Vydyaloka

ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು

ಕಾಮಾಲೆ ಸಮಸ್ಯೆಗೆ ಪರಿಹಾರೋಪಾಯಗಳು:  ಪಿತ್ತಕೋಶಕ್ಕೆ ಹೊರೆಯು ಹೆಚ್ಚಾದಾಗ ಕರುಳು, ಪಿತ್ತರಸ ಹಾಗೂ ವರ್ಣದ್ರವ್ಯವನ್ನು ಕೊಂಡೊಯ್ಯುವ ಪಿತ್ತರಸನಾಳಗಳ ಕಾರ್ಯಕ್ಕೆ ತೊಂದರೆಯುಂಟಾದಾಗ ಅದು ಪಿತ್ತರಸ ಮತ್ತು ವರ್ಣದ್ರವ್ಯವನ್ನು ರಕ್ತಕ್ಕೆ ಬಿಡುತ್ತದೆ. ಆಗ ಚರ್ಮದ ಬಣ್ಣವು ಹಳದಿಯಾಗುತ್ತದೆ. ಇದನ್ನೆ ಅರಿಶಿನ ಕಾಮಾಲೆ ಎನ್ನುತ್ತಾರೆ. ಇದರರ್ಥ ಪಿತ್ತ ಜನಕಾಂಗಕ್ಕೆ ತೊಂದರೆಯುಂಟಾಗಿದೆ ಎಂದರ್ಥ.

ಕಾಮಾಲೆ ಬರುವ ಸೂಚನೆಗಳು:

     ನಿದ್ದೆಬರದಿರುವುದು, ಮಲವು ಬಿಳಿ ಅಥವಾ ಬೂದುಬಣ್ಣವಾಗುವುದು, ಬಾಯಿ ಕಹಿ ಎನಿಸುವುದು, ಆಹಾರವನ್ನು ಕಂಡರೆ ವಾಕರಿಕೆ, ವಾಂತಿ ಬಂದಂತೆ ಅನಿಸುವುದು. ಸುಸ್ತಾಗುವುದು, ನಾಲಿಗೆಯ ಮೇಲೆ ಬಿಳಿಯ ಒತ್ತರ ಆಗುವುದು, ತಲೆನೋವು ಬರುವುದು. ಜ್ವರ ಬಂದಂತಾಗುವುದು. ಮಲಬದ್ಧತೆ ಉಂಟಾಗುವುದು. ಕಣ್ಣು, ಚರ್ಮ ಹಾಗೂ ಮೂತ್ರ ಹಳದಿಯ ಬಣ್ಣದಾಗುವುದು.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this: