Vydyaloka

ಋತುಸ್ರಾವ – ಆರೋಗ್ಯಕರವಾಗಿರುವುದು ಹೇಗೆ?

ಮುಟ್ಟಾಗುವುದು ಅಥವಾ ಋತುಸ್ರಾವ ಸ್ತ್ರೀಯರ ದೇಹದಲ್ಲಿ ಪ್ರಾಕೃತವಾಗಿ ಆಗುವ ಒಂದು ಪ್ರಕ್ರಿಯೆ. ಒಂದು ತಿಂಗಳ ಕಾಲ ಗರ್ಭಚೀಲದಲ್ಲಿ ಕೂಡಿರುವ ರಕ್ತ ಹಾಗೂ ಇತರೆ ಗರ್ಭದ ಜೀವಕೋಶವನ್ನು ಹೊರಹಾಕುವ ಪ್ರಕ್ರಿಯೆ ಇದಾಗಿದೆ. ಈ ರಕ್ತವು ಅಶುದ್ದ ಅಲ್ಲದಿದ್ದರು ಗರ್ಭಾಶಯದ ಆರೋಗ್ಯವನ್ನು ಕಾಯ್ದಿರಿಸಲು ಸರಿಯಾದ ಸಮಯ ಹಾಗೂ ಸರಿಯಾದ ಪ್ರಮಾಣದಲ್ಲಿ ಮುಟ್ಟಾಗುವುದು ಆರೋಗ್ಯವಂತ ಗರ್ಭಕೋಶ ಹೊಂದಲು ಪ್ರಮುಖವಾಗುತ್ತದೆ.
ಮುಟ್ಟಾಗುವ ಸ್ತ್ರೀಯನ್ನು ರಜಸ್ವಲ ಎಂದು ತಿಳಿಸಲಾಗಿದೆ. 3-5 ದಿನಗಳ ಕಾಲ ಗರ್ಭಾಶಯದಿಂದ ಹೊರಹಾಕಲ್ಫಡುವ ರಕ್ತವು ಸ್ತ್ರೀಯರಲ್ಲಿ ಹಲವು ದೈಹಿಕ. ಮಾನಸಿಕ, ಬದಲಾವಣೆ ತರುತ್ತದೆ. ಆದ್ದರಿಂದ ಈ ಸಮಯದಲ್ಲಿ ಕೆಲವು ನಿರ್ಬಂದಗಳನ್ನು, ಸಲಹೆ ಸೂಚನೆಯನ್ನು, ನಿಗದಿತ ಜೀವನಶೈಲಿಯನ್ನು ಪಾಲಿಸಲು ಆಯುರ್ವೇದದಲ್ಲಿ ರಜಸ್ವಲ ಪರಿಚರ್ಯ ಎಂದು ಉಲ್ಲೇಖಿಸಲಾಗಿದೆ.
ಸ್ವಚ್ಚತೆಯನ್ನು, ರೋಗನಿರೋಧಕ ಶಕ್ತಿಯನ್ನು, ಗರ್ಭಧರಿಸುವ ಸಾಮಥ್ರ್ಯವನ್ನು ಕಾಯ್ದಿರಿಸಿಕೊಳ್ಳಲು, ಸ್ತ್ರೀಯ ಆರೋಗ್ಯವನ್ನು ರಕ್ಶಿಸಿಕೊಳ್ಳಲು ಈ ಪರಿಚರ್ಯ ತಿಳಿಸಲಾಗಿದೆ.

ಇಂತಹ ಮಾರ್ಪಾಡು ಅಥವಾ ವಿಶಿಷ್ಠ ನಿಯಮಗಳನ್ನು ಪಾಲಿಸಿದರೆ ಯಾವುದೇ ತಡೆ ಅಥವಾ ನಿರ್ಭಂದ ರಹಿತವಾಗಿ, ಪ್ರಾಕೃತವಾಗಿ ಸ್ರಾವವಾಗಲು ಸಹಕಾರಿಯಾಗುತ್ತದೆ ಮತ್ತು ಸ್ತ್ರೀಯು ತನ್ನ ಗರ್ಭಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪ್ರತೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
9964022654
drsharmamysr@gmail.com

Share this: