ಇತ್ತೀಚೆಗೆ ಅಂಗದೌರ್ಬಲ್ಯವನ್ನುಂಟುಮಾಡುವ ಪಕ್ಷಾಘಾತ ರೋಗವು ಅಧಿಕವಾಗಿ ಕಾಡುತ್ತಿರುವುದು ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಈ ಕಾಯಿಲೆಯು ಈಗ ಮದ್ಯವಯಸ್ಕರಲ್ಲಿಯೂ ಭಾಧಿಸುತ್ತಿದೆ. ಅತಿಯಾದ ಒತ್ತಡಯುಕ್ತ ಜೀವನಶೈಲಿ, ಶಾರೀರಿಕ ಶ್ರಮದ ಅಭಾವ, ಆಧುನಿಕ ವೈಭೋಗಗಳು ಹಾಗೂ ಚಿಂತೆ ಪಕ್ಷಾಘಾತಕ್ಕೆ ಕಾರಣಗಳೆಂದು ವಿಶ್ಲೇಶಿಸಲಾಗುತ್ತಿದೆ. ವೈರಸ್ ರೋಗಗಳು ಹಾಗೂ ಕೋವಿಡ್ ನಂತರದ ಕಾಲವೂ ಕೂಡಾ ಈ ರೋಗದ ಹೆಚ್ಚುವಿಕೆಗೆ ಕಾರಣಗಳೆಂದೂ ಕೆಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕಾಯಿಲೆಯು ರೋಗಿಯನ್ನಲ್ಲದೇ ಅವನ ಪರಿವಾರವನ್ನೂ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕವಾಗಿಯೂ ಜರ್ಜರಿತವನ್ನಾಗಿಸಿ ಇಡೀ ಕುಟುಂಬವನ್ನೇ ಹೈರಾಣಾಗಿಸಿ ಬದುಕನ್ನೇ ಹಿಂಡಿ ಹಿಪ್ಪೆಯನ್ನಾಗಿಸುತ್ತದೆ.
ಪಕ್ಷಾಘಾತ ಮೆದುಳಿನ ಆಘಾತದಿಂದ ತ್ವರಿತವಾಗಿ ಉಂಟಾಗುವ ವಿಕೃತಿ. ವೈದ್ಯಕೀಯ ಭಾಷೆಯಲ್ಲಿ ಸ್ಟ್ರೋಕ್ ಅಥವಾ ಸೆರೆಬ್ರೋ ವ್ಯಾಸ್ಕ್ಯುಲಾರ್ ಆಕ್ಸಿಡೆಂಟ್ ಎಂದು ಕರೆಯಲ್ಪಡುವ ಈ ಕಾಯಿಲೆಯು ಮೆದುಳಿನ ರಕ್ತ ಪರಿಚಲನೆಯ ದೋಷದಿಂದ ದೇಹದ ಒಂದು ಪಾಶ್ರ್ವದ ಕ್ರೀಯಾಹಾನಿಯುಂಟಾಗುತ್ತದೆ. ವೈದ್ಯಕೀಯ ತುರ್ತು ಅವಶ್ಯಕತೆಯಿರುವ ಈ ಕಾಯಿಲೆಯು ಮನುಷ್ಯನ ಒತ್ತಡದ ಜೀವನದ ಪರಿಸ್ಥಿತಿಯಿಂದ ಇತ್ತೀಚೆಗೆ ಒಂದು ಲಕ್ಷ ಜನಸಂಖ್ಯೆಗೆ 45 ರಿಂದ 150 ಮಂದಿಯ ಸಾವಿಗೆ ಕಾರಣವಾಗಿದೆ. ಭಾರತದಲ್ಲಿ ಇದು ಅತಿ ಹೆಚ್ಚು ಸಾವಿಗೆ ಕಾರಣವಾಗುವ ರೋಗಗಳ ಪಟ್ಟಿಯಲ್ಲಿ 3ನೇಯದ್ದಾಗಿದೆ. ಮೆದುಳಿನ ರಕ್ತನಾಳಗಳಲ್ಲಿ ತಡೆಯುಂಟಾಗುವುದು ಅಥವಾ ಆಂತರಿಕ ರಕ್ತಸ್ರಾವದಿಂದ ನರಗಳ ಜೀವಕೋಶಗಳ ಹಾನಿಯುಂಟಾಗಿ ಸಂವೇದನಾ ನರಗಳ ಅಥವಾ ಕ್ರೀಯಾ ನರಗಳ ವೈಫಲ್ಯ ಉಂಟಾಗಿ ಶರೀರದ ಒಂದು ಭಾಗ ಅಥವಾ ಸಂಪೂರ್ಣ ಶರೀರ ನಿಶ್ಚೇತನಗೊಳ್ಳಬಹುದು.
ಪಕ್ಷಾಘಾತ ಕ್ಲಿಷ್ಟಕರ ಅಂಗವೈಕಲ್ಯವನ್ನುಂಟುಮಾಡುವ ವಾತರೋಗವಾಗಿದ್ದು, ಚಿಕಿತ್ಸೆ ಮತ್ತು ನಿರ್ವಹಣೆಯು ತ್ರಾಸದಾಯಕವಾಗಿರುತ್ತದೆ. ಈ ರೋಗವು ಒಮ್ಮಿಂದೊಮ್ಮೆಗೇ ಅಥವಾ ನಿದಾನವಾಗಿಯೂ, ಕಾಲಾನಂತರದಲ್ಲಿಯೂ ಶರೀರದಲ್ಲಿ ಸಂಜ್ಞಾವಹ ಹಾಗೂ ಕ್ರಿಯಾವೈಕಲ್ಯಗಳನ್ನು ಉಂಟುಮಾಡಬಹುದು. ಇದು ಶರೀರದ ಯಾವುದಾದರೂ ಒಂದು ಅಂಗ, ಮುಖ, ಒಂದು ಕೈ ಅಥವಾ ಒಂದು ಕಾಲು, ಒಂದು ಪಾಶ್ರ್ವ, ಎರಡೂ ಪಾಶ್ರ್ವ, ದವಡೆ, ಧ್ವನಿ ಪೆಟ್ಟಿಗೆ, ತಾಲು, ಗಂಟಲು ಹಾಗೂ ಸಂಪೂರ್ಣ ಶರೀರವನ್ನು ಆವರಿಸಬಹುದು, ಅಥವಾ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಬಹುದು. ಮೆದುಳಿನ ನರಕೋಶಗಳು ಸಂಪೂರ್ಣ ನಾಶಹೊಂದಿದರೆ ಸಾವು ಉಂಟಾಗುತ್ತದೆ ಅಥವಾ ಒಂದು ಪಾಶ್ರ್ವದ ನರಕೋಶಗಳು ನಶಿಸಿದರೆ ವಿರುದ್ಧ ಪಾಶ್ರ್ವದ ವೈಕಲ್ಯವು ಶಾಶ್ವತವಾಗಿರುತ್ತದೆ. ನರಕೋಶಗಳನ್ನು ಪುನಶ್ಚೇತನಗೊಳಿಸಿದರೆ ಅಂಗವೈಕಲ್ಯವು ಸರಿಹೋಗುತ್ತದೆ.
ಪ್ರಮುಖ ಕಾರಣಗಳು: ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಕೊಲೆಸ್ಟೆರಾಲ್, ಬೊಜ್ಜು, ಹೃದಯದ ಕಾಯಿಲೆ, ಮೆದುಳು ಜ್ವರ, ಮೆದುಳಿನ ಗಡ್ಡೆ, ಅಪಘಾತದಿಂದ ಮೆದುಳಿಗೆ ಹಾನಿ, ಮೆದುಳಿನ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ, ಮಲ್ಟಿಪಲ್ ಸ್ಕ್ಲೀರೋಸಿಸ್, ಮೆದುಳಿನ ಸೋಂಕು ಹಾಗೂ ಕೀವು ತುಂಬಿಕೊಳ್ಳುವುದು, ಅನುವಂಶಿಕ ಮೆದುಳಿನ ರೋಗ, ಜನ್ಮಜಾತ ದೋಷಗಳು, ಫಿಟ್ಸ್, ಮಾನಸಿಕ ಕಾಯಿಲೆ ಇತ್ಯಾದಿ.
ಪ್ರಾಥಮಿಕ ಉಪಚಾರ: ರಕ್ತದೊತ್ತಡ ನಿಯಂತ್ರಣ, ರಕ್ತದ ಸಕ್ಕರೆಯಂಶ ನಿಯಂತ್ರಣ, ಕೊಲೆಸ್ಟರಾಲ್ ನಿಯಂತ್ರಣ, ಸರಾಗ ಉಸಿರಾಟದ ವ್ಯವಸ್ಥೆ ಪೂರೈಕೆ, ಆಹಾರದ ಪೂರೈಕೆ ಹಾಗೂ ಮಲಮೂತ್ರ ವಿಸರ್ಜನೆಗೆ ಅನುವು ಮಾಡಿಕೊಳ್ಳುವುದು.
ತಪಾಸಣೆ: ನಿಖರ ಕಾರಣಗಳ ಪತ್ತೆಕಾರ್ಯ – ಕೂಲಂಕುಷ ರಕ್ತ ತಪಾಸಣೆ, ಮೂತ್ರ ತಪಾಸಣೆ, ನರಗಳ ತಪಾಸಣೆ, ಮೆದುಳಿನ ಸ್ಕ್ಯಾನಿಂಗ್, ಆಂಜಿಯೋಗ್ರಾಮ್, ಎನ್ಸೆಫೆಲೋ ಡಾಪ್ಲರ್ ಸ್ಟಡಿ.
ಚಿಕಿತ್ಸೆ: ಮೆದುಳಿನ ಭಾಗದಲ್ಲಿ ರಕ್ತಹೆಪ್ಪುಗಟ್ಟಿರುವುದನ್ನು ನಿವಾರಿಸಿ ರಕ್ತಪರಿಚಲನೆಯನ್ನು ಸರಿಪಡಿಸುವುದು, ಮೆದುಳಿನಲ್ಲಿ ರಕ್ತಸ್ರಾವವುಂಟಾಗಿದ್ದಲ್ಲಿ ಅದನ್ನು ಹೀರಿಕೊಳ್ಳುವುದು ಹಾಗೂ ರಿಹೇಬಿಲಿಟೇಷನ್.
ಆಯುರ್ವೇದ ಚಿಕಿತ್ಸೆ: ಆಯುರ್ವೇದವು ಎರಡು ರೀತಿಯ ಚಿಕಿತ್ಸಾ ವಿದಾನವನ್ನನುಸರಿಸಿ ಚಿಕಿತ್ಸೆ ನೀಡಲಾಗುವುದು. ಮೊದ¯ನೆಯದಾಗಿ ಪ್ರಾರಂಬಿಕ ಹಂತದಲ್ಲಿ ಆತ್ಯಾಯಿಕ ಮರ್ಮ ಚಿಕಿತ್ಸೆ ಕೈಗೊಳ್ಳಲಾಗುವುದು. ಇದರಿಂದ ಪಕ್ಷಾಘಾತ ರೋಗಿಯಲ್ಲಿ ಶೀಘ್ರವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮೆದುಳಿನ ರಕ್ತನಾಳಗಳನ್ನು ವಿಕಸಿತವಾಗುವಂತೆ ಮಾಡಿ, ರಕ್ತಹೆಪ್ಪುಗಟ್ಟಿರುವುದನ್ನು ನಿವಾರಿಸಿ, ರಕ್ತಪೂರೈಕೆಯಾಗುವಂತೆ ಮಾಡಿ, ಮೆದುಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಇದರಿಂದ ಆ ವ್ಯಕ್ತಿಯಲ್ಲಿ ಮೆದುಳಿನ ಕ್ರೀಯಾಹಾನಿಯಾಗುವುದನ್ನು ನಿವಾರಿಸಲಾಗುತ್ತದೆ.
ದ್ವಿತೀಯ ರೀತ್ಯಾ ಚಿಕಿತ್ಸಾ ವಿಧಾನವು ನಿಶ್ಚೇತನಗೊಂಡ ಮೆದುಳು, ಸ್ವಾದೀನ ಕಳಕೊಂಡ ಅಂಗಾಂಗಗಳನ್ನು ಪುನಃ ಮೊದಲಿನಂತಾಗಿಸುವುದು ಹಾಗೂ ಆ ವ್ಯಕ್ತಿಯನ್ನು ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಶರೀರದ ಅಂಗಾಂಗಗಳಲ್ಲಿ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಲು ಪಂಚಕರ್ಮ ಅಗ್ನಿಚಿಕಿತ್ಸಾ, ವಿರೇಚನ, ಬಸ್ತಿ, ನಸ್ಯಕರ್ಮ, ರಸಾಯನ, ಅಭ್ಯಂಗ, ಪಿಂಡಸ್ವೇದ, ಫಿಝಿಚ್ಚಿಲ್ ಚಿಕಿತ್ಸೆಗಳನ್ನು ನೀಡಲಾಗುವುದು. ಪಕ್ಷಾಘಾತದಲ್ಲಿ ಪ್ರಯೋಗಿಸುವ ಔಷಧಿಗಳನ್ನು ಘೃತ ಸಂಸ್ಕರಿತ ರೂಪದಲ್ಲಿ ತಯಾರಿಸಲಾಗುವುದು. ಈ ವಿಧಾನದಲ್ಲಿ ಔಷಧಿಯ ಸತ್ವಗಳು ನ್ಯಾನೋ ಅಣುರೂಪದಲ್ಲಿ ಇರುತ್ತವೆ. ಈ ರೂಪದಲ್ಲಿರುವ ಔಷಧಿಗಳು ಶೀಘ್ರವಾಗಿ ರಕ್ತಗತವಾಗಿ ತ್ವರಿತವಾಗಿ ಮೆದುಳಿನ ಪೋಷಣೆಗೆ ದೊರೆಯುತ್ತದೆ. ಮಾಮೂಲಿ ಔಷಧಿಗಳು ಜೀರ್ಣಾಂಗವ್ಯೂಹದಲ್ಲಿ ಜೀರ್ಣಕ್ರೀಯೆಗೆ ಒಳಪಟ್ಟು, ಫಸ್ಟ್ಪಾಸ್ ಅಂದರೆ ಯಕೃತ್ನ ರೂಪಾಂತರ ಪ್ರಕ್ರಿಯೆಯ ನಂತರ ಜೀವಕೋಶಗಳಿಗೆ ಸಿಗುವುದರಿಂದ ರೋಗ ಶಮನ ಕ್ರೀಯೆ ನಿದಾನಗತಿಯದ್ದಾಗಿರುತ್ತದೆ. ಹೀಗೆ ಪಂಚಕರ್ಮ ಮರ್ಮ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ.
ತಡೆಗಟ್ಟುವಿಕೆ: ಒತ್ತಡ ನಿವಾರಣೆ, ಪರಿಶ್ರಮ, ವ್ಯಾಯಾಮ, ನಡಿಗೆ, ಯೋಗ, ಪ್ರಾಣಾಯಾಮ, ದ್ಯಾನ, ಯೋಗ್ಯ ನಿದ್ದೆ, ಋತು ಪಂಚಕರ್ಮ ಚಿಕಿತ್ಸೆ, ಜೀವನ ಶೈಲಿ ಬದಲಾವಣೆ.
ಡಾ. ಹರಿಪ್ರಸಾದ್ ಸುವರ್ಣ
ಸುವರ್ಣ ಕ್ಲಿನಿಕ್
ಅಳಕೆ, ಮಂಗಳೂರು
ಮೊ.: 9880238693
ಅಳದಂಗಡಿ, ಬೆಳ್ತಂಗಡಿ
ಮೊ.: 9449616356
email:suvarnaclini2014@gmail.com
Web: www.suvarnaclinic.com