ವಿದ್ಯುತ್ ಅಪಘಾತ ಮತ್ತು ತುರ್ತು ನಿರ್ವಹಣೆ

  • ಪುಟ್ಟ ಮಕ್ಕಳು ಅಗಾಗ ಕಡಿಮೆ ವೋಲ್ಟೇಜ್ ವಿದ್ಯುತ್ ಆಘಾತಕ್ಕೆ ಒಳಗಾಗುತ್ತಾರೆ.
  • ವಿದ್ಯುತ್ ವೈರ್‍ಗಳನ್ನು ಬಾಯಿಂದ ಕಡಿಯುವ ಮೂಲಕ
  • ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ
  • ಎಲೆಕ್ಟ್ರಿಕಲ್ ಪವರ್ ಪಾಯಿಂಟ್‍ಗೆ ವಸ್ತುಗಳನ್ನು ತೂರಿಸುವ ಮೂಲಕ

ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಬೇಕು :

ಮಾಡಬೇಕಾದುದು

  • ವೈದ್ಯಕೀಯ ಸಹಾಯಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಭರವಸೆ ನೀಡಬೇಕು.
  • ಬಟ್ಟೆಗಳನ್ನು ತೆಗದುಹಾಕುವ ಮೂಲಕ ಬೆಂಕಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಹಾಗೂ ಸುಟ್ಟಗಾಯದ ನೋವು-ಉರಿಯನ್ನು ಕಡಿಮೆಗೊಳಿಸಬೇಕು.
  • ಗಾಯಾಳುವನ್ನು ನೆಲದ ಮೇಲೆ ಉರುಳಿಸುವ ಮೂಲಕ ಅಥವಾ ಒಂದು ಹೊದಿಕೆ ಹಾಕುವ ಮೂಲಕ ಬೆಂಕಿಯನ್ನು ನಂದಿಸಬೇಕು.
  • ಸ್ವಚ್ಚ ಬಟ್ಟೆ ಅಥವಾ ಹಾಳೆಯಲ್ಲಿ ಸುತ್ತಿ ಸೂಕ್ತ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ತಕ್ಷಣ ಕರೆದೊಯ್ಯಬೇಕು.
  • ಗಂಭೀರ ಸ್ವರೂಪದ ಸುಟ್ಟಗಾಯಗಳಿಗಾಗಿ ತಕ್ಷಣ ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ವಾಹನಗಳ ನೆರವಿಗಾಗಿ ಕರೆ ಮಾಡಬೇಕು.
  • ಗಾಯಾಳುವಿನ ಆರೋಗ್ಯ ಸ್ಥಿತಿಯನ್ನು ಅಗಾಗ ತಪಾಸಣೆ ಮಾಡುತ್ತಿರಬೇಕು.
  • ರಕ್ತಸ್ರಾವ ನಿಲ್ಲಿಸಲು ನೇರ ಒತ್ತಡವನ್ನು ಬಳಸಬೇಕು.
  • ರೋಗಿಯ ಉಸಿರಾಟದ ಮಾರ್ಗವು ಸುಗಮವಾಗಿವೆಯೇ ಎಂಬುದನ್ನು ಪರೀಕ್ಷಿಸಬೇಕು.
  • ನಾಡಿ ಬಡಿತ ಅಥವಾ ಉಸಿರಾಟಕ್ಕೆ ತೊಂದರೆಯಾಗಿದ್ದರೆ ಸಿಪಿಆರ್ (ಕಾರ್ಡಿಯೋ-ಪಲ್ಮೋನರಿ ರಿಸಸ್‍ಸಿಟೇಷನ್) ಆರಂಭಿಸಬೇಕು.
  • ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಲ್ಯಾಟೆಕ್ಸ್ ಕೈಗವುಸುಗಳನ್ನು ಬಳಸಬೇಕು.
  • ಗಾಯಾಳುಗಳನ್ನು ಶಾಕ್ ವಾರ್ಮ್‍ನಲ್ಲಿ (ಬ್ಲಾಂಕೆಟ್ ಇತ್ಯಾದಿ ಬಳಕೆ) ಇಡಬೇಕು.
  • ಮುಂಡದ ಮೇಲ್ಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ತಲೆಯನ್ನು ಎತ್ತಬೇಕು.
  • ಮುಂಡದ ಕೆಳಭಾಗದ ಸ್ಥಳದಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಪಾದವನ್ನು ಎತ್ತಬೇಕು.
  • ಶುದ್ಧ ನೀರಿನೊಂದಿಗೆ ಎಲ್ಲ ಗಾಯಗಳು ಮತ್ತು ರಾಸಾಯನಿಕ ಸುಟ್ಟಗಾಯಗಳನ್ನು ತೊಳೆಯಬೇಕು.
  • ರಾಸಾಯನಿಕ ಸೇವನೆಯಾಗಿದ್ದರೆ ವಿಷ ನಿಯಂತ್ರಣ ಕೇಂದ್ರದ ವೈದ್ಯಕೀಯ ಸಿಬ್ಬಂದಿಯ ನೆರವನ್ನು ಪಡೆಯಬೇಕು.

ಮಾಡಬಾರದುದು

  • Vidyut-apaghataನಿಮ್ಮದೇ ಆದ ಸುರಕ್ಷತೆ ಖಾತರಿಯಾಗುವುದಕ್ಕೂ ಮುನ್ನ ಪ್ರಥಮ ಚಿಕಿತ್ಸೆ ಆರಂಭಿಸಬಾರದು (ವಿದ್ಯುತ್ ಪ್ರವಾಹವನ್ನು ಸ್ವಿಚ್ ಆಫ್ ಮಾಡಬೇಕು ಅಥವಾ ರಾಸಾಯನಿ ಸುಟ್ಟ ಗಾಯದೊಂದಿಗೆ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವಾಗ ಗ್ಲೌಸುಗಳನ್ನು ಹಾಕಿಕೊಳ್ಳಬೇಕು)/
  • ಸುಟ್ಟ ಗಾಯಗಳ ಮೇಲೆ ಪೇಸ್ಟ್, ಆಯಿಲ್, ಅರಿಶಿಣ ಅಥವಾ ಕಚ್ಚಾ ಹತ್ತಿಯನ್ನು ಲೇಪಿಸಬಾರದು.
  • ಮಂಜುಗಡ್ಡೆಯನ್ನು ಹಾಕಬಾರದು, ಏಕೆಂದರೆ ಅದು ಗಾಯವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುತ್ತದೆ.
  • ದೀರ್ಘಕಾಲ ನೀರಿನಲ್ಲಿ ಇರುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಹೈಪೋಥರ್ಮಿಯಾಗೆ (ಲಘೂಷ್ಣತೆ) ಎಡೆ ಮಾಡಿಕೊಡುತ್ತದೆ.
  • ವೈದ್ಯರಿಂದ ಆಂಟಿಮೈಕ್ರೋಬಿಯಾಲ್‍ಗಳನ್ನು ಲೇಪಿಸುವ ತನಕ ಬೊಕ್ಕೆಗಳು ಅಥವಾ ಬೊಬ್ಬೆಗಳನ್ನು ತೆರೆಯಬಾರದು.
  • ಯಾವುದೇ ವಸ್ತುವನ್ನು ಗಾಯಕ್ಕೆ ನೇರವಾಗಿ ಲೇಪಿಸಬಾರದು, ಏಕೆಂದರೆ ಅದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಸೂಕ್ತ ವೈದ್ಯಕೀಯ ಆರೈಕೆಯಲ್ಲಿ ರೋಗಿಯನ್ನು ಇರಿಸುವ ತನಕ ಸ್ಥಳೀಯ ಔಷಧಿಗಳನ್ನು ತಪ್ಪಿಸಬೇಕು.
  • ತೀರಾ ಅಗತ್ಯವಿರದ ಹೊರತು ಗಾಯಾಳುವನ್ನು ಸ್ಥಳಾಂತರಿಸಬಾರದು.
  • “ಬೆನ್ನುಹುರಿ ಗಾಯ”ವನ್ನು ಯಾವಾಗಲೂ ಶಂಕಿಸಿಬೇಕು-ಗಾಯಾಳುವನ್ನು ಸ್ಥಳಾಂತರಿಸಬಾರದು.
  • ಮೂಳೆ ಮುರಿತ ಅಥವಾ ಮುರಿದಿರುವಿಕೆಯನ್ನು ಕೂಡಿಸಲು ಪ್ರಯತ್ನಿಸಬಾರದು-ಅಂಥ ಸಂದರ್ಭದಲ್ಲಿ ರೋಗಿಯನ್ನು ಚಲನರಹಿತವಾಗಿರಿಸಬೇಕು.
  • ರಕ್ತಬಂಧಕವನ್ನು ಅನ್ವಯಿಸಬಾರದು-ರಕ್ತ ನಿಲುಗಡೆಗೆ ‘ನೇರ’ ಒತ್ತಡ ಮಾತ್ರ ಹಾಕಬೇಕು.
  • ಕಣ್ಣಿನಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ತೆಗೆಯಬಾರದು-ಡಿಕ್ಸಿ ಕಪ್‍ನಿಂದ ಕಣ್ಣನ್ನು ಮುಚ್ಚಬೇಕು.
  • ಸುಟ್ಟಗಾಯಗಳ ಮುಲಾಮು ಅಥವಾ ಆಯಿಂಟ್‍ಮೆಂಟ್‍ಗಳನ್ನು ಬಳಸಬಾರದು. ಇದು ಗಾಯದ ಆಳ ಮತ್ತು ಸುಟ್ಟ ಗಾಯಗಳ ವಿಸ್ತರಣೆಯ ಬಗ್ಗೆ ತಪ್ಪು ಮೌಲ್ಯಮಾಪನಕ್ಕೆ ಎಡೆ ಮಾಡಿಕೊಡಬಹುದು.
  • ತಕ್ಷಣ ವೈದ್ಯಕೀಯ ಸಿಬ್ಬಂದಿ ಅಥವಾ ರಕ್ಷಣಾ ವಾಹನಗಳನ್ನು ಕರೆಯಲು ಹಿಂದುಮುಂದು ನೋಡಬಾರದು.

ಡಾ.ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4      ಮೊ.: 97422 74849

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!