Vydyaloka

ಆರ್ಯುರ್ವೇದ ಶಾಸ್ತ್ರದಲ್ಲಿ “ಪೈನ್ ಮ್ಯಾನೇಜ್ಮೆಂಟ್”

(ನೋವು ನಿವಾರಣೋಪಕ್ರಮಗಳು)

ಇತ್ತಿಚಿನ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ ಸತ್ವ, ರಜ ತಮೊ ಗುಣಗಳಲ್ಲಿ ಏರು ಪೇರಾಗಿ ವಿವಿಧ ಬಗೆಯ ರೋಗಗಳನ್ನು ಶರೀರದಲ್ಲಿ ಉತ್ಪನ್ನ ಮಾಡುವವು.
ನೋವು ಅಥವಾ ಪೈನ್ ಎಂದರೆನು? :
ಯಾವುದು ಶರೀರಕ್ಕೆ ತೊಂದರೆಯನ್ನುಂಟು ಮಾಡುವುದು, ಭಾದೆಯನ್ನುಂಟು ಮಾಡುವದು ಅದನ್ನು ನೋವು ಎಂದು ಹೇಳಲಾಗುತ್ತದೆ. ಈ ಶರೀರದಲ್ಲಿ ನೋವು ಉಂಟಾಗಬೇಕೆಂದರೆ ವಾತದೋಷವು ಪ್ರಧಾನವಾಗಿರುವುದು.
ಬೇರೆ-ಬೇರೆ ಹೆಸರುಗಳಿಂದ ಸಂದರ್ಭಕ್ಕನುಗುಣವಾಗಿ ನೋವು ನಮಗೆ ನೋಡಲು ಸಿಗುತ್ತವೆ.

ಹಾಗೆಯೇ, ಶರೀರದ ಯಾವುದೇ ಭಾಗದಲ್ಲಿ ಈ ನೋವು ಅಥವಾ ಶೂಲ ಕಾಣಿಸಿಕೊಳ್ಳಬಹುದು. ಯಾವ ಅಂಗಾವಯವಗಳಲ್ಲಿ ಶೂಲ ಕಾಣಿಸಿಕೊಂಡಾಗ ಈ ಹೆಸರಿನ ಸಂಜ್ಞೆಯಿಂದ ಕರೆಯಲಾಗುವುದು ಉದಾದರಣೆಗೆ-

ಸಾಮಾನ್ಯವಾಗಿ ಶೂಲ ಆಶ್ರಯ ಸ್ಥಾನಗಳು :

ಶೂಲಕ್ಕೆ ಸಾಮಾನ್ಯ ಕಾರಣಗಳೇನು?

ಇಲ್ಲಿ ತಿಳಿಸಿರುವ ಆಹಾರ ವಿಹಾರಗಳ ಕಾರಣದಿಂದ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನಗೊಂಡು ಉದರ ಅಂದರೆ ಕೋಷ್ಠದಲ್ಲಿಯೇ ಸಂಚಿತವಾಗಿ ಶೂಲ ವನ್ನುಂಟು ಮಾಡುವುದು ಈ ಅವಸ್ಥೆಯಲ್ಲಿ ಸರಿಯಾದ ಚಿಕಿತ್ಸೆ ನೀಡದಿದ್ದಲ್ಲಿ ಉದರದಲ್ಲಿ ಹುಣ್ಣು ಅಥವಾ ವೃಣವಾಗಿ ರೋಗವು ಮುಂದಿನ ಹಂತವನ್ನು ತಲುಪುತ್ತದೆ.

ಸಾಮಾನ್ಯ ಲಕ್ಷಣಗಳೇನು ?

ವಾತದಿಂದ ಉತ್ಪನ್ನವಾದ ಶೂಲ ಕಾರಣಳೇನು ?

ಈ ಮೇಲೆ ತಿಳಿಸಿದ ಎಲ್ಲ ಕಾರಣಗಳಿಂದ ವಾತದೋಷವು ಶರೀರದಲ್ಲಿ ಪ್ರಕೋಪಗೋಂಡು ಹೃದಯ, ಪಾಶ್ರ್ವ, ಪೃಷ್ಠ, ತ್ರಿಕಪ್ರದೇಶ ಮತ್ತು ಬಸ್ತಿ ಪ್ರದೇಶದಲ್ಲಿ ಶೂಲ ಉತ್ಪನ್ನಗೊಳಿಸುವುದು.
ಈ ಶೂಲವು ಸಾಯಂಕಾಲ ಸಮಯದಲ್ಲಿ, ವರ್ಷಋತುವಿನಲ್ಲಿ ಶೀತಕಾಲದಲ್ಲಿ ಶೂಲವು ಹೆಚ್ಚಾಗುವದು. ಈ ಸಂದರ್ಭದಲ್ಲಿ ನೋವು ಹೆಚ್ಚು ಕಡಿಮೆಯಾದಂತೆ ಅನಿಸುವುದು, ಮಲ ಮೂತ್ರ ಮತ್ತು ಅಪಾನವಾತ ಅವರೋಧವಾಗುವುದು ಮತ್ತು ಶರೀರದಲ್ಲಿ ಸೂಜಿ ಚುಚ್ಚಿದಂತೆ ನೋವಾಗುತ್ತದೆ.
ಅಭ್ಯಂಜನ, ಬೆಚ್ಚನೆಯ ಶಾಖ ಮೈ ಹಿಚ್ಚುಕುವುದು, ಸ್ನಿಗ್ದ ಮತ್ತು ಬಿಸಿಯಾದ ಆಹಾರಗಳ ಸೇವೆನೆ ನೋವನ್ನು ಕಡಿಮೆ ಮಾಡಬಹುದು.
ಪಿತ್ತಜಶೂಲ: ಕಾರಣಗಳೇನು? :
ಅತಿಯಾದ ಬಿಸಿ, ತೀಕ್ಷ್ಣಮತ್ತು ಕ್ಷಾರದಂತಹ ಆಹಾರ ಸೇವನೆ, ಅತಿಯಾದ ಹುರಳಿ, ಹುಳಿಕಾಂಜೀ, ಮದ್ಯಪಾನ ಆಧಿಕ ಬಿಸಿಲುಸೇವನೆ ಅಧಿಕ ಪರಿಶ್ರಮ
ಈ ವಿಧಾವಾದ ಸೇವಿಸಿದ ಆಹಾರವು ಕೋಷ್ಠದಲ್ಲಿ ವಿಷರೂಪವನ್ನು ಹೊಂದಿದ ನಂತರ ಪಿತ್ತವನ್ನು ದೂಷಣೆಗೊಳಿಸಿ ಪಿತ್ತ ಪ್ರಕೋಪಗೊಂಡು. ನಾಭಿ ಪ್ರದೇಶದಲ್ಲಿ ನೋವನ್ನುಂಟು ಮಾಡುವುದು.
ಈ ಸಂದರ್ಭದಲ್ಲಿ ಅಧಿಕವಾಗಿ ನೀರಡಿಕೆಯಾಗುವುದು, ಅಧಿಕವಾಗಿ ಬೆವರುವದು, ಮೂರ್ಛೆಯಾಗುವುದು, ತಲೆಸುತ್ತುವುದು. ಮಧ್ಯಾಹ್ನ, ಅರ್ಧರಾತ್ರಿ, ಬೋಜನ ಪಚನದ ಸಮಯದಲ್ಲಿ ಶರದ್ ಋತುವಿನಲ್ಲಿ ನೋವು ಹೆಚ್ಚಾಗುತ್ತದೆ.
ಶೀತಕಾಲ, ಶೀತ ಪದಾರ್ಥಗಳ ಸೇವನೆ, ಮಧುರ ಸಂಯುಕ್ತ ಆಹಾರ ಸೇವಿಸುವರಿಂದ ಶೂಲ ಶಮನವಾಗುವದು.

ಕಫದೋಷದಿಂದ ಉತ್ಪನ್ನದ ಶೂಲ ಕಾರಣಗಳೇನು? :

ಶೂಲ ಚಿಕಿತ್ಸೆ: ಮನೆಮದ್ದು

ಎಲ್ಲ ವಿಧಧ ನೋವುಗಳಿಗೆ
ಬಿಲ್ವದಬೇರು, ಚಿತ್ರದ ಬೇರು, ಶುಂಠಿ, ಹಿಂಗು ಸಮಭಾಗ ತಗೆದುಕೊಂಡು ನೀರಿನಲ್ಲಿ ಅರೆದು ಬೆಚ್ಚಗೆ ಮಾಡಿ ನೋವಿನ ಮೇಲೆ ಲೇಪನಮಾಡಬೇಕು.

ಡಾ|| ಸಂತೋಷ ನೀಲಪ್ಪ, ಬೆಳವಡಿ
ಫ್ರಾದ್ಯಾಪಕರು, ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಗದಗ
ಮೊ.: 9886916367    ayursnb@yahoo.co.in

Share this: