ವೈದ್ಯರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ.ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ, ಮಾರಣಹೋಮ ಖಂಡಿತ.ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ.
ತೀವ್ರ ಒತ್ತಡದಲ್ಲಿ ಕೆಲಸ ಮಾಡುವ ವೈದ್ಯರಿಗೆ ಹಲ್ಲೆಗಳ ಭಯ:
ಸೋಂಕು ಯಾರನ್ನು ಬಿಟ್ಟಿಲ್ಲ. ಹಲವಾರು ವೈದ್ಯರು ದಾದಿಯರು,ಅರೋಗ್ಯ ಸಿಬ್ಬಂದಿಗಳು ಸೊಂಕಿಗೆ ತುತ್ತಾಗಿ ಮರಣಹೊಂದಿದರು .ಇವರಾರು ಬೇರೆ ಸ್ಥಳದಿಂದ ಸೊಂಕು ತಂದವರಲ್ಲ,ಸೊಂಕಿತರ ಆರೈಕೆ ಮಾಡುತ್ತ ಸೊಂಕಿಗೆ ತುತ್ತಾಗಿ ಮರಣಹೊಂದಿದರು,ಇದಕ್ಕಿಂತ ದುರಾದೃಷ್ಟ ಇನ್ನೊಂದಿಲ್ಲ. ಪ್ರಾಣಘಾತುಕ ರೋಗಕ್ಕೆ ತುತ್ತಾದ ರೋಗಿಯ ಅರೈಕೆಯ ಒತ್ತಡದ ಜೊತೆಗೆ ಸ್ವತಃ ತುತ್ತಾಗುವ ಭಯ ಒಂದು ಕಡೆಯಾದರೆ, ಕುಟುಂಬದಿಂದ ದೂರವಿರುವ ದುಃಖ. ಮರಣಹೊಂದಿದರೆ ಅಂತ್ಯಕ್ರಿಯೆಗೆ ಮನೆಯವರೂ ಬಾರದಂತ ಸನ್ನಿವೇಶ. ಇತ್ತಿಚಿಗೆ ಚೆನ್ನೈ ನಗರದ ಪ್ರಸಿದ್ದ ಮೆದುಳು ಶಸ್ತ್ರಚಿಕಿತ್ಸಾ ತಜ್ಞರು ಕೋರೋನಾಸೊಂಕಿತರ ಆರೈಕೆ ಮಾಡುತ್ತ ಅದೆ ಸೊಂಕಿನಿಂದ ಮೃತಪಟ್ಟರು. ದುಃಖಿತ ಸಹೋದ್ಯೋಗಿಗಳನ್ನು ಮೃತ ಶರೀರವನ್ನು ಸ್ಮಶಾನಕ್ಕೆ ಒಯ್ದಾಗ ಜನರು ದೊಣ್ಣೆಗಳಿಂದ ಹಲ್ಲೆಗೈದರು, ಬೇರೆ ಸ್ಮಶಾನಕ್ಕೆ ಹೋದರು. ಇದೆ ರೀತಿ ಜನರ ಗುಂಪು ದೊಣ್ಣೆ ಕಲ್ಲುಗಳಿಂದ ಹಲ್ಲೆಗೈದು ಸಹುದ್ಯೋಗಿ ವೈದ್ಯರು, ವಾಹನ ಚಾಲಕರು ರಕ್ತಸಿಕ್ತರಾಗಿ ತಮ್ಮ ಜೀವ ಉಳಿಸಿಕೊಂಡು ಕೊನೆಗೆ ಕಷ್ಟಪಟ್ಟು ಮೃತದೇಹದ ಅಂತ್ಯಕ್ರಿಯೆ ಮಾಡಲಾಯಿತು. ಎರಡು ಮೂರು ದಶಕಗಳ ಸುಧೀರ್ಘ ಸೇವೆ ಸಲ್ಲಿಸಿ,ಸೇವೆಯಲ್ಲಿಯೆ ಮೃತಪಟ್ಟ ವೈದ್ಯರಿಗೆ ಸಿಗಬೇಕಾದ ಆಂತಿಮ ಗೌರವಗಳೂ ಸಿಗಲಿಲ್ಲ. ಸಿಕ್ಕಿದ್ದು ತೀವ್ರ ಅಗೌರವ, ನಾಚಿಕೆಗೇಡು ಘಟನೆ.
ಎಲ್ಲರಿಗಿಂತ ಹೆಚ್ಚು ಸುರಕ್ಷಿತವಾಗಿರಬೇಕಾದವರು ವೈದ್ಯಕೀಯ ಸಿಬ್ಬಂದಿ :
ರಾಜಕೀಯ, ಧಾರ್ಮಿಕ ಮುಖಂಡರ ಹಾಗೂ ಪೋಲೀಸರ ಸಮಕ್ಷಮದಲ್ಲಿ ನಡೆದ ಸಂಧಾನ, ಎಚ್ಚರಿಕೆಯ ಕ್ರಮಗಳು ವೈದ್ಯ ಸಿಬ್ಬಂದಿಯ ದುರ್ಬಲತೆಯನ್ನು ಎತ್ತಿತೋರಿಸದಂತಾಯಿತು. ತದನಂತರ ವೈದ್ಯರ ಮೇಲಿನ ಹಲ್ಲೆಗಳು ನಿರಂತರವಾದವು. ಜಾಗತಿಕ ಸಾಂಕ್ರಾಮಿಕಕ್ಕೆ ವೈದ್ಯರು ಹೊರತಾಗಿಲ್ಲ, ಇಲ್ಲಿಯವರೆಗೆ ಸುಮಾರು ಜನ ಹಿರಿಯ ಅನುಭವಿ ವೈದ್ಯರು ಬಲಿಯಾದರು. ಅನುಭವಿ ವೈದ್ಯರ ಸಾವು ತುಂಬಲಾರದ ನಷ್ಟ.ವೈದ್ಯಕೀಯ ಅನುಭವ ಕೊಂಡು ತರಲಾಗದು, ಓದಿ ಪಡೆಯಲಾಗದು, ವರ್ಷಗಳ ಪ್ರರಿಶ್ರಮ ಅನುಭವದ ಮೂಲ. ಸೀಮಿತ ರಕ್ಷಾ ಕವಚಗಳೊಂದಿಗೆ ಕಷ್ಟಪಟ್ಟು ಕೆಲಸ ಮಾಡುವ ವೈದ್ಯಸಿಬ್ಬಂದಿಗೆ ಹೊಡೆದುಬಡಿದು ಸೋಂಕು ಅಂಟಿಸಿದಾಗ ಅಷ್ಟು ಮಾನವ ಸಂಪನ್ಮೂಲ ತಾತ್ಕಾಲಿಕವಾಗಿ ಕಡಿಮೆಯಾದಂತೆ. (ಆ ಸಿಬ್ಬಂದಿ ರೋಗಮುಕ್ತರಾಗುವವರೆಗೂ) ,ಅದೆ ಸಿಬ್ಬಂದಿ ಸಾವಿಗೀಡಾದರೆ ಮುಗಿದೆ ಹೋಯಿತು. ಹೀಗೆಯೆ ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ, ಮಾರಣಹೋಮ ಖಂಡಿತ.
ಈ ವೆಂಟಿಲೇಟರ್ ಗಳ ನಿರ್ವಹಣೆ ಮಾಡಲು ನಮ್ಮಲ್ಲಿ ಸಾಕಷ್ಟು ವೈದ್ಯರಿದ್ದಾರೆಯೆ ?
ಈ ಸಮಯದಲ್ಲಿ ರೋಗಿಯ ಯಾವ ಮಾಂಸಖಂಡ ಸ್ನಾಯುಗಳು ಚಲಿಸುವದಿಲ್ಲ, ಕೇವಲ ಹೃದಯ ಮಾತ್ರ ಕೆಲಸದಲ್ಲಿರುತ್ತದೆ, ಉಸಿರಾಟವೂ ನಿಂತುಹೋಗುತ್ತದೆ. ಕೆಲವೆ ಸೆಕಂಡುಗಳ ಸಮಯದಲ್ಲಿ ಈ ರೋಗಿಯ ಗಂಟಲಿನಾಳಕ್ಕೆ ಉಸಿರಾಟದ ನಿಳಿಕೆಹಾಕಿ ವೆಂಟಿಲೇಟರ್ ಅಳವಡಿಸಿ ಪ್ರಾಣವಾಯುವಿನ ಹರಿವು ಮಾಡಬೇಕಾಗುತ್ತದೆ. ಮನುಷ್ಯನ ದೇಹದಾಕಾರ, ಎತ್ತರ, ತೂಕ, ಶ್ವಾಸಕೋಶದಲ್ಲಿನ ಉಂಟಾದ ತೊಂದರೆಯ ತೀವ್ರತೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕೆಲ ಗಣಿತಗಳ ಮೂಲಕ ಗಾಳಿಯ ಹರಿವಿನ ನಿಯಂತ್ರಣ, ಒತ್ತಡ, ಲೆಕ್ಕ ಮಾಡಬೇಕು, ಹೆಚ್ಚಿನ ಗಾಳಿ ಹೋದರೆ ಶ್ವಾಸಕೋಶಗಳು ಬಲೂನಿನಂತೆ ಒಡೆದು ಹೊಗಬಹುದು, ಕ್ಷಣ ಕ್ಷಣಕ್ಕೆ ಗಾಳಿಯ ಹರಿವಿನ ನಿಯಂತ್ರಣ ಮಾಡಬೇಕು. ಇದರೆಲ್ಲದರ ಜೊತೆಗೆ ರೋಗಿಯ ದೇಹದ ಪೋಷಕಾಂಶ ರಕ್ತದಲ್ಲಿನ ಸಕ್ಕರೆಯ ಪ್ರಮಾಣ, ಮೂತ್ರಪಿಂಡಗಳ ಸರಾಗಕ್ರಿಯೆ, ಹಾಗೂ ಅಲುಗಾಡದೆ ಮಲಗಿದುದುರ ಪರಿಣಾಮವಾಗಿ ಬೆನ್ನು, ಪ್ರಷ್ಟಭಾಗದ ಮೇಲೆ ಒತ್ತಡದ ಗಾಯಗಳು, ಹೀಗೆ ಒಂದು ವೆಂಟಿಲೇಟರ್ ನ ಮೇಲಿನರೋಗಿಯ ನೂರಾರು ರಾಸಾಯನಿಕ ಕ್ರಿಯೆಗಳ ಮೇಲೆ ಹದ್ದಿನ ಕಣ್ಣಿ್ಟ್ಟು, ಮೂರ್ಛಿತ ರೋಗಿಯ ಆರೈಕೆ ಮಾಡಬೇಕು.
ಸದ್ಯದ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ :
ಇದರ ಜೊತೆ ಉಂಟಾದ ಸೊಂಕಿಗೆ ಸೂಕ್ತ ಔಷಧಿ, ದೇಹಜಲದ ವ್ಯವಸ್ಥೆ, ಕಣ್ಣು ಗಳ ಆರೈಕೆ ಎಲ್ಲವನ್ನು ನೋಡಬೇಕು. ಹಾಗಾಗಿ ಒಂದು ರೋಗಿಗೆ ಒಬ್ಬ ನುರಿತ
ನರ್ಸ್ ಮೇಲ್ವಚಾರಣೆ ಸದಾ ಇರಬೇಕು, ಅಂದರೆ ಒಂದು ರೋಗಿಗೆ ಒಬ್ಬ ನರ್ಸ್ . ಈ ನರ್ಸ್ ಗಳು ಒಂದು ಆಸ್ಪತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಇರುತ್ತಾರೆ .ಹಾಗೂ ಐಸಿಯುನಲ್ಲಿ ರೋಗಿಗಳನ್ನು ವೆಂಟಿಲೆಟರ್ ಮೇಲೆ ಅಳವಡಿಸಿ ನರ್ಸುಗಳಿಗೆ ಸೂಕ್ತ ನಿರ್ದೇಶನಗಳನ್ನು ಕೊಡುವ ಐಸಿಯು ವೈದ್ಯರ ಸಂಖ್ಯೆ ಇಡಿ ದೇಶದಲ್ಲಿ ಕೆಲ ಸಾವಿರ ಮಾತ್ರ. ಇವರಂತೆ ಐಸಿಯು ನರ್ಸ್ಗಳ ಸಂಖ್ಯೆಯೂ ವಿರಳ. ನೂರಾಮೂವತ್ತು ಕೋಟಿ ಜನಸಂಖ್ಯೆಗೆ ಕೆಲ ಸಾವಿರದಷ್ಟು ಸಂಖ್ಯೆಯ ಪರಿಣಿತರು. ಹಾಗಾಗಿ ಲಕ್ಷೋಪಲಕ್ಷ ವೆಂಟಿಲೇಟರ್ ಗಳನ್ನು ವೈದ್ಯರ,ದಾದಿಯರ ಅನುಪಾತ ಲೆಕ್ಕದಲ್ಲಿಟ್ಟುಕೊಳ್ಳದೆ ತಯಾರಿಸುವುದು ನಿಷ್ಪ್ರಯೋಜಕ ಕಸರತ್ತು .ಹಾಗಾಗಿ ಸದ್ಯದ ಗಂಡಾಂತರದಿಂದ ಪಾರಾಗಲು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ .
ಇನ್ನು ಸದ್ಯದ ಪರಿಸ್ಥಿತಿ ನೋಡಿದರೆ ದಿನದಿನವು ಸೋಂಕಿತರ ಸಂಖ್ಯೆ ವೃದ್ಧಿ ಸುತ್ತಲೆ ಇದೆ, ಆದರೆ ಸಾವುಗಳು ಯುರೋಪ್ ಹಾಗೂ ಚೈನಾದಷ್ಟಿಲ್ಲ .ಇದರಿಂದ ನಮ್ಮ ಆಂತರಿಕ ರೋಗನಿರೋಧಕಶಕ್ತಿಯ ಪ್ರಮಾಣದ ಅಂದಾಜು ಮಾಡಬಹದು. ಸೊಂಕು ಇದ್ದರೂ ಸಾವುನೋವಿನ ಸಂಖ್ಯೆಗಳು ಕಡಿಮೆ. ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ. ದೊಂಬಿ ಗಲಾಟೆ ಹೊಡೆದಾಟ ಬಡಿದಾಟಗಳಿಂದ ರೋಗ ಹರಡುವಿಕೆ ಹೆಚ್ಚು .ಅವೈಜ್ಞಾನಿಕ ವಾರ್ತೆಗಳು,ಟಿವಿ ಕಾರ್ಯಕ್ರಮಗಳನ್ನು ನೋಡಿ ಗಾಬರಿಯಾಗಿ ಹಿಂಸಾಚಾರಕ್ಕಿಳಿಯುವುದು ಬೇಡ . ಗ್ರಹ ದಿಗ್ಬಂಧನದಿಂದ ಜನರು ಟಿವಿಗಳಲ್ಲಿಯ ಅವೈಜ್ಞಾನಿಕ ಹಾಗೂ ಅತಾರ್ಕಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ತಮ್ಮ ಭಯವನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ ಟಿವಿಗಳಲ್ಲಿ ರೋಗದ ಭೀಕರತೆಯ ಬಗೆಗಿನಕಾರ್ಯಕ್ರಮಗಳನ್ನು ನಿಲ್ಲಿಸಿ ಜನರಲ್ಲಿ ದೈರ್ಯ ತುಂಬುವ, ಹಾಗೂ ವೈದ್ಯ ಸಿಬ್ಬಂದಿಯ ಪ್ರಾಮುಖ್ಯತೆಯ ಕಾರ್ಯಕ್ರಮಗಳ ಬಿತ್ತರಣೆ ಆರಂಭವಾದರೆ ರೋಗಿಗಳ ಆರೈಕೆಗೆ ವೈದ್ಯಸಿಬ್ಬಂದಿ ಉಳಿಯಬಹುದು. ಇಲ್ಲದಿದ್ದರೆ ಮುಂದಿನ ಭೀಕರತೆ ಅನೂಹ್ಯ, ಜನರ ಅಳಿವು ಉಳಿವು ವೈದ್ಯ ಸಿಬ್ಬಂದಿಯ ಅಳಿವುಉಳಿವಿನ ಮೇಲೆ ಅವಲಂಬಿತ.
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415