ನೃತ್ಯ – ಆರೋಗ್ಯಕ್ಕೆ ಇದೊಂದು ಚಿಕಿತ್ಸಾ ವಿಧಾನ

 ನೃತ್ಯ – ಆರೋಗ್ಯಕ್ಕೆ ಇದೊಂದು ಚಿಕಿತ್ಸಾ ವಿಧಾನ. ಮಾನವನ ಸಂತಸ ಜೀವನಕ್ಕೆ ಆತ ಶಾರೀರಿಕವಾಗಿ ಆರೋಗ್ಯ ಹೊಂದಿರಬೇಕು. ಹಾಗೆಯೇ ಆರೋಗ್ಯ ಕಾಯಲು ನೃತ್ಯ ಒಂದು ಮಾರ್ಗ. 

ನೃತ್ಯ - ಆರೋಗ್ಯಕ್ಕೆ ಇದೊಂದು  ಚಿಕಿತ್ಸಾ ವಿಧಾನದೇಹ ಹಾಗೂ ಆತ್ಮಗಳಲ್ಲಿ ಹುದುಗಿಸಿದ ಭಾಷೆಯೇ ನೃತ್ಯ. ಅರ್ಥ, ವ್ಯಾಕರಣವಿರದ ಭಾಷೆಯೇ ನೃತ್ಯ. ಇದರ ತುಂಬ ನಮ್ಮೊಳಗಿರುವ ಭಾವನೆಗಳು, ಅನಿಸಿಕೆಗಳು ಇವೆ. ಇತರ ಜನರಿಗೆ ನಿಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಸಂವಹನದ ಮಾಧ್ಯಮ ಇದು. ಲಯಕ್ಕೆ ತಕ್ಕಂತೆ ಮಾಡಲಾಗುವ ದೇಹದ ಚಲನೆಗಳಲ್ಲಿ ಅರ್ಥ, ಸಂಕೇತ ಇದ್ದು, ಅವು ಬಾವನೆಗಳನ್ನು ನೋಡುಗರಿಗೆ ತಲುಪಿಸುತ್ತವೆ. ಇತಿಹಾಸದ ಪುಟಗಳಲ್ಲಿ ಮಾನವ ಜೀವನದ ಒಂದು ಅವಿಭಾಜ್ಯ ಕಲೆಯಾಗಿದೆ ನೃತ್ಯ. ನಮ್ಮ ದೇಶದಲ್ಲಿ ಭರತನ ನಾಟ್ಯಶಾಸ್ತ್ರದಲ್ಲಿ ನೃತ್ಯ ಹಾಗೂ ನಾಟಕದ ಎಲ್ಲ ವಿವರಗಳೂ ಲಭ್ಯ. ತಮಿಳುನಾಡಿನ ಭರತನಾಟ್ಯ, ಮಹಾರಾಷ್ಟ್ರದ ಲಾವಣಿ, ಕೇರಳದ ಕಥಕ್ಕಳಿ, ಕರ್ನಾಟಕದ ಯಕ್ಷಗಾನ- ದೊಡ್ಡಾಟ- ಸಣ್ಣಾಟ, ಕೃಷ್ಣಪಾರಿಜಾತ, ಗುಜರಾತ್‍ನ ಗರ್ಭಾ ಅಲ್ಲದೇ ಕೂಚುಪ್ಪುಡಿ, ಕಥಕ್, ಮಣಿಪುರಿ ನೃತ್ಯದ ವಿವಿಧ ಪ್ರಕಾರಗಳು.

ಮಾನವನ ಸಂತಸ ಜೀವನಕ್ಕೆ ಆತ ಶಾರೀರಿಕವಾಗಿ ಆರೋಗ್ಯ ಹೊಂದಿರಬೇಕು. ಹಾಗೆಯೇ ಆರೋಗ್ಯ ಕಾಯಲು ನೃತ್ಯ ಒಂದು ಮಾರ್ಗ. ಮಾನವ ಜನಾಂಗದ ಅಭಿವೃದ್ಧಿ ಪಥದಲ್ಲಿ ನೃತ್ಯ ಭಾವನೆಗಳನ್ನು ಹಾಗೂ ವಿಚಾರಗಳನ್ನು ವ್ಯಕ್ತಪಡಿಸುವ ಒಂದು ವಿಧಾನವಾಗಿತ್ತು. ಬರವಣಿಗೆ ಬರುವವರೆಗೆ ಸಂವಹನದ ಒಂದು ಮುಖ್ಯ ಭಾಗವಾಗಿತ್ತು.ವಿಶ್ವದಾದ್ಯಂತ ನೃತ್ಯವು ಒಂದು ದೃಶ್ಯ ಕಲೆ. ಲಿಂಗ, ವಯಸ್ಸು ಮೀರಿ ಇದೊಂದು ಹವ್ಯಾಸವಾಗಿದೆ. ಇದು ಸಾಂಸ್ಕತಿಕ, ಭಾವನಾತ್ಮಕ ಹಾಗೂ ದೈಹಿಕ ಅಭಿವ್ಯಕ್ತತೆ. ಇದರಿಂದ ನರ್ತಿಸುವವರು ಹಾಗೂ ಪ್ರೇಕ್ಷಕರು ಇಬ್ಬರೂ ಆನಂದಾನುಭವ ಹೊಂದುತ್ತಾರೆ. ವಿಶ್ವ ಸಂಸ್ಥೆಯ, ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕತಿಕ ಸಂಘದ, ಪಾಲುದಾರ ಸ್ವಯಂ ಸೇವಾ ಸಂಘವಾದ, ಅಂತರ್‍ರಾಷ್ಟ್ರೀಯ ನೃತ್ಯ ಪರಿಷತ್ತು, 1982ರಿಂದ ಪ್ರತೀ ವರ್ಷ ಏಪ್ರಿಲ್ 29ರಂದು ವಿಶ್ವ ನೃತ್ಯ ದಿನಾಚರಣೆ ಆಚರಿಸುತ್ತಿದೆ.

ಆರೋಗ್ಯಕ್ಕೆ ಇದೊಂದು ನೃತ್ಯ ಚಿಕಿತ್ಸಾ ವಿಧಾನ:

dance and healthನಿಮ್ಮ ಮನಸ್ಥಿತಿಯನ್ನು ದುಃಖದಿಂದ, ಸಂತಸದತ್ತ, ಕ್ರೋಧದಿಂದ ಶಾಂತತೆಯತ್ತ ತಿರುಗಿಸುವ ಒಂದು ಮಾಯಾಶಕ್ತಿ ನೃತ್ಯದಲ್ಲಿದೆ.  ಒತ್ತಡ, ಉದ್ವೇಗ, ದೂರ ಮಾಡಿ ನಿಮ್ಮನ್ನು ಶಕ್ತಿವಂತರನ್ನಾಗಿ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೆ ಇದೊಂದು ಚಿಕಿತ್ಸಾ ವಿಧಾನವಾಗಿದೆ. ತೂಕ ಇಳಿಸಿ  ಆಕರ್ಷಕ ದೃಹಿಕ ಸೌಂದರ್ಯ ತಂದು, ನಿಮ್ಮ ಹೃದಯ ಹಾಗೂ ರಕ್ತನಾಳಗಳಿಗೆ ಕಾಹಿಲೆಗಳು ಬರುವ ಸಾಧ್ಯತೆ ಕಡಿಮೆ ಮಾಡುತ್ತದೆ. ಪ್ರಪಂಚದ ವಿವಿಧ ಸಂಸ್ಕತಿಗಳಲ್ಲಿ ನೃತ್ಯ ಒಂದು ಕಲಾರೂಪವಾಗಿರುವುದಲ್ಲದೇ, ಸಂವಹನದ ಒಂದು ವಿಧಾನವೂ ಆಗಿದೆ. ನಮ್ಮ ದೇಶದಲ್ಲಿ 64 ಕಲೆಗಳಲ್ಲಿ ನೃತ್ಯವೂ ಒಂದಾಗಿದ್ದು, ನಟರಾಜ, ಪಾರ್ವತಿ, ನೃತ್ಯದಲ್ಲಿ ತಾಂಡವ ಹಾಗೂ ಲಾಸ್ಯ ನೃತ್ಯಗಳಿಗೆ ಖ್ಯಾತರು. ಮಹಾಭಾರತದ ಅರ್ಜುನ, ನೃತ್ಯ ಸೇರಿದಂತೆ 64 ಕಲೆಗಳಲ್ಲೂ ಪ್ರವೀಣನಾಗಿದ್ದನಂತೆ. ಹಿಂದೆ ರಾಜಕುಮಾರರು, ಶ್ರೀಮಂತರ ಮಕ್ಕಳಿಗೆ, ನೃತ್ಯ ಶಿಕ್ಷಣವೂ ಸಿಗುತ್ತಿತ್ತು. ಆದರೆ ಹಿಂದೆ ಇದು ದೇವಸ್ಥಾನಗಳ ದೇವದಾಸಿಯರ, ವೇಶ್ಯೆಯರ ಕಲೆ ಎಂಬ ಮಾತಿತ್ತು. ಆದರೆ ಇಂದು, ಸ್ವಲ್ಪ ಸಮಯ, ಹಣದ, ಪಾಲಕರ ಬೆಂಬಲ ಇದ್ದವರು, ಆಸೆಪಟ್ಟು ನೃತ್ಯ ಕಲಿಯುತ್ತಿದ್ದಾರೆ. ಅದರೆ, ಇವರ ಆಸಕ್ತಿ ತಮ್ಮ ಅರಂಗೇಟ್ರಂ (ರಂಗಪ್ರವೇಶ), ವೇದಿಕೆಯ ಪ್ರದರ್ಶನ, ಟಿ.ವಿ ಚಾನಲ್‍ಗಳ ಅವಕಾಶಗಳತ್ತ, ಕೇಂದ್ರಿಕೃತವಾಗದೆಯೇ ಹೊರತು, ಕಲೆಯ ಸಂಪೂರ್ಣ ಕಲಿಕೆ, ಸಾಕ್ಷಾತ್ಕಾರ, ಸಾಧನೆಗಳತ್ತ, ಖಂಡಿತ ಇಲ್ಲ.

ನನಗೆ 10 ವರ್ಷವಿದ್ದಾಗ, ರಮಾವಿಲಾಸ ರಸ್ತೆಯಲ್ಲಿ, ನನ್ನ ತಂಗಿ ವೀಣಾಳನ್ನು ನೃತ್ಯ ಶಿಕ್ಷಣಕ್ಕೆ ಕರೆದೊಯ್ಯತ್ತಿದ್ದಾಗ, ಆಕೆಯ ಗುರುಗಳು ಹೇಳಿ ಕೊಡುತ್ತಿದ್ದ, ಸುಪ್ರಭಾತ, ಅಲರಿಪು, ಪೂಜಾ ನೃತ್ಯಗಳ ನೆನಪು, ನನಗಿನ್ನೂ ಹಸಿರಾಗಿದೆ. ಎಲ್ಲ ಪೂರಕ ಕಲೆಗಳನ್ನೂ ಸೇರಿಸಿಕೊಂಡು, ನೃತ್ಯಕಲೆಯ ಸಮಗ್ರ ಪ್ರದರ್ಶನವಾಗಬೇಕು. ಒಂದು ಶತಮಾನದ ಹಿಂದೆ, ಖ್ಯಾತ ರಶಿಯಾ ಸಂಘಟಕ, ಸೆರ್ಜಿ ಡಯಾಘಿಲಾವ್, ಬ್ಯಾಲೇ ನೃತ್ಯದಲ್ಲಿ ಒಂದು ಕ್ರಾಂತಿ ಮಾಡಿದ. ತನ್ನ ಕಾಲದ ಅತ್ಯಂತ ಪ್ರತಿಭಾನ್ವಿತ ಚಿತ್ರಕಾರರು, ಸಂಗೀರಗಾರರನ್ನು ಆಹ್ವಾನಿಸಿ, ಒಟ್ಟೂ ಪ್ರದರ್ಶನ ಮಾಡಿದ, ಇಂದಿನ ನೃತ್ಯಸಂಯೋಜಕರು ಇತರ ಕಲೆಗಳನ್ನು ಅಲಕ್ಷಿಸುತ್ತಿದ್ದಾರೆ. ಚಿತ್ರಕಲೆ, ಶಿಲ್ಪಕಲೆ, ನಾಟಕ, ಸಂಗೀತ, ಕಾವ್ಯ, ವಾಸ್ತುಶಿಲ್ಪ, ಛಾಯಾಗ್ರಹಣ, ಚಲನಚಿತ್ರ ಬಹುಮಾಧ್ಯಮ, ಬೆಳಕು, ಶಬ್ದ, ಇವೆಲ್ಲವುಗಳನ್ನು ನೃತ್ಯದಲ್ಲಿ ಅಳವಡಿಸಿದರೆ, ಅಧ್ಬುತ ಪ್ರಯೋಗ ಆಗುತ್ತದೆ. ಕಥೆ ಹೇಳುವುದು, ಯುದ್ಧದ ಕಲೆಗಳು, ಇವುಗಳೊಂದಿಗೆ ಮಾನವ ಶಾಸ್ತ್ರಗಳಾದ ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ ಹಾಗೂ ಭಾಷಾ ಶಾಸ್ತ್ರಗಳನ್ನು ಸಂಯೋಜಿಸಿದರೆ, ನೃತ್ಯ ಅಮೋಘವಾಗಬಲ್ಲದು. ಹಿಂದೆ ಗ್ರೀಕರು ಇವೆಲ್ಲವನ್ನೂ ಅಳವಡಿಸಿ, ರಂಗಪ್ರವೇಶ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ, ನಮ್ಮ ದೇಶದ ವಿವಿಧ ಕಲೆಗಳು, ಒಂದಕ್ಕೊಂದು ಪೂರಕವಾಗಿದ್ದನ್ನು, ಹಿಂದಿನಿಂದ ಕಂಡಿದ್ದೇವೆ. ಶಾಸ್ತ್ರೀಯ ಸಂಗೀತ, ದೇವರನಾಮ, ವಚನಗಳು, ಲಘು ಜಾನಪದ, ಸಂಗೀತ, ಇವುಗಳೊಂದಿಗೆ ನೃತ್ಯ ಸಾಹಿತ್ಯ ಭಾವ, ರಸ ಒಂದಾಗಿವೆ. ಹಿಂದಿನಿಂದ ರಾಜರ ಆಶ್ರಯದಲ್ಲಿ, ಸಂಸ್ಥಾನಗಳಲ್ಲಿ, ಕಲಾವಿದರ ಗಾಯನ, ವಾದ್ಯವಾದನಗಳಿಗೆ ನೃತ್ಯಗಾಗಾರರು ಹೆಜ್ಜೆ ಹಾಕುತ್ತಿದ್ದಾರೆ. ತ.ರಾ.ಸು ಅವರ ಹಂಸಗೀತೆ ಕಾದಂಬರಿಯಲ್ಲಿ, ಅ.ನ.ಕೃ ಅವರ ಅನೇಕ ಕಾದಂಬರಿಗಳಲ್ಲಿ, ನೃತ್ಯ, ಸಂಗೀತ ಹಾಸು ಹೊಕ್ಕಾಗಿವೆ.

ನೃತ್ಯ ಕಲಾವಿದರಲ್ಲಿ, ಚಲನಚಿತ್ರ ಕಲಾವಿದ- ನೃತ್ಯಗಾರರಾದ, ಗೋಪೀಕೃಷ್ಣ, ಸಂಧ್ಯಾ, ಶ್ರೀಧರ, ದಂಪತಿಗಳು, ಸಂಜಯ, ಕಮಲಾ ಲಕ್ಷಣ, ಪದ್ಮಿನಿ- ರಾಗಿಣಿ ಸೋದರಿಯರು, ವೈಜಯಂತಿಮಾಲಾ, ಕೆಲವು ಹೆಸರುಗಳು. ಮೈಸೂರಿನ ವೆಂಕಟಲಕ್ಷ್ಮಮ್ಮ, ವಸುಂಧರಾ ದೊರೈಸ್ವಾಮಿ, ನಂದಿನಿ ಈಶ್ವರ್, ವಿಜಯಅಶ್ವಥ್, ನೃತ್ಯಗಾತಿ ಹಾಗೂ ಶಿಕ್ಷಕರಾಗಿ, ನೃತ್ಯ ಪರಂಪರೆ ಬೆಳಸಿದವರು. ಕೃಷ್ಣಮೂರ್ತಿ ಪೌರಾಣಿಕ ಅವರ ಸನಾದಿ ಅಪ್ಪಣ್ಣ ಕಾದಂಬರಿ ಹಾಗೂ ಇದನ್ನಾಧರಿಸಿದ ಚಿತ್ರದಲ್ಲಿ, ಡಾ. ರಾಜ್ ಹಾಗೂ ಜಯಪ್ರದಾ ಅಭಿನಯದಲ್ಲಿ, ಶಹನಾಯಿ ಹಾಗೂ ನೃತ್ಯದ, ಕರೆದರೂ ಕೇಳದೇ ಹಾಡು ಮರೆಯಲಾದೀತೇ?  ತಮಿಳಿನ ತಿಲ್ಲಾನ ಮೋಹನಾಂಬಾಳ್ ಚಿತ್ರದಲ್ಲಿ, ನಾದಸ್ವರ ಹಾಗೂ ನೃತ್ಯದ ಕಲಾಕಾರ ಜೋಡಿಯಾಗಿ, ಶಿವಾಜಿ ಗಣೇಶನ್- ಪದ್ಮಿನಿ ಅಭಿನಯಿಸಿದ್ದರು. ಬಹು ಹಿಂದೆ ಮೊಘಲ್ ಏ ಆಜಂ ಚಿತ್ರದಲ್ಲಿ, ಮಧುಬಾಲಾ – ಅನಾರ್‍ಕಲಿಯಾಗಿ, ಶೀಶ ಮಹಲಿನಲ್ಲಿ ನರ್ತಿಸಿದ ದೃಶ್ಯ ಅಮೋಘ. ಸಾವಿರಾರು ಪುಟ್ಟ ಕನ್ನಡಿಗಳಲ್ಲಿ ಸ್ವಷ್ಟ ಚಿತ್ರಣವಾಗಲು, ಪರಿಪೂರ್ಣ ದೃಶ್ಯವಾಗಲು, ನಿರ್ದೇಶಕರು, ಛಾಯಾಗ್ರಾಹಕರು, ಆಗ ಮಾಡಿದ ಪ್ರಯತ್ನ ಒಂದು ಸಾಧನೆಯಾಗಿದೆ.

dance in filmsಇದರಂತೆಯೆ ವಿ.ಶಾಂತಾರಾಂ ನಿರ್ದೇಶನದ ನವರಂಗ್, ಝಣಕ್ ಝಣಕ್ ಪಾಯಲ್ ಬಾಜೆ, ದೋ ಆಂಖೆ ಬಾರಾ ಹಾಥ್, ಜಲ್ ಬಿನ್ ಮಚಲಿ ನೃತ್ಯ ಬಿನ್ ಬಿಜಲಿ, ಮುಂತಾದ ಚಿತ್ರಗಳಲ್ಲಿ ಸಂಧ್ಯಾ ಮಾಡಿದ ನೃತ್ಯಗಳು ಅದರ ಗೀತ ಸಾಹಿತ್ಯ ಸಂಗೀತ, ನೃತ್ಯ ನಿರ್ದೇಶನ, ಛಾಯಾಗ್ರಹಣ, ಹಾಗೂ ನಿರ್ದೇಶನ ಮರೆಯಲಾಗದ್ದು.ನೃತ್ಯದ ಬಗ್ಗೆ, ಶಾಂತಲೆಯ ಬಗ್ಗೆ ಸಮೇತನಹಳ್ಳಿ ರಾಮರಾಯರು ಬರೆದ 2 ಕಾದಂಬರಿಗಳ ನಾಟಕ ರೂಪವನ್ನು, 1987- 88ರ ಅವಧಿಯಲ್ಲಿ, ಮೈಸೂರು ಆಕಾಶವಾಣಿಯಿಂದ, ತಲಾ 90 ನಿಮಿಷ ಅವಧಿಗೆ, ನಿರ್ದೇಶನ ನಿರ್ಮಾಣ ಮಾಡಿದ, ಅಭಿಮಾನ ಅನುಭವ ನನ್ನದು. ರೇಡಿಯೋ ನಾಟಕವಾದರೂ, ನೃತ್ಯದ ಶಾಸ್ತ್ರೀಯ, ಜಾನಪದ, ಲಘು ಪ್ರಕಾರಗಳು, ಭರತನಾಟ್ಯ ಕೂಚುಪುಡಿ, ಮೋಹಿನಿಯಾಟ್ಟಂ ನೃತ್ಯಗಳ ದೃಶ್ಯಗಳನ್ನು, ರೇಡಿಯೋ ಪಿಕ್ಚರ್ ತರಹ ಧ್ವನಿಮುದ್ರಿಸಿದ್ದೆ. ವಿಶೇಷವೆಂದರೆ ಇಡೀ ನಾಟಕಕ್ಕೆ ನೃತ್ಯ, ನಟುವಾಂಗ, ಹಾಗೂ ನೃತ್ಯ ಸಂಗೀತದ ಹಿನ್ನೆಲೆಗಾಗಿ, ಖ್ಯಾತ ನೃತ್ಯಗಾರ್ತಿ ವಸುಂಧರಾ ದೊರೈಸ್ವಾಮಿ ಅವರನ್ನು, ಆಕಾಶವಾಣಿ studio ದಲ್ಲಿ ನರ್ತಿಸಲು ಹೇಳಿದ್ದೆ.

ಏಕಾಂಗಿತನ ಓಡಿಸಲು, ಕಾಯುವಿಕೆ, ನೋವು ನಿವಾರಿಸಲು, ಬೆಳಕು ಕೊಡಲು, ಹೆದರಿಕೆ ಓಡಿಸಲು ಮತ್ತೆ ಮತ್ತೆ ಕುಣಿಯಿರಿ. ಎಲ್ಲ ಕಾಲಕ್ಕೆ ಉಳಿದಿರುವ ಇದೊಂದು ವಿಶ್ವ ಜ್ಞಾನ. ಶ್ರೀಮಂತ ಹಾಗೂ ವಿಭಿನ್ನ ಸಂಪ್ರದಾಯಗಳಲ್ಲಿಯ ಬಹಳಷ್ಟು ಸಾಮ್ಯಗಳನ್ನು ಒಗ್ಗೂಡಿಸಲು ಜನರ ನಡುವಿನ ಒಕ್ಕೂಟ ಇಲ್ಲಿವೆ. ನೃತ್ಯ ಜೀವನದ ಕಲೆ, ಕವಿತೆ, ಭರವಸೆ. ಕುಣಿತದ ಮೊದಲ ಅಭಿವ್ಯಕ್ತಿ ಪ್ರಾರ್ಥನೆ. ಪ್ರಾರ್ಥನೆಯ ಚಲನೆ ಹಾಗೂ ಭಂಗಿಗಳು ಆಧ್ಯಾತ್ಮಿಕ ನೃತ್ಯವಾದವು. ಆಧುನಿಕ ಕಾಲ ಹಾಗೂ ವಿದೇಶಿಯರ ಆಗಮನದಿಂದ ಶಾಸ್ತ್ರೀಯ ಬ್ಯಾಲೆ, ಸಮಕಾಲೀನ ನೃತ್ಯ ಪದ್ಧತಿಗಳು ಬಂದವು. ಸಾಧಾರಣ ಗ್ರಾಮೀಣ ಆಚರಣೆಗಳಿಂದ ವೃತ್ತಿಪರತೆ ಹಾಗೂ ರಂಗಭೂಮಿಗೆ ನೃತ್ಯ ಬಂದವು. ನೃತ್ಯ ಕೇವಲ ಭಾವನೆಗಳ ಅಭಿವ್ಯಕ್ತತೆಯಲ್ಲ, ಆಚರಣೆಯಲ್ಲ, ಮನರಂಜನೆಯಲ್ಲ. ನಾವೆಲ್ಲ ಒಂದು ಎಂದು, ಮಾತಿಗಿಂತ ನಿರರ್ಗಳವಾಗಿ ವ್ಯಕ್ತಪಡಿಸುವ ಹೇಳಿಕೆಯೇ ನೃತ್ಯ.

ಸಹನೆ, ತಾಳ್ಮೆ ಹಾಗೂ ಪರಸ್ಪರ ಅರಿಯಲು ಸಮಕಾಲೀನ ನೃತ್ಯ ವಿನಿಮಯ, ಅನುವು ಮಾಡಿಕೊಡಲಿದೆ. ನೃತ್ಯದ ಎಲ್ಲ ವಸ್ತುಗಳು ಸೇರಿ ನಿರೂಪಣೆ ಸೃಷ್ಟಿಯಾಗುತ್ತದೆ. ನೃತ್ಯ ನಿರೂಪಣೆ, ಗಾತ್ರ, ಸೊಬಗು, ಸ್ಫೋಟಕ ಶಕ್ತಿಯ ಬಳಕೆ, ಚಲನೆಯ ಸಂಶೋಧನೆ, ಸಂಘಟನೆ ಹಾಗೂ ರಚನೆ, ನಮ್ಮತ್ತ ನಾವೇ ನಗುವುದು, ಕ್ರಿಯಾಶೀಲತೆ ಹೆಚ್ಚು ಹಾಗೂ ಕಡಿಮೆ ಹೇಳಿಕೆ, ಖುಷಿ ಹಾಗೂ ಪ್ರಯತ್ನ, ಪ್ರತಿ ನೃತ್ಯಕಾರನ ಹುಚ್ಚುತನ ಭಾವೋದ್ವೇಗ, ಕಲ್ಪನಾಶಕ್ತಿ ಎಲ್ಲ ಸೇರಿ, ನೃತ್ಯ ಸ್ಪಷ್ಟವಾದ ಒಂದು ರೂಪ ಪಡೆಯುತ್ತದೆ. ನರ್ತಿಸುವವರು ಚರ್ಮ ದಾಟ ಇನ್ನೊಬ್ಬರನ್ನು ಸ್ಪರ್ಶಿಸುತ್ತದೆ. ನೃತ್ಯ ಅವರ ತೂಕ ಹಾಗೂ ವಾಸನೆ ಮುಟ್ಟುತ್ತದೆ. ಸ್ಪರ್ಶಜ್ಞಾನದ ಪರದೆ ಸೋಲಿಸಿ, ದೇಹಗಳು ಹಾಗೂ ದೇಶಗಳ ನಡುವಿನ ಸೀಮೆ ಅಳಿಸುತ್ತದೆ. .

ಎನ್.ವ್ಹಿ ರಮೇಶ್, ಮೈಸೂರು ಮೊ: 9845565238

ಎನ್.ವ್ಹಿ ರಮೇಶ್, ಮೈಸೂರು
ಮೊ: 9845565238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!