ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ.
ಮೋದಕ ಹಾಗೂ ನೈವೇದ್ಯ ಬೊಜ್ಜು ಹಾಗೂ ಮಧುಮೇಹ ರೋಗಕ್ಕೆ ಉತ್ತಮ ಚಿಕಿತ್ಸೆ:
ಸಿದ್ದಿ, ಸಮೃದ್ದಿ, ಬುದ್ದಿ ಶಕ್ತಿಯ ಹಾಗೂ ವಿಘ್ನನಿವಾರಣೆ ಮಾಡುವ ವಿನಾಯಕನಲ್ಲಿ ಮಧುಮೇಹ, ಬೊಜ್ಜಿನಂತಹ ರೋಗಕ್ಕೆ ಇರುವ ಕಾರಣ, ಲಕ್ಷಣ ಹಾಗೂ ಚಿಕಿತ್ಸೆಯು ಸೂಕ್ಷ್ಮವಾಗಿ ಅಡಕವಾಗಿದೆ.ಗಣಪತಿಗೆ ಪ್ರಿಯವಾದ ಮೋದಕ ಹಾಗೂ ನೈವೇದ್ಯಕ್ಕೆ ಅರ್ಪಿಸುವ ಕಪಿತ್ತ, ಜಂಬೂ ಫಲ ಮತ್ತು ಅತ್ಯಂತ ಪ್ರಿಯವಾದ ಗರಿಕೆಯೂ ಬೊಜ್ಜು ಹಾಗೂ ಮಧುಮೇಹ ರೋಗಕ್ಕೆ ಉತ್ತಮ ಚಿಕಿತ್ಸೆ. ಮಧುಮೇಹ ಬರಲು ಮುಖ್ಯವಾದ ಕಾರಣವನ್ನು ಆಯುರ್ವೇದದಲ್ಲಿ ತಿಳಿಸಲಾಗಿದೆ.
ಯಾರು ಸದಾಕಾಲ ಕುಳಿತು, ಕಡಿಮೆ ವ್ಯಾಯಾಮ ಮಾಡುವರೋ, ಸದಾ ವಿಶ್ರಾಂತಿ ಪಡೆಯುತ್ತಾ ಅತಿಯಾಗಿ ಆಹಾರವನ್ನು ಸೇವಿಸುವರೋ, ಮುಖ್ಯವಾಗಿ ಸಿಹಿ ಹಾಗೂ ಜಿಡ್ದಿನ ಪದಾರ್ಥಗಳನ್ನು ಸೇವಿಸುವರೋ, ಅವರಲ್ಲಿ ಬೊಜ್ಜಿನಾಂಶವು ಕ್ರಮೇಣ ಹೆಚ್ಚಾಗಿ, ದೇಹದಲ್ಲಿ ಶೇಖರಣೆಗೊಂಡು, ದೇಹಕ ತೂಕ ಹೆಚ್ಚಿಸುತ್ತದೆ. ದೊಡ್ಡ ಹೊಟ್ಟೆಯನ್ನು ಹೊಂದುತ್ತಾರೆ ಮತ್ತು ಮಧುಮೇಹಕ್ಕೆ ತುತ್ತಾಗುತ್ತಾರೆ. ಅಂತೆಯೇ ಸಾಂಕೇತಿಕವಾಗಿ ಮೋದಕಪ್ರಿಯ ಗಣಪತಿಗೆ ಲಡ್ಡು, ಮೋದಕ, ಕಡುಬು, ಕಬ್ಬು, ಚಣಕ, ಬಹುಪ್ರಿಯವಾದ ತಿನಿಸು. ಸತತವಾಗಿ ಮೋದಕ ಇತ್ಯಾದಿ ಆಹಾರಪದಾರ್ಥವನ್ನು ಆಸ್ವಾದಿಸುವುದರಿಂದ ದೊಡ್ಡಹೊಟ್ಟೆ, ಸ್ಥೂಲ ಕಾಯವನ್ನು ಹೊಂದುತ್ತಾನೆ.
ಕಪಿತ್ತ ಮತ್ತು ನೇರಳೆ ಮಧುಮೇಹರೋಗಕ್ಕೆ ರಾಮಬಾಣ:
ಹಲವು ರೋಗಗಳನ್ನು ಉತ್ಪತ್ತಿಮಾಡಬಹುದಾದರಿಂದ ಬುದ್ದಿಯ ಪ್ರತೀಕವಾದ ವಿನಾಯಕನು ಒಂದು ಉತ್ತಮ ಔಷಧಿಯನ್ನು ತನ್ನ ಪ್ರಿಯವಾದ ನೈವೇದ್ಯದ ರೂಪವಾಗಿ ಪಡೆಯುತ್ತಾನೆ. ಕಪಿತ್ತ ಮತ್ತು ನೇರಳೆಹಣ್ಣನ್ನು ಇದರ ಪರಿಹಾರವಾಗಿ ಗಣಪತಿ ಸೇವಿಸುತ್ತಾನೆ ಎಂದೂ ಶ್ಲೋಕದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದ ಪ್ರಕಾರ ಕಪಿತ್ತ ಮತ್ತು ನೇರಳೆ ಮಧುಮೇಹರೋಗಕ್ಕೆ ರಾಮಬಾಣ. ಕಪಿತ್ತ ಅಥವಾ ಬೇಲದ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್ ಬಿ ಹಾಗೂ ವಿಟಮಿನ್ ಸಿ ಹೇರಳವಾಗಿದೆ. ಇದು ರಕ್ತದಲ್ಲಿನ ಸಕ್ಕ್ರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿನ ವಿಷದಂತಹ ಅಂಶವನ್ನು ತೆಗೆದುಹಾಕುತ್ತದೆ. ಇದರಲ್ಲಿ ವಿಶೇಷವಾಗಿ ಗ್ರಾಹಿ, ಅಂದರೆ ಸಾರಾಂಶವನ್ನು ತಡೆದು ಸಂಗ್ರಹಿಸುವ ವಿಶೇಷ ಗುಣದಿಂದ ಮಧುಮೇಹಿಗಳ ಮೂತ್ರದಲ್ಲಿ ಹೊರಹೋಗುವ ಪೋಷಕಾಂಶ ಅಥವಾ ಸಕ್ಕರೆಯ ಅಂಶವನ್ನು ತಡೆಹಿಡಿಯುತ್ತದೆ.
ಇದು ಅತಿಯಾದ ಆಹಾರ ಸೇವನೆ, ಅತಿಯಾದ ಬೊಜ್ಜಿನಿಂದ ಉತ್ಪತ್ತಿಯಾಗುವ ಒಂದು ಪ್ರಕಾರದ ಮಧುಮೇಹದ ಚಿಕಿತ್ಸೆಯಾಗಿದೆ. ಬಹಳ ಕ್ರಿಶರಾದ, ಹಲವು ವರ್ಷಗಳಿಂದ ಮಧುಮೇಹಕ್ಕೆ ತುತ್ತಾಗಿ, ದೇಹದ ತೂಕ ಕಳೆದು ಕೊಂಡು, ನಿಶಕ್ತಿಯಿಂದ ಬಳಲುವ ಮತ್ತೊಂದು ಬಗೆಯ ಮಧುಮೇಹ ಅಥವಾ ಟೈಪ್ ವನ್ ಡಯಾಬಿಟಿಸಿಗೂ ಚಿಕಿತ್ಸೆಯನ್ನು ಗಣಪತಿಯ ನೈವೇದ್ಯದಲ್ಲಿ ಪಡೆಯಬಹುದು. ಕೃಶ ಅಥವಾ ದೇಹ ಬಳಷ್ಟು ಕ್ಷಯವಾಗಿರುವ, ದೇಹದಲ್ಲಿನ ಸಾರಾಂಶ ಕಡಿಮೆಯಾಗಿರುವ ಮಧುಮೇಹಿಗಳಲ್ಲಿ ಪೋಷಕಾಂಶವುಳ್ಳ ಆಹಾರವನ್ನು ನೀಡಬೇಕೆಂದು ವಿವರಿಸಲಾಗಿದೆ. ಅಂತೆಯೇ ಕೊಬ್ಬರಿ, ಬೆಲ್ಲ, ಅಕ್ಕಿಯಿಂದ ತಯಾರಿಸಿದ ಮೋದಕ ಅಥವಾ ಕಡುಬು ಈ ಪ್ರಕಾರದ ಮಧುಮೇಹಿಗಳಿಗೆ ಚಿಕಿತ್ಸೆಯಾಗುತ್ತದೆ.
Also watch our video: ಮಧುಮೇಹಕ್ಕೆ ಗಣಪತಿ ಹೇಳಿದ ಚಿಕಿತ್ಸೆ..!
ಹೀಗೆ ಗಣಪತಿಯಲ್ಲಿ, ಅವನ ಪ್ರಿಯವಾದ ವಸ್ತುಗಳಲ್ಲಿ, ತಿನಿಸುಗಳಲ್ಲಿ ಮಧುಮೇಹ ಮತ್ತು ಬೊಜ್ಜುರೋಗವು ಉತ್ಪತ್ತಿಯಾಗುವ ಕಾರಣ, ರೋಗಿಯ ಲಕ್ಷಣ ಮತ್ತು ರೋಗದ ವಿವಿಧ ಅವಸ್ಥೆಯಲ್ಲಿ ಗಣಪತಿಗೆ ಅರ್ಪಿಸುವ ಕಪಿತ್ತ, ನೇರಳೆ ಹಾಗೂ ಗರಿಕೆ ಚಿಕಿತ್ಸೆಯಾಗುತ್ತದೆ ಎಂದು ಕಾಣಬಹುದು. ಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ.
Also Read: ಪರಿಸರ ಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಇಲ್ಲಿದೆ ಸಿದ್ದ ಸೂತ್ರಗಳು
ಡಾ. ಮಹೇಶ್ ಶರ್ಮಾ ಎಂ.
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654