ಸಂಧಿವಾತ ಕೀಲುನೋವಿಗೆ ಪರಿಣಾಮಕಾರಿ ಚಿಕಿತ್ಸೆ
ಇಂದಿನ ಆಧುನಿಕ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇವೆ. ಇಂದು ನಮ್ಮ ದೇಶದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಅನೇಕ ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿವೆ. ಯಾವ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗುತ್ತದೆ? ಯಾವ ಚಿಕಿತ್ಸೆ ಶ್ರೇಷ್ಟ? ಯಾವ ಔಷಧಿ ಶ್ರೇಷ್ಣ? ಎಂದು ಯಾವ ರೋಗಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇದರಿಂದ ಜನರಲ್ಲಿ ಅನೇಕ ಗೊಂದಲಗಳುಂಟಾಗುತ್ತಿವೆ. ಅನೇಕರು ತಮ್ಮ ಒಂದೇ ಕಾಯಿಲೆಗೆ ವೈದ್ಯರಿಂದ ವೈದ್ಯರಲ್ಲಿಗೆ ಅಲೆದಾಡುತ್ತಿರುತ್ತಾರೆ. ಅಲೋಪತಿ ಔಷಧಿ ಪಡೆದು ಗುಣಮುಖವಾಗದಿದ್ದರೆ, ಆಯುರ್ವೇದ ವೈದ್ಯರಲ್ಲಿ ಓಡುತ್ತಾರೆ. ಅಲ್ಲಿ ಗುಣಮುಖವಾಗದಿದ್ದರೆ ಯುನಾನಿ, ನಾಟಿ ವೈದ್ಯರನ್ನು ಕಾಣಲು ಓಡುತ್ತಾರೆ. ವೈದ್ಯರಿಂದ ವೈದ್ಯರಲ್ಲಿಗೆ ಅಲೆದು, ಅವರು ಕೊಡುವ ವಿವಿಧ ಔಷಧಿಗಳನ್ನು ಸೇವಿಸುತ್ತಾ, ವಿವಿಧ ಔಷಧಿಗಳ ಅಡ್ಡಪರಿಣಾಮದಿಂದ ದೇಹದ ಅನೇಕ ಅಂಗಗಳು ಡ್ಯಾಮೇಜ್ ಆಗಿ ಗುಣಪಡಿಸಲಾಗದಂತಹ ಸ್ಥಿತಿಗೆ ರೋಗಿ ತಲುಪುತ್ತಿದ್ದಾನೆ.
ಹೀಗಾಗಿಯೇ ನಮ್ಮ ದೇಶದಲ್ಲಿ ಬಿಪಿ, ಶುಗರ್, ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳು ಪ್ರತಿ ಮನೆಯಲ್ಲಿ ಒಬ್ಬರು ಇಬ್ಬರು ಕಾಣಸಿಗುತ್ತಾರೆ ಮತ್ತು ಈ ಸಂಖ್ಯೆ ಪ್ರತೀ ವರ್ಷ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ ವೈದ್ಯರಲ್ಲಿ ದೋಷವಿಲ್ಲ. ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ಒಬ್ಬ ರೋಗಿ ಅಲೋಪತಿಯಲ್ಲಿ ಸಂಪೂರ್ಣ ಗುಣಮುಖ ಹೊಂದಿದರೆ, ಮತ್ತೊಬ್ಬರು ಆಯುರ್ವೇದದಲ್ಲಿ ಗುಣಮುಖ ಹೊಂದಿರುತ್ತಾರೆ. ಇನ್ನೂ ಕೆಲವರು ನಾಟಿ ಔಷಧಿಯಿಂದ ಗುಣಮುಖ ಹೊಂದುತ್ತಾರೆ. ಅಲೋಪತಿಯಲ್ಲಿ, ಆಯುರ್ವೇದಲ್ಲಿ ಇತರೆ ಯಾವುದೇ ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ದೋಷವಿರುವುದು ಜನರ ಆಹಾರ ಕ್ರಮದಲ್ಲಿ ಮತ್ತು ಜೀವನ ಶೈಲಿಯಲ್ಲಿ. ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಯಾವುದೇ ವೈದ್ಯ, ಪದ್ಧತಿ ಅನುಸರಿಸಿದರೂ ಕಾಯಿಲೆ ವಾಸಿಯಾಗುವುದು 100% ಸತ್ಯ.
ಇಂದು ಬಿಪಿ ಶುಗರ್ನಂತೆ ಬಹಳಷ್ಟು ಜನರು ಸಂಧಿವಾತದ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಕಾಲುನೋವು, ಮೈ ಕೈ ನೋವು ಬೆನ್ನು ನೋವು ಎಂದು ಬಳಲುತ್ತಿರುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಪುರುಷರಲ್ಲೂ 30 ವರ್ಷ ವಯಸ್ಸಿನ ನಂತರ ಸಂಧಿವಾತದಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ. ಕುಳಿತುಕೊಳ್ಳಲು, ಮೇಲೇಳಲು, ನಡೆದಾಡಲು, ಮೆಟ್ಟಿಲು ಹತ್ತಲು ತುಂಬಾ ಕಷ್ಟವನ್ನನುಭವಿಸುತ್ತಿದ್ದಾರೆ.
ಸಂಧಿವಾತ ಎಂದರೇನು?
ನಮ್ಮ ಶರೀರದಲ್ಲಿ ನೋವು ಬರಲು ಪ್ರಮುಖ ಕಾರಣ ಅಧಿಕ ವಾತ ಅಥವಾ ವಾಯು. ನಾವು ಒಂದೇ ಬಾರಿಗೆ ಅತಿ ಆಹಾರ ಸೇವಿಸಿದಾಗ, ಹಸಿವೆಯಾಗದೆ ಆಹಾರ ಸೇವಿಸಿದಾಗ, ಪದೇ ಪದೇ ಆಹಾರ ಸೇವಿಸಿದಾಗ ಮತ್ತು ಎಣ್ಣೆಯಲ್ಲಿ ಕರಿದ ಉರಿದ ಆಹಾರ ಸೇವಿಸಿದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ಈ ಕೊಳೆತ ಆಹಾರ ಸಣ್ಣ ಕರುಳು ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿ ಕುಳಿತು ಸಮಯಕ್ಕೆ ಸರಿಯಾಗಿ ವಿಸರ್ಜನೆ ಆಗದೆ ವಾತ ಅಥವಾ ವಾಯು ಹೆಚ್ಚಳವಾಗುತ್ತದೆ. ಈ ಹೆಚ್ಚಾದ ವಾತವು ಶರೀರದ ಮೂಳೆಗಳ ಸಂಧಿಗಳಲ್ಲಿ ಸಂಗ್ರಹಗೊಗೊಂಡು ಅಲ್ಲಿನ ಮೃದುವಾದ ನೀರಿನಂಶ ಇರುವ ಭಾಗವನ್ನು ಒಣಗಿಸುತ್ತದೆ. ಇದರಿಂದ ಪ್ರಮುಖವಾಗಿ ಕೈ ಕಾಲು ಬೆರಳುಗಳ ಸಂಧಿಗಳಲ್ಲಿ ನೋವು ಹೆಚ್ಚಾಗಿ, ವ್ಯಕ್ತಿ ನಡೆಯಲು, ನಿಲ್ಲಲು, ಕುಳಿತುಕೊಳ್ಳಲು, ಮೆಟ್ಟಿಲು ಹತ್ತಲು, ದಿನನಿತ್ಯದ ಕೆಲಸಗಳನ್ನು ಮಾಡಲು ಅಸಮರ್ಥನಾಗುತ್ತಾನೆ. ಈ ರೀತಿ ವಾತ ಹೆಚ್ಚಳದಿಂದ ಶರೀರದ ಕೀಲುಗಳ ಸಂಧಿಗಳಲ್ಲಿ ನೋವು ಬರುತ್ತಿದ್ದಲ್ಲಿ ಅದನ್ನು ಸಂಧಿವಾತ, ವಾತರೋಗ, ಕೀಲು ನೋವು ಎಂದು ವಿವಿಧ ಹೆಸರುಗಳಿಂದ ಕರೆಯುತ್ತೇವೆ. ವಾತರೋಗದಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಆಸ್ಟಿಯೋ ಆರ್ಥರೈಟಿಸ್, ರುಮಟಾಯ್ಡ್ ಆರ್ಥರೈಟಿಸ್ ಅತಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.
ಸಂಧಿವಾತಕ್ಕೆ ಪ್ರಾಕೃತಿ ಚಿಕಿತ್ಸೆ
ನಮ್ಮ ಶರೀರದ ಎಲ್ಲಾ ನೋವುಗಳಿಗೂ ವಾತ ಅಥವಾ ವಾಯು ಪ್ರಮುಖ ಕಾರಣವಾಗಿದೆ. ಹಾಗೆಯೇ ಸಂಧಿವಾತದ ಎಲ್ಲಾ ವಿವಿಧ ರೀತಿಯ ಕಾಯಿಲೆಗಳಿಗೂ ಒಂದೇ ರೀತಿಯ ಎಲ್ಲರು ಸರಳವಾಗಿ ಅನುಸರಿಸುವಂತಹ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮತ್ತು ಸೂಕ್ತ ಚಿಕಿತ್ಸಾ ಪದ್ದತಿಯನ್ನು ಅನುಸರಿಸಬಹುದಾಗಿದೆ. ಈ ಚಿಕಿತ್ಸಾ ಪದ್ದತಿಯನ್ನು ಅನುಸರಿಸುವ ಮೂಲಕ ನಿಮ್ಮ ಸಂಧಿವಾತ ರೋಗವನ್ನು ಶೇ.100 ರಷ್ಟು ನಿಯಂತ್ರಣಕ್ಕೆ ತರಬಹುದಾಗಿದೆ. ಆ ಮೂಲಕ ಸಾಮಾನ್ಯ ಜೀವನ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದಾಗಿದೆ.
ಸಂಧಿವಾತಕ್ಕೆ ಅನುಸರಿಸಬೇಕಾದ ಆಹಾರ ಕ್ರಮ
• ಪ್ರತೀ ಬಾರಿ ಬಿಸಿ ಇರುವ ತಾಜಾ ಆಹಾರವನ್ನು ಸೇವಿಸಬೇಕು.
• ಯೂರಿಕ್ ಆಸಿಡ್ ಹೆಚ್ಚಿಸುವ ಆಹಾರವನ್ನು ಸಂಪೂರ್ಣ ಬಿಡಬೇಕು. ಮಾಂಸಹಾರ, ಬೇಕರಿ ಉತ್ಪನ್ನಗಳು, ಪ್ರೊಸೆಸ್ಡ್ ಪ್ಯಾಕ್ಡ್ ಫುಡ್, ಮಸಾಲೆ ಪದಾರ್ಥಗಳು, ಟೀ ಕಾಫಿ, ಸಕ್ಕರೆ, ಸಿಹಿ ಪದಾರ್ಥಗಳು, ದ್ವಿದಳ ಧಾನ್ಯಗಳು, ಮೈದಾ, ಎಣ್ಣೆಯಲ್ಲಿ ಕರಿದ ಹುರಿದ ಎಲ್ಲಾ ಆಹಾರಗಳು ಶರೀರದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತವೆ.
• ಅತೀ ಹುಳಿಯಾಗಿರುವ ಯಾವುದೇ ಆಹಾರ ಮತ್ತು ಹಣ್ಣುಗಳನ್ನು ಸೇವಿಸಬಾರದು.
• ಪೊಟ್ಯಾಷಿಯಂ ಅಧಿಕವಿರುವ ಆಹಾರ ಸೇವಿಸಬಾರದು. ಅಧಿಕ ಪೊಟ್ಯಾಸಿಯಮ್ನಿಂದ ರಕ್ತದಲ್ಲಿ ಕಲ್ಮಷ ಹೆಚ್ಚಳವಾಗುತ್ತದೆ. ಅಧಿಕ ಪೊಟ್ಯಾಸಿಯಮ್ ಇರುವ ಬಾಳೆಹಣ್ಣು, ಎಳೆನೀರು, ಕಿತ್ತಳೆ ಹಣ್ಣು, ಗೆಣಸು, ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಪಾಲಕ್, ಟೊಮೇಟೊ, ಬೆಂಡೆಕಾಯಿ, ಬದನೆಕಾಯಿ, ಇವುಗಳನ್ನು ಬಿಟ್ಟು ಉಳಿದ ಎಲ್ಲಾ ತರಕಾರಿಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು.. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲೂ ಅಧಿಕ ಪೊಟ್ಯಾಸಿಯಮ್ ಇರುತ್ತದೆ. ಮಿತ ಪ್ರಮಾಣದಲ್ಲಿ ಸೇವಿಸಬಹುದು.
• ಗೋದಿಯಿಂದ ತಯಾರಿಸಿದ ಚಪಾತಿ ಮತ್ತು ಉಪ್ಪಿಟ್ಟನ್ನು ಮಿತವಾಗಿ ಸೇವಿಸಬೇಕು. ಗೋಧಿಯಲ್ಲಿ ಗ್ಲುಟೆನ್ ಇರುತ್ತದೆ. ಕೆಲವರಿಗೆ ಗ್ಲುಟೆನ್ ಉಳ್ಳ ಆಹಾರಗಳು ಅಲರ್ಜಿಯನ್ನುಂಟು ಮಾಡುತ್ತವೆ. ಗ್ಲುಟೆನ್ ತಿಂದರೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
• ಹಣ್ಣು ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಹಸಿ ತರಕಾರಿ ಅಜೀರ್ಣವನ್ನುಂಟುಮಾಡುತ್ತವೆ. ಬೇಯಿಸಿ ರುಚಿಕರವಾದ ಪಲ್ಯ ಸಾಂಬಾರ್ ಮಾಡಿ ಸೇವಿಸಬಹುದು..
• ವಾತ ಹೆಚ್ಚಿಸುವ ಬೇಳೆ ಕಾಳು ಮತ್ತು ಸಿರಿಧಾನ್ಯಗಳನ್ನು ಸಂಪೂರ್ಣ ಬಿಡಬೇಕು. ತೊಗರಿ ಬೇಳೆ, ಕಡಲೆ ಬೇಳೆ, ಹೆಸರುಬೇಳೆ, ಬಟಾಣಿ, ಶೇಂಗ ಇತ್ಯಾದಿ ಧಾನ್ಯಗಳೆಲ್ಲವೂ ವಾತ ಅಥವಾ ವಾಯು ಪ್ರಕೋಪವನ್ನುಂಟು ಮಾಡುತ್ತವೆ.
ಸಂಧಿವಾತ ಕಾಯಿಲೆ ಇರುವವರಿಗಾಗಿ ವಿಶೇಷ 5 ಜೀವನ ಸೂತ್ರಗಳು
• ಹಸಿವಾದಾಗ ಮಾತ್ರ ಊಟ ಮಾಡಬೇಕು.
• ಪ್ರತಿ ದಿನ ಎರಡು ಬಾರಿ ಮಾತ್ರ ಊಟ ಮಾಡಬೇಕು. ಒಂದು ಒಂದು ಊಟವನ್ನು ತ್ಯಾಜಿಸಿ ಉಪವಾಸ ಮಾಡಬೇಕು.
• ಪ್ರತಿದಿನ 30 ನಿಮಿಷ ಸೂರ್ಯನ ಬಿಸಿಲಲ್ಲಿ ಕುಳಿತುಕೊಳ್ಳಬೇಕು.
• ಪ್ರತಿದಿನ 20 ನಿಮಿಷ ವಾಕಿಂಗ್ ಮಾಡಬೇಕು.
• ಪ್ರತಿ ದಿನ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು.
ಸಂಧಿವಾತ ಕೀಲುನೋವಿಗೆ ಅತ್ಯಂತ ಶ್ರೇಷ್ಠ ಪರಿಣಾಮಕಾರಿ ಔಷಧ Stomach Kare ಮತ್ತು Othro Care!
ನಿಮ್ಮ ಸಂಧಿವಾತ ಕೀಲುನೋವು ಯಾವುದೇ ಹಂತದಲ್ಲಿರಲಿ. ಮೇಲಿನ ಆಹಾರ ಪದ್ಧತಿಯೊಂದಿಗೆ ಅಲ್ಪ ಪ್ರಮಾಣದಲ್ಲಿ ಪರಿಣಾಮಕಾರಿ ಔಷದ ಸೇವಿಸಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಸಂಧಿವಾತ ಕೀಲುನೋವಿಗೆ Stomach Kare ಮತ್ತು Othro Care ಎಂಬ ಔಷಧವು ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಕ್ರಮಬದ್ಧ ಸೇವನೆಯಿಂದ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ. ಇತರೆ ಕಾಯಿಲೆಗಳಾದ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಅಲ್ಸರ್, ಹೈಬಿಪಿ, ಹೃದಯ ರೋಗ, ಚರ್ಮರೋಗ, ಕಿಡ್ನಿ ಲಿವರ್ ಕಾಯಿಲೆಗಳಲ್ಲೂ ಈ ಔಷಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಔಷಧವನ್ನು ಭೂಲೋಕದ ಸಂಜೀವಿನಿ ಎಂದೇ ಹೇಳಬಹುದು.
ಕ್ಯಾಶ್ ಆನ್ ಡೆಲಿವರಿ ಲಭ್ಯವಿದೆ.
9916022679 (ಸೂರ್ಯಕಾಂತ ಸಜ್ಜನ್)