಆಹಾರವು ದಿನನಿತ್ಯದ ಆಹಾರ ಕ್ರಮದಲ್ಲಿರಬೇಕು.
ಈ ಮೇಲಿನ ಸಲಹೆಗಳನ್ನು ಅನುಸರಿಸಿದರೆ ಕಣ್ಣುಗಳ ಅಂದ ಹೆಚ್ಚಾಗುತ್ತದೆ. ಸ್ಫಟಿಕ ಹೊಳಪಿನ ಆರೋಗ್ಯಕರ ಕಣ್ಣುಗಳು ನಿಮ್ಮದಾಗುತ್ತವೆ.

ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ:

ನಿಮ್ಮ ಕಣ್ಣು ಮತ್ತು ಮುಖವನ್ನು ಹೆಚ್ಚಾಗಿ ಸ್ಪರ್ಶಿಸಬೇಡಿ. ಕರೋನಾ ವೈರಸ್ ಕಣ್ಣುಗಳ ಮೂಲಕ ಹರಡಬಹುದು ಇತ್ತೀಚಿನ ಅಧ್ಯಯನಗಳು ಸಾಬೀತುಪಡಿಸಿವೆ. ಅನಾರೋಗ್ಯದ ವ್ಯಕ್ತಿಯು ಕೆಮ್ಮಿದಾಗ ಅಥವಾ ಮಾತನಾಡುವಾಗ, ವೈರಸ್ ಕಣಗಳು ಸಹ ಕಣ್ಣುಗಳ ಮೂಲಕ ಪ್ರವೇಶಿಸಬಹುದು. ವೈರಸ್ ಇರುವ ಯಾವುದನ್ನಾದರೂ ಸ್ಪರ್ಶಿಸಿ ನಂತರ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕವೂ ಇದು ಸೋಂಕಿಗೆ ಒಳಗಾಗಬಹುದು. ತಡೆಗಟ್ಟುವ ಕ್ರಮವಾಗಿ ಮುಖದ ಮುಖವಾಡಗಳು ಮತ್ತು ಸ್ಯಾನಿಟೈಸರ್ಗಳು ಕಡ್ಡಾಯವಾಗಿದ್ದರೂ, ರಕ್ಷಣಾತ್ಮಕ ಕನ್ನಡಕವನ್ನು ಧರಿಸುವುದು ಕಣ್ಣುಗಳಿಗೆ ವೈರಸ್ ಪ್ರವೇಶಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ಷಣಾತ್ಮಕ ಕನ್ನಡಕವನ್ನು ಧರಿಸಿ:

1. ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಅಗತ್ಯ ಸೇವಾ ಪೂರೈಕೆದಾರರು ಮತ್ತು ಇತರ ಮುಂಚೂಣಿ ಕಾರ್ಮಿಕರು ಹೆಚ್ಚು ದುರ್ಬಲರಾಗಿರುವುದರಿಂದ ಕನ್ನಡಕವನ್ನು ಧರಿಸುವುದು ಬಹಳ ಮುಖ್ಯ.
2. ಜನರು ಕಿಕ್ಕಿರಿದ ಸ್ಥಳಗಳಲ್ಲಿದ್ದರೆ, ಅವರು ರಕ್ಷಣಾತ್ಮಕ ಕನ್ನಡಕವನ್ನು ಧರಿಸುವುದು ಸೂಕ್ತ. ಆದರೆ ಕೈ ನೈರ್ಮಲ್ಯವನ್ನು ಮರೆಯಬಾರದು ಮತ್ತು ಜನರು ಮುಖವನ್ನು ಮುಟ್ಟುವುದನ್ನು ತಪ್ಪಿಸಬೇಕು.
3. ಕಾಂಟ್ಯಾಕ್ಟ್ ಲೆನ್ಸ್ ಧರಿಸಿದವರು ತಕ್ಷಣ ಕನ್ನಡಕಕ್ಕೆ ಬದಲಾಗಬೇಕು. ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ತಮ್ಮ ಕಣ್ಣುಗಳನ್ನು ಉಜ್ಜುತ್ತಲೇ ಇರುತ್ತಾರೆ. ಇದು ವೈರಸ್ ಕಣ್ಣಿಗೆ ಬರಲು ಅನುವು ಮಾಡಿಕೊಡುತ್ತದೆ. ಕಣ್ಣಿನಲ್ಲಿ ವೈರಸ್ ಹೇಗೆ ವರ್ತಿಸುತ್ತದೆ ಎಂಬುದರ ಸಾಕಷ್ಟು ಮಾಹಿತಿ ನಮಗೆ ಇನ್ನೂ ತಿಳಿದಿಲ್ಲ. ಆದರೆ ಕನ್ನಡಕವನ್ನು ಧರಿಸುವುದು ಸೂಕ್ತವಾಗಿದೆ.

ಅಧ್ಯಯನಗಳ ಪ್ರಕಾರ, ಜನರು ತಿಳಿದಿರುವ ಅಥವಾ ತಿಳಿಯದೆ ಒಂದು ಗಂಟೆಯಲ್ಲಿ ಸುಮಾರು 20 ಬಾರಿ ತಮ್ಮ ಮುಖವನ್ನು ಸ್ಪರ್ಶಿಸಬಹುದು. ಒಬ್ಬ ವ್ಯಕ್ತಿಯು ಪೀಡಿತ ಮೇಲ್ಮೈಯನ್ನು ಮುಟ್ಟಿದಾಗ ಮತ್ತು ನಂತರ ಕಣ್ಣುಗಳು ಅಥವಾ ಮುಖವನ್ನು ಮುಟ್ಟಿದಾಗ, ವೈರಸ್ ದೇಹವನ್ನು ಪ್ರವೇಶಿಸಬಹುದು. ಕನ್ನಡಕದೊಂದಿಗೆ, ವೈರಸ್ ಹನಿಗಳು ಕಣ್ಣುಗಳೊಂದಿಗೆ ಸಂಪರ್ಕಕ್ಕೆ ಬರದಂತೆ ತಡೆಯಬಹುದು. ಆದ್ದರಿಂದ ನೀವು ಮನೆಯಿಂದ ಹೊರ ಬಂದಾಗ ಕನ್ನಡಕವನ್ನು ಧರಿಸುವುದು ಒಳ್ಳೆಯದು, ಮತ್ತು ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ತಕ್ಷಣ ಕನ್ನಡಕಕ್ಕೆ ಬದಲಾಗಬೇಕು.

Dr-Bhujanga-Shetty.

ಡಾ. ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು- ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್,
ಬೆಂಗಳೂರು-10 (ಇಸ್ಕಾನ್ ದೇವಾಲಯದ ಹತ್ತಿರ)
ದೂ: 080-6612 1401/ 1402
Email : info@narayananethralaya.com ; info@nnmail.org
www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!