ಸೋರಿಯಾಸಿಸ್ – ನೀವು ಏನನ್ನು ತಿಳಿದಿರಬೇಕು?

ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ, ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ ಈ ಸ್ಥಿತಿಯಲ್ಲಿ ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಚರ್ಮವಿರುವ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಚರ್ಮರೋಗದಿಂದ ಬಹಳಷ್ಟು ಪ್ರಮಾಣದ ಜಾಗದಲ್ಲಿ ಹಬ್ಬಿರುವ ಅಚಿದರೆ ಪೂರ್ಣಪ್ರಮಾಣದಲ್ಲಿ ಇಡೀ ದೇಹಕ್ಕೆ ಹಬ್ಬಿರುವ ರೋಗವೂ ಇರಬಹುದು.

ಸೋರಿಯಾಸಿಸ್ ಎಂಬುದು ಒಂದು ಸಾಮಾನ್ಯ ಚರ್ಮ ಖಾಯಿಲೆಯಾಗಿದೆ. ಡಬ್ಲೂಎಚ್‍ಒ ದ ಸಮೀಕ್ಷೆಯ ಪ್ರಕಾರ ಶೇಕಡಾ 10% ರವರೆಗೆ ಜನ ಸೋರಿಯಾಸಿಸ್ ಖಾಯಿಲೆಯಿಂದ ಬಳಸಲುತ್ತಾರೆ. ಈ 5 ದಶಮಾನಗಳಲ್ಲಿ ಸೋರಿಯಾಸಿಸ್ ಖಾಯಿಲೆಯು ಗಣನೀಯವಾದ ಹೆಚ್ಚಳವನ್ನು ಕಂಡಿದೆ. ಬಹುಶಃ ಜನರ ಜೀವನ ಶೈಲಿಯನ್ನು ಆಧರಿಸಿ ಈ ತರಹದ ಬದಲಾವಣೆಯಾಗುತ್ತಲಿದೆ ಎನ್ನಬಹುದಾಗಿದೆ. ಈ  ಸೋರಿಯಾಸಿಸ್  ಖಾಯಿಲೆಯು ಎಲ್ಲ ವರ್ಗದ ಜನರಿಗೂ, ಎಲ್ಲ ವಯೋಮಾನದವರಿಗೂ, ಮತ್ತು ಎರಡೂ ಲಿಂಗದ ಜನರಿಗೂ ಬರಬಹುದಾಗಿದೆ. ಸಾಮಾನ್ಯವಾಗಿ ರೋಗಿಗಳಲ್ಲಿ ಯೌವ್ವನದ ಮೊದಲ ಹಂತದಲ್ಲಿ ಬರಬಹುದಾದ ಖಾಯಿಲೆಯಾಗಿದೆ. ಈ ಖಾಯಿಲೆಯನ್ನು ವಾಸಿಮಾಡಲಾಗದ, ಮರುಕಳಿಸುವ ಖಾಯಿಲೆಯೆಂದು, ಕಾಲಕ್ರಮೇಣ ಹೆಚ್ಚಾಗುವ ಖಾಯಿಲೆಯೆಂದು ಪರಿಗಣಿಸಲಾಗುತ್ತದೆ. ಈ ಸೋರಿಯಾಸಿಸ್ ಖಾಯಿಲೆಯಲ್ಲಿ  ಒಂದೇ ಸರಿ ಎಲ್ಲವೂ ಆರಾಮವಾದಂತೆ ಆಗುವುದು ನಂತರ ಸ್ವಲ್ಪ ಸಮಯದಲ್ಲಿ ಮತ್ತೆ ಮರುಕಳಿಸುವುದು ಮತ್ತು ದೇಹದ ಕೆಲ ಭಾಗಗಳಲ್ಲಿ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಸಾಮಾನ್ಯ.

ಸಾಮಾನ್ಯವಾಗಿ ಚರ್ಮದ ಕೋಶಗಳು 28 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುತ್ತವೆ. ಈ ಸಮಯದಲ್ಲಿ ಅದು ಚರ್ಮದ ಹೊರ ಭಾಗದಲ್ಲಿ ಸಂಚರಿಸುತ್ತದೆ, ಅಲ್ಲಿ ನಿರಂತರವಾಗಿ ನಿರ್ಜೀವ ಕೋಶಗಳು ಕಾಣದಂತೆ ಹರಡಿಕೊಂಡಿರುತ್ತದೆ. ಈ ಸೋರಿಯಾಸಿಸ್‍ನ ತೇಪೆಗಳಲ್ಲಿ ಚರ್ಮಕೋಶಗಳ ವಹಿವಾಟು ಬಹಳ ವೇಗವಾಗಿ, ನಾಲ್ಕರಿಂದ ಏಳು ದಿನಗಳಲ್ಲಿ ಆಗುತ್ತದೆ ಮತ್ತು ಇದರ ಅರ್ಥ ಜೀವಂತ ಕೋಶಗಳೂ ಕೂಡ ಮೇಲ್ಭಾಗಕ್ಕೆ ತಲುಪಿ ಸತ್ತ ಕೋಶಗಳೊಂದಿಗೆ ಬೆರೆಯುತ್ತವೆ. ಇದರ ಅರ್ಥ ಕೋಶಗಳ ನಿರೋಧಕ ವ್ಯವಸ್ಥೆಯಲ್ಲಿ (ಟಿ ಕೋಶಗಳು) ವಿಪರೀತ ಕಾರ್ಯೋನ್ಮುಖವಾಗುತ್ತವೆ, ಇದರಿಂದ ಅವುಗಳ ಬೆಳವಣಿಗೆ ಚರ್ಮಕೋಶಗಳಲ್ಲಿ ಬಹಳ ಬೇಗ ಹಬ್ಬುತ್ತದೆ ಮತ್ತು ಸಿ ಸೋರಿಯಾಟಿಕ್ ತುರಿಕೆಯು ಆರಂಭವಾಗುತ್ತದೆ. ಈ ಸೋರಿಯಾಸಿಸ್ ಹರಡುವುದು ದೇಹದ ಯಾವುದೇ ಭಾಗದಲ್ಲಿ ಆಗಿರಲಿ ಅದರ ಕಾರ್ಯವಿಧಾನವು ಒಂದೇ ರೀತಿಯದ್ದಾಗಿರುತ್ತದೆ.

ಸೋರಿಯಾಸಿಸ್ ಆಗಲು ಕಾರಣಗಳೇನು?

ಈ ಖಾಯಿಲೆಯ ನಿಖರವಾದ ಕಾರಣವನ್ನು ಇನ್ನೂ ಹುಡುಕುತ್ತಲೇ ಇದ್ದಾರೆ. ಸಂಶೋಧನೆಯ ಪ್ರಕಾರ ಪ್ರಮುಖವಾಗಿ ಮೂರು ಕಾರಣಗಳನ್ನು ಗುರುತಿಸುತ್ತಾರೆ – ಅನುವಂಶೀಯತೆ, ಪರಿಸರ ಮತ್ತು ರೋಗನಿರೋಧಕ ಶಕ್ತಿಯ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ಈ ಖಾಯಿಲೆಯಲ್ಲಿ ವಹಿಸುತ್ತದೆ. ಅಧ್ಯಯನದ ಪ್ರಕಾರ ಸ್ಷಷ್ಟವಾಗಿ ತಿಳಿಯುವುದೇನೆಂದರೆ ಈ ಸೋರಿಯಾಸಿಸ್ ಖಾಯಿಲೆ ಉಂಟಾಗಲು ಅನುವಂಶೀಯತೆಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅವರ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಜನರಲ್ಲಿ ಈ ಸೋರಿಯಾಸಿಸ್ ಖಾಯಿಲೆ ಇರುವುದು, ಅವಳಿ ಜವಳಿಯಲ್ಲಿ ಒಬ್ಬರಿಗೆ ಈ ಖಾಯಿಲೆ ಇರುವುದು ಮತ್ತು ಸಕಾರಾತ್ಮಕ ಅನುವಂಶೀಯತೆಯ ಅಧ್ಯಯನದಿಂದ ಸ್ಪಷ್ಟವಾಗಿ ತಿಳಿದು ಬರುವುದೇನೆಂದರೆ ಈ ಸೋರಿಯಾಸಿಸ್ ಖಯಿಲೆ ಉಂಟಾಗುವುದರಲ್ಲಿ ಅನುವಂಶೀಯತೆಯು ಬಹು ಮುಖ್ಯಪಾತ್ರವನ್ನು ವಹಿಸುತತದೆ.

ಪೋಷಕರಲ್ಲಿ ಒಬ್ಬರಿಗೆ ಯಾರಿಗಾದರೂ ಸೋರಿಯಾಸಿಸ್ ಇದ್ದಲ್ಲಿ ಶೇಕಡಾ 15% ರಷ್ಟು ಮಕ್ಕಳಲ್ಲಿ ಈ ಖಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಪೋಷಕರು ಇಬ್ಬರಲ್ಲೂ ಈ ಪಿಸೋರಿಯಾಸಿಸ್ ಖಾಯಿಲೆ ಇದ್ದ ಪಕ್ಷದಲ್ಲಿ ಮಕ್ಕಳಿಗೆ ಶೇಕಡಾ 45% ಈ ಖಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ. ಪೋಷಕರಿಬ್ಬರಿಗೂ ಈ ಖಾಯಿಲೆ ಇಲ್ಲದೆ ಒಬ್ಬ ಮಗುವುಗೆ ಬಂದಾಗ ಮತ್ತೊಬ್ಬ ಮಗುವಿಗೆ ಶೇಕಡಾ 20% ಈ ಖಾಯಿಲೆ ಸೋರಿಯಾಸಿಸ್ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಅನುವಂಶೀಯತೆಗೆ ಒಳಪಟ್ಟಿರುವ ವ್ಯಕ್ತಿಗಳಲ್ಲಿ ಕೆಲವು ಪರಿಸರವು ಕಾರಣವಾಗಿರುತ್ತದೆ ಅಂತಹವನ್ನು ಪ್ರಚೋದಕ ಸೋರಿಯಾಸಿಸ್ ಅನ್ನಲಾಗುತ್ತದೆ. ಕೆಲವು ಪ್ರಚೋದಕಗಳು –

• ಸೋಂಕು : ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು ಉದಾಹರಣೆಗೆ ಹಲ್ಲಿನ, ಗಂಟಲ ಅಥವಾ ಚರ್ಮದ ಸೋಂಕು ಹೆಚ್ಚಾಗಿ ಅದು ಸೋರಿಯಾಸಿಸ್ ಆಗುವುದಕ್ಕೆ ಕಾರಣವಾಗುತ್ತದೆ. ಅದರಂತೆ ಎಚ್ ಈ ವಿ ಸೋಂಕಿನಂತಹ ವೈರಾಣು ಸೋಂಕಿರುವ ಜನರಲ್ಲಿ ಹೆಚ್ಚಾಗಿ ಹರಡುತ್ತದೆ.

• ಚರ್ಮಕ್ಕೆ ಆಗುವ ಗಾಯ : ದೈಹಿಕವಾದ ಗಾಯಗಳು (ಗಾಯ, ತರಚು) ರಸಾಯನಿಕ ಗಾಯಗಳು, ಯಂತ್ರದಿಂದ ಆದ ಗಾಯಗಳು ( ಹುಳದ ಕಡಿತ, ತೀವ್ರ ಬಿಸಿಲ ಸುಟ್ಟ ಗಾಯ) ಅಥವಾ ಕೆಲವೊಮ್ಮೆ ಚರ್ಮರೋಗಗಳಾದ ಸಿಡುಬು, ಸರ್ಪ ಹುಣ್ಣು ಮುಂತಾದವುಗಳಿಂದ ಸೋಂಕಿಗೆ ಒಳಗಾಗಿರುವ ಜಾಗಗಳು ಮುಂದೆ ಸೋರಿಯಾಸಿಸ್ ಬೆಳೆಯುವ ಸಾಧ್ಯತೆಗಳು ಇರುತ್ತದೆ

• ಒತ್ತಡ : ಒತ್ತಡ ಪೂರ್ಣ ಜೀವನವೂ ಕೂಡ ಈ ಸೋರಿಯಾಸಿಸ್ ಖಾಯಿಲೆಗೆ ಬಲಿಯಾಗುವ ಕಾರಣಗಳಲ್ಲಿ ಒಂದಾಗಿದೆ. ಉದಾಹರಣೆಗೆ ಕೆಲಸದ ಬದಲಾವಣೆ, ದಾಪಂತ್ಯ ಜೀವನದಲ್ಲಿ ವಿರಸ, ಹಣ ಕಾಸಿನ ಅಭದ್ರತೆ ಮುಂತಾದವು

• ಧೂಮ್ರಪಾನ : ಸೋರಿಯಾಸಿಸ್ ಖಾಯಿಲೆಯು ಧೂಮ್ರಪಾನ ಮಾಡುವವರಲ್ಲಿ ಸಾಮಾನ್ಯವಾಗಿ ಹೆಚ್ಚಾಗಿಯೇ ಕಂಡು ಬರುತ್ತದೆ.

• ಮದ್ಯಪಾನ : ಹೇರಳ ಮದ್ಯಪಾನ ಮತ್ತು ಸೋರಿಯಾಸಿಸ್ ನಡುವೆ ಬಹಳ ದೊಡ್ಡ ನಂಟು ಇದೆ.

• ವಿಟಮಿನ್ ಡಿ ಕೊರತೆ : ವಿಟಮಿನ್ ಡಿ ಕೊರತೆಯು ಸೋರಿಯಾಸಿಸ್ ರೋಗಿಗಳಲ್ಲಿ ಹೆಚ್ಚಾಗಿ ಕಾಣಬಹುದು

• ಸ್ಥೂಲಕಾಯತೆ : ಬಹಳಷ್ಟು ಸೋರಿಯಾಸಿಸ್ ರೋಗಿಗಳು ಸ್ಥೂಲಕಾಯತೆಗೆ ಒಳಗಾಗಿರುತ್ತಾರೆ ಮತ್ತು ಅವರಿಗೆ ಚಯಾಪಚಯಕ್ಕೆ ಸಂಬಂಧಿಸಿದ ಖಾಯಿಲೆಗಳಾದ ಡಯಾಬಿಟೀಸ್, ಕೋಲೆಸ್ಟರಾಲ್‍ದ ಮಟ್ಟದಲ್ಲಿ ಏರಿಳಿತ ಮತ್ತು ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಿರುತತಾರೆ

• ಔಷಧೀಕರಣ : ಕೆಲವೊಂದು ಔಷಧಿಗಳಾದ ನೋವು ನಿವಾರಕ, ಮಲೆರಿಯಾ ರೋಗಕ್ಕೆ ಬಳಸುವ ಔಷಧಿ, ಅಪಸ್ಮಾರ, ಅಧಿಕ ರಕ್ತದೊತ್ತಡ, ಮತ್ತು ಕೆಲವು ಮಾನಸಿಕ ಚಿಕಿತ್ಸೆಯ ಔಷಧಿಗಳು ಸೋರಿಯಾಸಿಸ್ ಖಾಯಿಲೆಯನ್ನು ಉದ್ರೇಕಿಸುವ ಕೆಲಸವನ್ನು ಮಾಡುತ್ತವೆ

ಸೋರಿಯಾಸಿಸ್ ಹೇಗೆ ಇರುತ್ತದೆ?

ಸೋರಿಯಾಸಿಸ್ ಖಾಯಿಲೆಯು ವಿವಿಧ ಪ್ರಕಾರದ ಗಾಯಗಳಲ್ಲಿ ಇರುತ್ತದೆ. ಸಾಮಾನ್ಯವಾಗಿ ಒಣ ಚರ್ಮ ನೀಲಿಬಣ್ಣದಲ್ಲಿರುತತದೆ ನಂತರ ಸ್ವಲ್ಪ ಸಮಯದ ನಂತರ ಕೆಂಪು ದದ್ದುಗಳೊಂದಿಗೆ ಬಿಳಿಬಣ್ಣದ ಪೊರೆಗಳಿಂದ ಕೂಡಿರುತ್ತದೆ. ಇಂತಹ ಗಾಯಗಳು ಸಾಮಾನ್ಯವಾಗಿ ಮೊಣ ಕೈ , ಮೊಣ ಕಾಲು, ತೋಳಿನ ಹೊರಭಾಗ, ಕಾಲುಗಳು , ಬೆನ್ನಿನ ಕೆಳಭಾಗಗಳಲ್ಲಿ ಹೆಚ್ಚಾಗಿ ಆಗುತ್ತವೆ. ಇವುಗಳನ್ನು ಅಂಗೈ ಮತ್ತು ಅಂಗಾಲು ಮುಂತಾದ ಮೆತ್ತಗಿನ ಪ್ರದೇಶಗಳಲ್ಲಿ ಇದ್ದಾಗ ಅವುಗಳನ್ನು ಬದಲಾಯಿಸಬಹುದಗಿದೆ ಮತ್ತು ಅವು ಒಣ ಮತ್ತು ಒಡೆದ ಪೊರೆ ಬಂದಂತಹ ಚರ್ಮವಾಗಿ ಕಾಣುತ್ತವೆ. ಇಲ್ಲಿ ಮತ್ತೊಂದು ಕುತೂಹಲಕರವಾದ ಅಂಶವೆಂದರೆ ಚರ್ಮದ ಮೇಲೆ ಗಾಯವಾಗಿರುವ ಯಾವುದೇ ಭಾಗದಲ್ಲಿ ಆಗಬಹುದಗಿದೆ. ಅದರಂತೆ ಗಾಯವು ರೋಗಿಯ ತಲೆಯ ಮೇಲೆ ಬುರುಡೆ ಭಾಗದಲ್ಲೂ ಆಗಬಹುದುದಾಗಿದೆ ಸಾಮಾನ್ಯವಗಿ ಇಂತಹದ್ದನ್ನು ರೋಗಿಗಳು ಹೆರಳವಾದ ತಲೆ ಹೊಟ್ಟು ಎಂತಲೂ ಕರೆಯುತ್ತಾರೆ.

ಸಾಮಾನ್ಯವಾಗಿ ಎಲ್ಲ ರೋಗಿಗಳಲ್ಲಿಯೂ ತುರಿಕೆ ಇದ್ದೆ ಇರುತ್ತದೆ. ತುರಿಕೆಯ ತೀವ್ರತೆ ರೋಗಿಯಿಂದ ರೋಗಿಗೆ ವ್ಯತ್ಯಾಸವಿರುತ್ತದೆ, ದಿನದ ಬೇರೆ ಬೇರೆ ಸಮಯದಲ್ಲಿ ತುರಿಕೆ ಇರುತ್ತದೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ತುರಿಕೆಯ ಪ್ರಮಾಣ ಹೆಚ್ಚಾಗಿದ್ದರೂ ಸಹ , ಪೊರೆಯಂತಹ ಪದಾರ್ಧ ಚರ್ಮದಿಂದ ಬಂದರೂ ಸಹ ಯಾವುದೇ ತರಹದ ಸೋರಿಕೆಯು ಆ ಭಾಗದಿಂದ ಆಗುತ್ತಿರುವುದಿಲ್ಲ. ಅಂಗಾಲುಗಳಲ್ಲಿ ಮತ್ತು ಅಂಗೈಗಳಲ್ಲಿ ಸೀಳುಗಳು ಎಷ್ಟೇ ದೊಡ್ಡದಗಿದ್ದರೂ ನೋವು ಹೆಚ್ಚಾಗಬಹುದೇ ಹೊರತು ಅವರ ದೈನಂದಿನ ಚಟುವಟಿಕೆಗಳಾದ ನಡೆದಾಡುವುದು ಅಥವಾ ಯಾವುದೇ ಮನೆಗೆಲಸವನ್ನು ಮಾಡುವಲ್ಲಿ ತೊಂದರೆ ಯಾಗುವುದಿಲ್ಲ.

ಈ ಎಲ್ಲ ಲಕ್ಷಣಗಳು ಚಳಿಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇಲಿನ ಈ ಎಲ್ಲ ಬದಲಾವಣೆಗಳು ಚರ್ಮದಲ್ಲಿ ಇದ್ದು, ಸುಮಾರು 1/3 ರೋಗಿಗಳಲ್ಲಿ ಉಗುರುಗಳಲ್ಲೂ ಬದಲಾವಣೆಯನ್ನು ಗಮನಿಸಬಹುದಾಗಿದೆ.ಶೇಕಡಾ 10-15% ರೋಗಿಗಳಲ್ಲಿ ಸಂದಿಗಳಲ್ಲಿ ನೋವುಂಟಾಗಬಹುದು, ಊತ ಬರಬಹುದು ಅಥವಾ ಚಲನೆಯಲ್ಲಿ ಸೀಮಿತವಾದ ಚಲನೆ ಕಾಣಬಹುದಾಗಿದೆ

ಸೋರಿಯಾಸಿಸ್ ರೋಗ ನಿರ್ಣಯ

ನೀವು ಒಬ್ಬ ಡೆರ್ಮಾಟಾಲೋಜಿಸ್ಟ್ ಅವರ ಬಳಿಗೆ ಹೋದಾಗ ಅವರು ರೋಗಿಯ ರೋಗ ಲಕ್ಷಣ ಅದರ ಇತಿಹಾಸದ ಬಗೆಗೆ ತಿಳಿದು ಚರ್ಮದ ಪರಿಕ್ಷಣೆ ಮಾಡಿ ಮತ್ತು ಕೆಲವು ಚಿಕಿತ್ಸಕ ತಪಾಸಣೆಗಳನ್ನು ಮಾಡಿಇಸ ನಂತರ ನಿರ್ಣಯಕ್ಕೆ ಬರುತ್ತಾರೆ. ಅದು ಏನೇ ಇರಲಿ ಕೆಲವು ಕಠಿಣ ಸಂದರ್ಭಗಳಲ್ಲಿ ಚರ್ಮದ ಆ ಭಾಗವನ್ನು ಮತ್ತಷ್ಟು ಕಠಿಣ ಪರೀಕ್ಷಣೆಗೆ ಒಳಪಡಿಸಿ (ಬಯಾಪ್ಸಿ ಮಾಡಿಸಿ) ನಂತರ ಸೋರಿಯಾಸಿಸ್ ಎಂದು ನಿರ್ಣಯ ಮಾಡಲಾಗುತ್ತದೆ ಮತ್ತು ಈ ಪರೀಕ್ಷಣೆಗಳಿಂದ ಇದು ಬೇರೆ ಯಾವುದೇ ಡೆರ್ಮಾಟಾಲೊಜಿಕಲ್ ಖಾಯಿಲೆ ಅಲ್ಲವೆಂದು ಖಾತ್ರಿ ಮಾಡಿಕೊಳ್ಳಲಾಗುತ್ತದೆ.

ಸೋರಿಯಾಸಿಸ್ ನ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವುದು : ನಿಮ್ಮ ವೈದ್ಯರು ನಿಮಗೆ ಸೋರಿಯಾಸಿಸ್ ಇದೆ ಎಂದು ಗುರುತಿಸಿದಾಗ ನೀವು ಆ ರೋಗದ ಕೆಲವು ಸತ್ಯಗಳನ್ನು ಕೆಲವು ಲಕ್ಷಣಗಳನ್ನು ಅವಶ್ಯವಾಗಿ ತಿಳಿದು ಕೊಂಡಿರಲೇ ಬೇಕಾಗುತ್ತದೆ.

ಮೊದಲನೆಯದಾಗಿ, ಸೋರಿಯಾಸಿಸ್‍ನಲ್ಲಿ ಶಾಶ್ವತವಾದ ಪರಿಹಾರವೆಂಬುದು ಇಲ್ಲ. ಕೆಲವು ಜನರು ಶಾಶ್ವತವಾದ ಪರಿಹಾರ ಇದೆ ಎಂಬ ತಪ್ಪು ತಿಳುವಳಿಕೆಯಲ್ಲಿ ಇರುತ್ತಾರೆ ಹಾಗೆಯೇ ಕೆಲವರು ತಮ್ಮ ಮಾತಿನ ಜಾಲದಲ್ಲಿ ವಶ ಪಡಿಸಿಕೊಂಡು ಮತ್ತು ಅವರು ಮಾಡುವ ಪ್ರಚಾರದಿಂದ ಹಣವನ್ನು ಕಳೆದು ಕೊಳ್ಳುವವರೂ ಇದ್ದಾರೆ, ಕೆಲವೊಮ್ಮೆ ಇಂತಹ ಯಾವುದೋ ತಿಳಿಯದ ಉಪಚಾರದಿಂದ ಮತ್ತೊಂದು ರೋಗಕ್ಕೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ನಾವು ಇಲ್ಲಿ ಮುಖ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೆಂದರೆ ಬೇರೆ ಎಲ್ಲ ರೀತಿ ಆರೋಗ್ಯ ಸಮಸ್ಯೆಗಳೊಂದಿಗೆ ಈ ಖಾಯಿಲೆಯ ಉಪಚಾgವೂ ನಡೆಯುತ್ತಿರುವಾಗ ಔಷಧಿಯ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಯಾವುದೇ ಔಷಧಿಯೂ ಶೇಕಡಾ 100% ಎಲ್ಲರಿಗೂ ಪರಿಣಾಮ ಕಾರಿಯಾಗುತ್ತದೆಂದು ಹೇಳಲಾಗುವುದಿಲ್ಲ ಮತ್ತು ಯಾವ ಔಷಧೀಯ ಪದ್ಧತಿಯೂ 100% ಸುರಕ್ಷಿತ ಎಂದೂ ಹೇಳಲಾಗುವುದಿಲ್ಲ. ಯಾವುದೇ ರೀತಿಯ ಔಷಧೀಯ ಪದ್ಧತಿಯನ್ನು ಅನುಸರಿಸುವ ಮೊದಲು ಪೂರ್ವ ಭಾವಿಯಾಗಿ ಕುಲಂಕೂಷವಾಗಿ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕು ಮತ್ತು ವೈದ್ಯರು ಮತ್ತು ರೋಗಿಯ ನಡುವೆ ಈ ವಿಚಾರವಾಗಿ ಸರಿಯಾಗಿ ಚರ್ಚೆಯಾಗಿರಬೇಕು. ಇಬ್ಬರು ಬೇರೆ ಬೇರೆ ರೀತಿಯ ವ್ಯಕ್ತಿಗಳಿಗೆ ಒಂದೇ ತರಹದ ಔಷಧಿಯವನ್ನು ಕೊಟ್ಟು ಉಪಚರಿಸುತ್ತಿರುವಾಗ ಅವರ ಮೇಲೆ ಆಗುವ ಪರಿಣಾಮ ಒಂದೇ ಆಗಿರಬೇಕೆಂದೇನೂ ಇಲ್ಲ ಅವರ ಪ್ರತಿಕ್ರಿಯೆ, ಅಥವಾ ಅವರಲ್ಲಿ ಒಂದೇ ತರಹದ ಅಡ್ಡ ಪರಿಣಾಮಗಳು ಉಂಟಾಗಬೇಕೆಂದೆನೂ ಇರುವುದಿಲ್ಲ. ಪ್ರತಿಯೊಂದು ಸೋರಿಯಾಸಿಸ್ ರೋಗದ ವಿಧ ರೋಗಿಗೆ ನೀಡುವ ಔಷಧಿಯ ವಿಧದ ಅಪಾಯ ಮತ್ತು ಸಂಭಾವ್ಯ ಲಾಭವನ್ನು ಗಮನದಲ್ಲಿಟ್ಟುಕೊಂಡು ಉಪಚರಿಸಬೇಕು.

ಎರಡನೆಯದಾಗಿ, ಈ ಸೋರಿಯಾಸಿಸನ್ನು ಉದ್ರೇಕಿಸುವ ಸಂಭಾವ್ಯ ಉದ್ರೇಕಕಾರಿಯಾಗಿ ಕೆಲಸ ಮಾಡುವ ಪರಿಸರವನ್ನು ತಿಳಿದುಕೊಳ್ಳಬೇಕು ಮತ್ತು ಆ ಉದೃಕಕಾರಿ ಅಂಶಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಸಾಧ್ಯವಾದ ಮಟ್ಟಿಗೆ ಅವರ ಜೀವನ ಶೈಲಿಯಲ್ಲಿ ಬದಲಾವಣೆ, ಸೋಂಕಿನ ನಿವಾರಣೆಗೆ ಮಾಡುವ ಉಪಚಾರವೇ ಈ ಸೋರಿಯಾಸಿಸ್ ನಿಂದ ಹೊರ ಬರಲು ಮಾಡಬೇಕಾಗಿರುವ ಪ್ರಮುಖ ಅಂಶವಾಗಿದೆ ಇಲ್ಲಿ ಯಾವ ರೀತಿಯ ಔಷಧಿಯನ್ನು ತೆಗೆದುಕೊಂಡಿರಿ ಎಷ್ಟು ಔಷಧಿ ತೆಗೆದು ಕೊಳ್ಳಲಾಗಿದೆ ಎಂಬುದು ಮುಖ್ಯವಾಗುವುದಿಲ್ಲ.

ಮೂರನೆಯದಾಗಿ ಒಬ್ಬ ರೋಗಿಗೆ ಎಲ್ಲ ರೀತಿಯ ಔಷಧಿಯನ್ನು ಪ್ರಯತ್ನಿಸುವ ಅಮಿಷವುಂಟಾಗಬಹುದು ಮತ್ತು ಎಲ್ಲ ರೀತಿಯ ಔಷಧಾಲಯ ಆಸಪತ್ರೆಗಳನ್ನು ಭೇಟಿ ಮಾಡಲೂ ಬಹುದು. ನೀವು ಉಪಚಾರ ಮಾಡಿಸಿಕೊಳ್ಳುತ್ತಿರುವ ವೈದ್ಯರೊಂದಿಗೆ ಚರ್ಚಿಸಿ ಮತ್ತುಯಾವ ರೀತಿಯ ಉಪಚಾರ ತೆಗೆದುಕೊಳ್ಳುವುದರಿಂದ ಏನು ಪರಿಣಾಮವಾಗಬಹುದೆಂದು ತಿಳಿದುಕೊಳ್ಳಿರಿ. ಯಾವುದೇ ಒಂದೇ ರೀತಿಯ ಸರಿಯಾದ ಪರಿಹ/ಅರವು ಎಲ್ಲರಿಗೂ ಇರುವುದಿಲ್ಲ.

ಸೋರಿಯಾಸಿಸ್ ಒಬ್ಬ ವ್ಯಕ್ತಿಯ ಜೀವನದ ಮೇಲೆ ಯಾವ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆ?

ಸೋರಿಯಾಸಿಸ್‍ ಎಂಬುದು ಒಂದು ದೀರ್ಘಕಾಲದ, ಯಾರಿಗೂ ಹೇಳಿಕೊಳ್ಳಲಾಗದ, ತುರಿಕೆಯುಕ್ತ, ನೋವುಭರಿತ, ವಿಕಾರವಾದ ಮತ್ತು ಅಶಕ್ತಗೊಳಿಸುವ ಒಂದು ಖಾಯಿಲೆಯಾಗಿದೆ ಇದಕ್ಕೆ ಯಾವುದೇ ಶಾಶ್ವತ ಪರಿಹಾರವಿರುವುದಿಲ್ಲ. ಇದರಿಂದ ರೋಗಿಯ ಜೀವನ ಶೈಲಿಯ ಮೇಲೆ ನಕಾರತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ.

ಸೋರಿಯಾಸಿಸ್‍ನಿಂದ ಮನೆಯಲ್ಲಿ, ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಸಂಬಂಧಗಳ ಮೇಲೆ ಮತ್ತು ದಾಂಪ್ತಯದಲ್ಲಿ ಸಂಬಂಧಗಳ ನಡುವೆ ಮಾನಸಿಕ ಒತ್ತಡವನ್ನುಂಟು ಮಾಡಿ ಬೇರೆ ಬೇರೆ ಪರಿಣಾಮ ಉಂಟಾಗಬಹುದಾಗಿದೆ. ರೋಗಿಗಳು ಬಹಳಬೇಗ ಕಳಂಕಿತ ಭಾವನೆಗೆ ಒಳಗಾಗಿ ತಮ್ಮನ್ನು ತಾವು ಸಾಮಾನ್ಯ ಸಾಮಾಜಿಕ ಜೀವನದಿಂದ ದೂರ ಮಾಡಿಕೊಳ್ಳುತ್ತಾರೆ, ಶಾಲೆಯಿಂದ, ಕೆಲಸದ ಸ್ಥಳದಿಂದ, ಈಜುಕೊಳದಲ್ಲಿ ಮುಂತಾದ ಸ್ಥಳಗಳಲಲ್ಲಿ ದೂರವಿರಬಯಸುತ್ತಾರೆ. ಇದರ ಪರಿಣಾಮವಾಗಿ ಅವರು ಹೆಚ್ಚಾಗಿ ಸಾಮಾಜಿಕ ಚಟುವಟಿಕೆಗಳಿಂದ ದೂರ ಇರಲು ಬಯಸುತ್ತಾರೆ ಮತ್ತು ಸಾಮಾನ್ಯವಾಗಿ ಒಂಟಿತನದ ಅನುಭವವನ್ನು ಪಡೆಯುತ್ತಾರೆ, ಪ್ರತ್ಯಕತೆಯನ್ನು ತೋರುತ್ತಾರೆ, ಅವರು ಆಕರ್ಷಕವಾಗಿಲ್ಲ ಎಂಬ ಭಾವನೆಯನ್ನು ಹೊಂದಿರುತತಾರೆ ಮತ್ತು ಅವರ ನಡವಳಿಕೆಯನ್ನು ಅಸಮಾಧಾನವು ಎದ್ದು ಕಾಣುತ್ತಿರುತ್ತದೆ.

ಸೋರಿಯಾಸಿಸ್‍ನ ಉಪಚಾರ ಹೇಗೆ?

ಈ ಕಾಯಿಲೆಗೆ ಉತ್ತಮ ಉಪಚಾರವು ಆ ರೋಗಿಯನ್ನು ಉಪಚರಿಸುತ್ತಿರುವ ವೈದ್ಯರು ನಿರ್ಧರಿಸುತ್ತಾರೆ ಮತ್ತು ಅದು ಖಾಯಿಲೆಯ ವಿಧ ಮತ್ತು ಭಾಗದ, ಖಾಯಿಲೆಯ ತೀವ್ರತೆ, ಖಾಯಿಲೆಗೆ ತುತ್ತಾಗಿರುವ ದೇಹದ ಭಾಗಗಳು, ಉಪಚಾರ ಪಡೆಯುತ್ತಿರುವ ಔಷಧೀಯ ಪರಿಸ್ಥಿತಿ ಮತ್ತು ರೋಗಿಯ ಮಾನಸಿಕ ಪರಿಸ್ಥಿತಿಯ ಮೇಲೆ ನಿರ್ಧರಿತವಾಗುತ್ತದೆ.

ಚರ್ಮವನ್ನು ಒಣ-ಒಣವಾಗಿ ಬಿಡದೆ ತೇವಭರಿತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ಪೆಟ್ರೋಲಿಯಮ್ ಜೆಲ್ಲಿ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಬಹುದು. ಮಧ್ಯ ಮಧ್ಯ ಸಣ್ಣವಾಗಿ ಸ್ನಾನ ಮತ್ತು ಸ್ವಚ್ಛವಾಗಿಡಲು ಕೈಕಾಲು ಮೊರೆ ತೊಳೆಯುವದರಿಂದ ಚರ್ಮವು ಸುಲಿಯುವುದರಿಂದ ತಪ್ಪಿಸಕೊಳ್ಳಬಹುದಾಗಿದೆ ಮತ್ತು ಚರ್ಮದಲ್ಲಿರುವ ನೈಸರ್ಗಿಕ ತೈಲವನ್ನು ಉಳಿಸಿಕೊಳ್ಳಬಹುದಾಗಿದೆ. ಸ್ನಾನ ಮಾಡುವಾಗ ಅದರೊಂದಿಗೆ ಲವಣಗಳನ್ನು, ತೈಲವನ್ನು ಅಥವಾ ನುಣು¥ಗಿರುವ ಒಟ್‍ಮೀಲನ್ನು ಉಪಯೋಗಿಸುವುದರಿಂದ ಚರ್ಮವನ್ನು ಮೃದುವಾಗಿ ಮಾಡಿಕೊಳ್ಳಬಹುದಾಗಿದೆ.

ನೀವು ಡೆರ್ಮಟಾಲೊಜಿಸ್ಟ್ ಬಳಿ ಹೋದಾಗ ಅವರು ನಿಮ್ಮ ಖಾಯಿಲೆಯನ್ನು ಪರೀಕ್ಷಿಸಿ ಅದರ ತೀವ್ರತೆಯನ್ನು ಸೌಮ್ಯ, ಮಧ್ಯಮ ಅಥವಾ ತೀವ್ರ ಎಂದು ಗುರುತಿಸುತ್ತಾರೆ ಇದರ ಆದಾರದ ಮೇಲೆ ನೀವು ತೆಗೆದುಕೊಳ್ಳಬೇಕಾಗಿರುವ ಉಪಚಾರದ ವಇಧಾನವನ್ನು ನಿರ್ಧರಿಸಲಾಗುತ್ತದೆ.

ಸೌಮ್ಯ ಸೋರಿಯಾಸಿಸ್ : (ಶೇಕಡಾ 80% ಜನರು ಈ ರೀತಿಯ ಖಾಯಿಲೆ ಉಂಟಾಗಿರುತ್ತದೆ) ಈ ಪರಿಸ್ಥಿತಿಯಲ್ಲಿ ದೇಹದ ಶೇಕಡಾ 3-5% ಭಾಗಗಳು ಮಾತ್ರ ಈ ಖಾಯಿಲೆಗೆ ಒಳಗಾಗಿರುತ್ತವೆ. ದೇಹದಲ್ಲಿ ಸ್ವಲ್ಪ ಭಾಗಗಳು ಮಾತ್ರ ಈ ಖಾಯಿಲೆಗೆ ಒಳಗಾಗಿರುತ್ತದೆ ಮತ್ತು ಅದನ್ನು ಉಪಚಾರದಿಂದ ನಿಯಂತ್ರಣದಲ್ಲಿ ಇಡಬಹುದಾಗಿದೆ ಸೋರಿಯಾಸಿಸ್ ಖಾಯಿಲೆಯು ಮುಖ್ಯವಾಗಿ ಚರ್ಮದ ಭಾಗಗಳಿಗೆ ಪರಿಣಾಮ ಬೀರುವುದರಿಂದ ಸ್ಥಳೀಯ ಉಪಚಾರವು ಬಹಳ ಪುಯುಕ್ತವಾಗಿರುತ್ತದೆ ಏಕೆಂದರೆ ಇದು ಸುರಕ್ಷಿತ, ಸಾಧ್ಯವಾದಷ್ಟು ಮಟ್ಟಿಗೆ ಪರಿಣಾಮಕಾರಿ ಮತ್ತು ನೇರವಾಗಿ ಚರ್ಮದ ಮೇಲೆ ಲೇಪಿಸಲು ಸಾಧ್ಯವಿರುತ್ತದೆ. ಅವುಗಳನ್ನು ದ್ರವೌಷಧ, ಬುರುಗು, ಚರ್ಮಲೇಪ, ಮುಲಾಮು, ಜೆಲ್‍ಳು ಮತ್ತು ಶಾಂಪುಗಳು. ಇದರಲ್ಲಿ ಮೆತ್ತಗೆ ಮಾಡುವ , ಸ್ಥಳೀಯ ಸ್ಟೆರೊಯ್ಡ್, ಟಾರ್ ಸಿದ್ಧತೆ ಮತ್ತು ಕ್ಯಾಲಿಶಿಯಮ್ ಮಾರ್ಪಾಟು ಔಷಧಿಗಳನ್ನು ಒಳಗೊಂಡಿರುತ್ತದೆ. ನಿಖರವಾದ ಔಷಧಿಗಳನ್ನು ಬಳಸಲಾಗುತ್ತದೆ ಮತ್ತು ಅವರು ಉಪಚರಿಸಿಕೊಳ್ಳುತ್ತಿರುವ ವಿಧಾನದೊಂದಿಗೆ ದೇಹದ ಯಾವ ಭಾಗವು ಉಪಚಾರಕ್ಕೆ ಒಳಗಾಗುತ್ತದೆಯೋ ಅದನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಕೊಡಲಾಗುತ್ತದೆ.

ಮಧ್ಯಮ ಸೋರಿಯಾಸಿಸ್ : (ಶೇಕಡಾ 15% ರೋಗಿಗಳು ಇಂತಹ ಖಾಯಿಲೆಗೆ ಒಳಗಾಗಿರುತ್ತಾರೆ) ದೇಹದ 3 ರಿಂದ 10 % ಶೇಕಡಾ ಭಾಗದಲ್ಲಿ ಸೋಂಕಿಗೆ ಒಳಗಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ ಸೋಂಕು ಸ್ವಲ್ಪ ಹೆಚ್ಚಾಗಿ ಹರಡಿರುತ್ತದೆ ಆದರೂ ಸಹ ಅದನ್ನು ಸರಿಯಾದ ಪ್ರಮಾಣದ ಔಷಧಿಯನ್ನು ನೀಡಿ ನಿಯಂತ್ರಿಸಬಹುದಗಿರುತ್ತದೆ. ಸ್ಥಳೀಯ ಪದ್ಧತಿಯ ಔಷಧಿಯೊಂದಿಗೆ ಬೇರೆ ವಿಧಾನಗಳೊಂದಿಗೆ ಅಥವಾ ವಿಧಾನಗಳಿಲ್ಲದೆ ಉದಾಹರಣೆಗೆ ಫೋಟೋಥೆರಪಿ ಅಥವಾ ವ್ಯವಸ್ಥಿತ ಔಷಧಿಗಳೊಂದಿಗೆ ತೆಗೆದುಕೊಳ್ಳುವ ಯೋಜನೆಯನ್ನು ಮಾಡಬೇಕು.

ತೀವ್ರ ಸೋರಿಯಾಸಿಸ್ : (ಶೇಕಡಾ 5% ಜನರು ಈ ರೀತಿಯ ಸೋರಿಯಾಸಿಸ್‍ಗೆ ಒಳಗಾಗಿರುತ್ತಾರೆ) ದೇಹದ ಶೆಕಡಾ 10% ಭಾಗಕ್ಕಿಂತಲೂ ಹೆಚ್ಚು ಭಾಗದಲ್ಲಿ ಈ ರೀತಿಯ ಸೋಂಕು ಉಂಟಾಗಿರುತ್ತದೆ, ಪರಿಣಾಮವಾಗಿ ಹೆಚಿನ ಭಾಗವು ಸೋರಿಯಾಸಿಸ್ \ಗೆ ಒಳಗಾಗಿರುತ್ತದೆ. ವಿಷಕಾರಿ ಔಷಧಿಗಳಾದ ಮೆಥೋಟೆಕ್ಸೆರೆಟ್, ರೆಟೆನೋಯ್ಡ್ಸ್, ಸೈಕ್ಲೋಪ್ರೈನ್ ಮತ್ತು ಹೊಸ ಜೈವಿಕಶಾಸ್ತ್ರ ವಿಧಾನಗಳನ್ನು ಬಳಸಲಾಗುತ್ತದೆ. ಇಲ್ಲಿ ಔಷಧಿಯನ್ನು ವ್ಯವಸ್ಥಿತವಾಗಿ( ಮೌಖಿಕವಾಗಿ, ಇಂಜೆಕ್ಷನ್ ಮೂಲಕ) ಸಾಮಾನ್ಯವಾಗಿ ನಿಯಮಿತವಾಗಿ ತೆಗೆದುಕೊಳ್ಳಲಾಗುತ್ತದೆ. ಈ ಔಷಧಿಯನ್ನು ತೆಗೆದುಕೊಳ್ಲುವಾಗ ಅಡ್ಡ ಪರಿಣಾಮಗಳು ಉಂಟಾಗುವ ಸಂಭಾವ್ಯತೆ ಹೆಚ್ಚಾಗಿ ಇರುತ್ತದೆ ಅದ್ದರಿಂದ ಈ ಖಾಯಿಲೆಯ ಔಷಧಿಯನ್ನು ವೈದ್ಯರ ಮೇಲ್ವಿಚಾರಣೆಯೊಂದಿಗೆ ತೆಗೆದುಕೊಳ್ಳಬೇಕಾಗುವುದು. ಪುನರಾವರ್ತಿತವಾಗಿ ಹಲವು ತಪಸಾಣಂಎಗಳನ್ನು ಮಾಡಿಸಬೇಕಾದ ಸಂದರ್ಭವು ಒದಗಬಹುದು ಔಷಧಿಯ ಪರಿಣಾಮಗಳನ್ನು ಗಮನಿಸಬೇಕಾದ ಸಮಯದಲ್ಲಿ ಹೇಗೆ ತಪಾಸಣಂಎಯನ್ನು ಮಾಡಬೇಕಾಗ ಬಹುದು.

ರೋಗಪರಿಹಾರವಾಗದೇ ಇದ್ದ ಪಕ್ಷದಲ್ಲಿ, ವ್ಯಕ್ತಿಯು ಸೋರಿಯಾಸಿಸ್, ವೃದ್ಧಿಸುವುದು ಮತ್ತು ದುರ್ಬಲನಾಗುತ್ತಾನೆ. ಕೆಲವೊಮ್ಮೆ ನೀವು ಪೂರ್ಣ ಗುಣಮುಖರೆನಿಸಿ ಪೂರ್ಣ ಪ್ರಮಾಣದ ಆಯೋಗ್ಯಯುತ ಚರ್ಮವೆನಿಸಬಹುದು, ಸ್ವಲ್ಪ ಖಾಯಿಲೆಯ ಚರ್ಮ ಎನಿಸಬಹುದು ಅಥವಾ ಸೋರಿಯಾಸಿಸ್‍ನ ಲಕ್ಷಣ ಕಾಣಿಸದೇ ಇರಬಹುದು. ಸಮನಾಗಿ ಕೆಲವೊಂದು ಸಮಯದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಉದ್ರೇಕಿತವಾಗಿ ಹೆಚ್ಚಾಗಬಹುದು. ಈ ಉದ್ರೇಕಿತಗೊಂಡು ಖಾಯಿಲೆ ಹೆಚ್ಚಾದ ಸಮಯ ಮತ್ತು ಸಾಮಾನ್ಯ ಚರ್ಮದ ಸಮಯದ ನಡುವಿನ ಅಂತರ ಒಬ್ಬರಿಂದ ಮತ್ತೊಬ್ಬರಲ್ಲಿ ಬೇರೆ ಬೇರೆಯಾಗಿರುತ್ತದೆ ಮತ್ತು ಅದನ್ನು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅದು ವಾರಗಳು, ತಿಂಗಳುಗಳು ಅಥವಾ ವರ್ಷಗಳೇ ಆಗಬಹುದು.

ಬದಲಿ ಉಪಚಾರದ ವಿಧಾನಗಳೆಂದರೆ ಯೋಗ, ಧ್ಯಾನ ಸ್ಪಾ ಥೆರಪಿ ಮೊದಲಾದವುಗಳು ಸೋರಿಯಾಸಿಸ್‍ನ ಉಪಚಾರವಿಧಾನಗಳಲ್ಲಿ ಇವೆ ಮತ್ತು ಇವುಗಳನ್ನು ಔಷಧಿಗಳ ಜೊತೆಯಾಗಿಯೋ ಬಳಸುತ್ತಾರೆ. ಇವುಗಳು ಸೋರಿಯಾಸಿಸ್‍ನ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿವೆ, ಇವುಗಳಿಂದ ಔಷಧಿಯ ಪರಿಣಾಮಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಲು ಸಹಾಯಕವಾಗುತ್ತದೆ. ಮತ್ತು ಆಗುವ ಅಡ್ಡ ಪರಿಣಾಮಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ.

ಸೋರಿಯಾಸಿಸ್ ನ ಉಪಚಾರವು ದೊಡ್ಡದು ಮತ್ತು ಬಹಳ ಸಮಯ ಹಿಡಿಯುವಂತದ್ದು. ಈ ಬಹಳ ಸಮಯದ ಉಪಚಾ4ರವೇ ರೋಗಿಗಳಲ್ಲಿ ಅಸಹನೆಯನ್ನು ಉಂಟುಮಾಡುವ ಪ್ರಸಂಗವಿರುತ್ತದೆ. ಇಲ್ಲಿ ಮುಖ್ಯವಾಗಿ ವೈದ್ಯರು ರೋಗಿಗಳಿಗೆ ಈ ರೀತಿಯಾಗಿ ಬಹಳ ಸಮಯದ ಉಪಚಾರದ ಬಗೆಗೆ ಒಟ್ಟಾಗಿ ತಿಳಿವಳಿಕೆ ನೀಡುವುದು ಮುಖ್ಯವಾಗುತತದೆ. ಈ ರೀತಿಯ ತಿಳಿವಳಿಕೆ ಅಂಟಿಕೊಳ್ಳದೇ ಸರಿಯಾಗಿ ಇಲ್ಲದೇ ಇದ್ದ ಪಕ್ಷದಲ್ಲಿ ಸರಿಯಾಗಿ ತಿಳಿ ಹೇಳದ ಪಕ್ಷದಲ್ಲಿ ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ, ಇದರಿಂದ ತಪ್ಪು ತಿಳುವಳಿಕೆಯಾಗಿ ಔಷಧಿಯನ್ನು ಅಂಟಿಕೊಳ್ಲದೇ ಸರಿಯಾಗಿ ತೆಗೆದುಕೊಳ್ಳದೇ ಪರಿಣಾಮವು ಫಲಕಾರಿಯಾಗುವುದಿಲ್ಲ ಮತ್ತು ಬಯಸಿದ ಪರಿಣಾಮಗಳು ಸರಿಯಾಗಿ ಸಮಯಕ್ಕೆ ಆಗದೇ ನಿಧಾನಗತಿಯಲ್ಲಿ ಪರಿಣಾಮವಾಗಬಹುದು. ಈ ರೀತಿಯಾಗಿ ಔಷಧಿಗಳಿಗೆ ಸರಿಯಾಗಿ ಅಂಟಿಕೊಳ್ಳದೇ ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ ಅದರ ಪರಿಣಾಮವು ಸರಿಯಾಗಿ ಆಗುವುದಿಲ್ಲ ಉಪಚಾರದ ನಿಯಮಗಳನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ.

ಸೋರಿಯಾಸಿಸ್ ಉಪಚಾರದಲ್ಲಿ ಪಥ್ಯವು ಪರಿಣಾಮಕಾರಿಗಾಗಿರುತ್ತದೆಯೇ?

ಹಾಗೆ ಸೋರಿಯಾಸಿಸ್‍ನ ಉಪಚಾರಕ್ಕೂ ಪಥ್ಯಕ್ಕೂ ನೇರ ಸಂಬಂಧವಿಲ್ಲ ಮತ್ತು ನೀವು ತನ್ನುವ ಪದಾರ್ಥದ ಮೇಲೆ ತೀವ್ರತೆ ನಿರ್ಧಾರವಾಗುವುದಿಲ್ಲ. ಅದು ಏನೇ ಇರಲಿ ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಷನ್‍ನವರ ಪ್ರಕಾರ ಕನಿಷ್ಠ 300ಗ್ರಾಮ ಎಣ್ಣೆಯುಕ್ತ ಮೀನನ್ನು ವಾರಕ್ಕೆ ಒಮ್ಮೆ ತಿಂದರೆ ಸಾಮಾನ್ಯ ಆರೋಗ್ಯವು ಚೆನ್ನಾಗಿರುತತದೆ.ಫ್ಯಾಟೀ ಆಸಿಡ್ , ಪ್ರೋಟಿನ್ ಮತ್ತು ಆಚಿಟಿ ಆಕ್ಸಿಡೆಂಟ್ ಹೆಚ್ಚಿರುವ ಇರುವ ಆಹಾರವನ್ನು ಹೆಚ್ಚಾಗಿ ಅದರಲ್ಲೂ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ. ಜೆಡ್ಡು ಹೆಚಿರುವ ಆಹಾರ, ಸಂಸ್ಕರಿಸಿದ ಆಹಾರ ಮತ್ತು ಹೆಚ್ಚಿನ ಪ್ರಮಾಣದ ಮದ್ಯ ಸೇವನೆಯನ್ನು ಬಿಡಬೇಕೆಂದು ಹೇಳಲಾಗುತ್ತದೆ.

ಸೋರಿಯಾಸಿಸ್‍  ಹೆಚ್ಚಾಗದಂತೆ ತಡೆಯಲು ಕೆಲವು ಉಪಾಯಗಳು: 

  • ಒಳ್ಳೆಯ ಸಾಬೂನನ್ನು ಬಳಸಿ
  • ಚರ್ಮವನ್ನು ತೇವಾಂಶಯುತವಾಗಿ ಇಟ್ಟುಕೊಳ್ಳಲು ಮಾಯಿಸ್ಚರಾಯಿಸರ್ , ಮುಲಾಮು ಮುಂತಾದವನ್ನು ಬಳಸಿ ಚರ್ಮವನ್ನು ಸದಾ ತೇವದಿಂದ ಇರುವಂತೆ ನೋಡಿಕೊಳ್ಳಿ
  • ಬಹಳ ಛಳಿ ಅಥವಾ ಬಹಳ ಒಣ ಹವೆಯನ್ನು ತಪ್ಪಿಸಿರಿ. ಮಧ್ಯಮ ಸೂರ್ಯನ ಬೆಳಕು ಚರ್ಮಕ್ಕೆ ಸಹಕಾರಿಯಾಗಿರುತ್ತದೆ.
  • ಸೋರಿಯಾಸಿಸ್‍ನ್ನು ಉದ್ರೇಕಿಸುವಂತಹ ಔಷಧಿಗಳನ್ನು ತೆಗೆದು ಕೊಳ್ಳುವುದನ್ನು ತಪ್ಪಿಸಿರಿ ( ನೋವು ನಿವಾರಕ, ಮಲೇರಿಯಾ ನಿವಾರಕ ಔಷಧ, ಲಿಥಿಯಮ್, ಪ್ರೋಪರಾನಾಲ್, ಕ್ವಿನಿಡೈನ್ ಮುಂತಾದವು)
  • ಗಾಯಗಳು ಮತ್ತು ಸೋಂಕು ಆಗದಂತೆ ತಪ್ಪಿಸಿ ಆದಾಗ್ಯೂ ಆದಾಗ ನಿಮಗೆ ಸೋರಿಯಾಸಿಸ್ ಸೋಂಕಿರುವುದಾಗಿ ವೈದ್ಯರಿಗೆ ಮೊದಲೇ ಹೇಳಿ
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ
  • ಧೂಮ್ರಪಾನ ಮತ್ತು ಮದ್ಯಪಾನವನ್ನು ಕಡಿಮೆ ಮಾಡಿ
  • ಉತ್ತಮವಾದ ಸಮತೋಲಿತ ಆಹಾರ ಪದ್ಧತಿಯನ್ನು ಅನುಸರಿಸಿ. ನಿತ್ಯವೂ ವ್ಯಾಯಾಮ ಮಾಡಿ ಆರೋಗ್ಯಯುತ ತೂಕವನ್ನು ಕಾಯ್ದುಕೊಳ್ಳರಿ
  • ನೀವು ಸ್ವ ಔಷಧಿಯ ಪದ್ಧತಿಯನ್ನು ತಪ್ಪಿಸಿ ಅಥವಾ ಒ ಟಿ ಸಿ ಔಷಧಿಯ ಪದ್ಧತಿಯನ್ನು ತಪ್ಪಿಸಿ.

ಒಟ್ಟಾರೆ ಹೇಳುವುದಾದರೆ ಸೋರಿಯಾಸಿಸ್ ಎನ್ನುವುದು ಒಂದು ದೀರ್ಘಕಾಲೀನ ನ್ಯೂನತೆಯಾಗಿದೆ. ಈ ಖಾಯಿಲೆ ಕಾರಣಗಳು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ಇದುವರೆವಿಗೂ ಆಗಿಲ್ಲ. ಕೆಲವು ಪ್ರಚೋದಕ ಕಾರಣಗಳು ಇವೆ ಅವುಗಳನ್ನು ಗುರುತಿಸಿ ಅದನ್ನು ತಪ್ಪಿಸಿರಿ. ಇದರ ಉಪಚಾರವು ಬಹಳ ಸಮಯದ ಉಪಚಾರವಾಗಿರುತ್ತದೆ ಮತ್ತು ಒಬ್ಬರ ಉಪಚಾರ ಒಬ್ಬರಿಂದ ಭಿನ್ನವಾಗಿದ್ದ ಅವರವರ ಖಾಯಿಲೆಯ ತೀವ್ರತೆಯ ಆಧಾರದ ಮೇಲೆ ಇರುತ್ತದೆ ಮತ್ತು ಬೇಋಎ ಬೇಋಎ ಕಾರಣಗಳನ್ನು ಆಧಾರಿಸಿರುವುದರಿಂದ ಅವುಗಳ ಉಪಚಾರವೂ ಕೂಡ ಅವರವರ ಸಮಸ್ಯೆಯನ್ನಾಧರಿಸಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾಡಬೇಕಾಗುತ್ತದೆ. ರೋಗಿಗಳಿಗೆ ಈ ಖಾಯಿಲೆಯ ಬಗೆಗೆ ಸುಳ್ಳು ಭರವಸೆಗಳನ್ನು ತಪ್ಪು ವಿಚಾರಗಳನ್ನು ಹೇಳಬಾರದು ಮತ್ತು ಸಂಪೂರ್ಣವಾಗಿ ಗುಣಮುಖರಾಗುತ್ತಾರೆಂದು ಸುಳ್ಳು ಭರವಸೆಯನ್ನು ಕೊಡಬಾರದು.

 

 

 

 

 

 

 

 

 

ಡಾ. ಭಾನುಪ್ರಕಾಶ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್

#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080-28413381/2/3/4

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!