ವಿಕೃತಿಯ ಮಾಡದಿರು, ಪ್ರಕೃತಿಯ ಕೊಡುಗೆಯಂತೆ ಇರು. ಇದ ಮರೆತರೆ ದೇಹ ಪ್ರಕೃತಿಯು ವಿಕೃತಿಯಾಗುವುದು. ಇದ ತಿಳಿಯದಿದ್ದರೆ ಭವಿಷ್ಯದಲ್ಲಿ ಪ್ರಕೃತಿಯೇ ಮಾರಕವಾಗುವುದು. ಪಟಾಕಿಯ ಸುಟ್ಟರೆ ಕಣ್ಣಿಗೆ ಅಂದ, ನೋಡಲು ಚಂದ. ಅದು ನಮ್ಮನ್ನು ಸುಟ್ಟರೆ ತಾಳಲಾರೆನೋ ಕಂದ, ಇದು ಯಾವ ಬಂಧ?? ಪಟಾಕಿಯು
ಆಯುರ್ವೇದದ ದೃಷ್ಟಿಯಿಂದ ದೀಪಾವಳಿ ಹಬ್ಬ ಆಚರಣೆ ಧಾರ್ಮಿಕ, ಸಾಮಾಜಿಕ ಆಚರಣೆಗೂ ಮೀರಿ ಮಹತ್ವದ್ದಾಗಿದೆ. ದೀಪಾವಳಿಯ ಎಲ್ಲಾ ಆಚರಣೆ, ಸಂಪ್ರದಾಯಗಳು ವಾತ ದೋಷವನ್ನು ಶಮನ ಮಾಡಿ, ದೇಹದಲ್ಲಿನ ವೈಪರೀತ್ಯಗಳನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಅಳವಡಿಸಲಾಗಿದೆ. ದೀಪಾವಳಿ ಭಾರತದಲ್ಲಿ ಆಚರಿಸುವ ಬಹಳ ಪ್ರಮುಖ ಹಬ್ಬ.