ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ. ಎಲ್ಲ ಕನ್ನಡಿಗರಿಗೂ ಆರೋಗ್ಯ ಶುಭ ಹಾರೈಕೆಗಳು. ನವೆಂಬರ್ 1ರಂದು ನಾವೆಲ್ಲ ಆಚರಿಸುವ ತುಳಸಿ ವಿವಾಹ ಭಾರತ ದೇಶದಲ್ಲಿ ಒಂದು ಮಹತ್ವದ ಹಬ್ಬವಾಗಿದೆ. ಎಲ್ಲ ಹಿಂದೂ ಧರ್ಮದ ಮನೆಗಳ ಮುಂದೆ ತುಳಸೀಕಟ್ಟೆ, ಇದ್ದು, ತುಳಸಿ ಗಿಡಕ್ಕೆ ಪ್ರತಿ ದಿನ ಮನೆಯ ಮಹಿಳೆಯರು ನೀರು ಹಾಕಿ, ರಕ್ಷಿಸಿ, ಮನೆಯವರಿಗಾಗಿ ಆರೋಗ್ಯ, ದೀರ್ಘಾಯುಷ್ಯ ಪ್ರಾರ್ಥಿಸುತ್ತಾರೆ. ಭಾರತೀಯ ಪುರಾಣಗಳಂತೆ, ಆರ್ಯುವೇದ ಆರೋಗ್ಯ ರಕ್ಷಣೆಯಂತೆ, ತುಳಸಿ ಸಸಿ ಅತ್ಯಂತ ಪವಿತ್ರ. ಇದು ಸೋಂಕು ನಿವಾರಕ, ಗಾಳಿ ಶುದ್ಧೀಕರಿಸುವ ಇದು ಮನೆವೈದ್ಯದಲ್ಲಿ ಕೆಮ್ಮು ನೆಗಡಿ ಜ್ವರಗಳಿಗೆ ರಾಮಬಾಣ. ಗಂಗಾ ಮಹೋತ್ಸವ ನವೆಂಬರ್ 1ರಿಂದ 3ರವರೆಗೆ ವಾರಣಾಸಿಯಲ್ಲಿ ನಡೆಯಲಿದ್ದು, ಧಾರ್ಮಿಕ, ಸಾಂಸ್ಕøತಿಕ, ಪರಂಪರಾನುಗತ ಕಾರ್ಯಕ್ರಮಗಳೊಂದಿಗೆ, ಕೇಂದ್ರ ಸರಕಾರದ ನಮಾಮಿ ಗಂಗಾ ಎಂಬ ಸ್ವಚ್ಛತಾ ಕಾರ್ಯಕ್ರಮದಡಿ, ಗಂಗಾ ಸ್ವಚ್ಛತೆಯ ರಾಷ್ಟ್ರೀಯ ಅಭಿÀಯಾನದಲ್ಲಿ ಒಳಚರಂಡಿ ಯೋಜನೆ, ನದಿಯ ಮೇಲ್ಮೈ ಸ್ವಚ್ಛತೆ, ಅರಣ್ಯೀಕಿರಣ, ಕೈಗಾರಿಕೆಗಳ ಕಲ್ಮಶದ ಬಗ್ಗೆ ಗಮನ ನದಿಯ ಮುಂಭಾಗ ಅಭಿವೃದ್ಧಿ, ಜೈವಿಕ ವೈವಿಧ್ಯತೆ, ಸಾರ್ವಜನಿಕ ಜಾಗೃತಿ, ಈ
ಗುರುನಾನಕ್ ಜಯಂತಿ ನವೆಂಬರ್ 4ರಂದು. ಸಿಖ್ಖರ ಈ ಧರ್ಮಗುರುವಿನ ಜೀವನದಲ್ಲಿ ನಡೆದ ಒಂದು ಘಟನೆ. 16ನೇ ಶತಮಾನದಲ್ಲಿ ಗಂಗಾ ನದಿ ತೀರದಲ್ಲಿ, ಪುಜಾರಿಗಳು ಹಾಗೂ ಯಾತ್ರಿಗಳು, ಗಂಗೆಯ ನೀರನ್ನು, ಉದಯಿಸುತ್ತಿರುವ ಸೂರ್ಯನ ದಿಕ್ಕಿಗೆ ಅರ್ಪಿಸುತ್ತಿದ್ದರು. ಅದು ಎಂದೋ ತೀರಿ ಹೋದ ಅವರ ಪಿತೃಗಳ ಬಾಯಾರಿಕೆ ನಿವಾರಿಸಲು. ನಾನಕ್ ಪಶ್ಚಿಮಕ್ಕೆ ನೀರು ಅರ್ಪಿಸಿದ. ಜನ ಕಾರಣ ಕೇಳಿದಾಗ, “ನನ್ನ ಊರು ಸೂರ್ಯನಿಗಿಂತ ಹತ್ತಿರ ಹಾಗೂ ನಮ್ಮ ಬೆಳೆಗಳಿಗೆ ನೀರು ಬೇಕಾಗಿದೆ.” ಸಿಖ್ ಧರ್ಮದ ನಂಬಿಕೆಯಲ್ಲಿ, ಜೀವನದಲ್ಲಿ ನಗು ಹಾಗೂ ಸಂತಸದಿಂದ ಇರುವುದೇ ಮುಖ್ಯ. ಅವರ ಸರ್ವಶಕ್ತನ ಪ್ರಾರ್ಥನೆ -‘ಮನಸ್ಸಿನ ಸಂತೋಷದ ಚೌಕಟ್ಟಿನಲ್ಲಿ ನಮ್ಮನ್ನು ಸದಾ ಇಡು, ಇಡೀ ಮಾನವತೆಗೆ ಶಾಂತಿ ಹಾಗೂ ಒಳ್ಳೆಯತನ ನೀಡು’ ಎಂದೇ ಬೇಡುತ್ತದೆ. ಅಂದು ಗುರುದ್ವಾರದಲ್ಲಿ ನಡೆಯುವ ಲಂಗರ್ ಅಂದರೆ ವಿಶೇಷ ಸಮುದಾಯ ಭೋಜನದಲ್ಲಿ, ಜಾತಿ- ವರ್ಗ- ನಂಬಿಕೆಗಳ ವ್ಯತ್ಯಾಸವಿಲ್ಲದೇ, ಎಲ್ಲರೂ ಸೇವಾ ಹಾಗೂ ಭಕ್ತಿಯಿಂದ, ಶುದ್ಧ, ಆರೋಗ್ಯಯುತ ಪೌಷ್ಠಿಕ ಆಹಾರವನ್ನು ಸಾಮೂಹಿಕವಾಗಿ ಸೇವಿಸುವುದು, ಎಲ್ಲರ ಗಮನ ಸೆಳೆಯುತ್ತದೆ.
ನವೆಂಬರ್ 2 ರಂದು ವಿಶ್ವ ನಿಮೋನಿಯಾ ದಿನಾಚರಣೆ. ಎರಡು ಅತ್ಯಂತ ಸಾಮಾನ್ಯ ಆದರೆ ಭಯಂಕರ ನಿಮೋನಿಯಾದ ಅಣುಜೀವಿ ಕಾರಣಗಳಿಗೆ ಪರಿಣಾಮಕಾರಿ ಲಸಿಕೆಗಳಿವೆ. ಹೆಮೋಫಿಲಸ್ ಇನ್ಪ್ಲುಯೆಂಝಾ ಬಿ. ತರಹದ್ದು ಹಾಗೂ ಸ್ಟ್ರೆಪ್ಟೋಕೋಕ್ಕುಸ್ ನಿಮೋನಿಯಾ ಹಾಗೂ ಅತಿ ಸಾಮಾನ್ಯ ಸೂಕ್ಷ್ಮಾಣುಜೀವಿಯ ಕಾರಣದ ನಿಮೋನಿಯಾ, ತಡೆಯಬಹುದಾದ, ಚಿಕಿತ್ಸೆಗೊಳಪಡಿಸಬಹುದಾದ ಕಾಯಿಲೆ. ಪ್ರತೀ ವರ್ಷ 5 ವರ್ಷದ ಕೆಳಗಿನ 155 ದಶಲಕ್ಷ ಮಕ್ಕಳನ್ನು ರೋಗಗ್ರಸ್ಥ ಮಾಡಿ, 1.6 ದಶಲಕ್ಷ ಮಕ್ಕಳನ್ನು ಕೊಲ್ಲುತ್ತದೆ. ಏಡ್ಸ್, ಚಳಿಜ್ವರ ಹಾಗೂ ದಢಾರಕ್ಕಿಂತ ಹೆಚ್ಚು ಮಕ್ಕಳನ್ನು ಇದು ಆಹುತಿ ತೆಗೆದುಕೊಳ್ಳುತ್ತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನೆಸ್ಕೋದ ವಿಶ್ವ ಕ್ರಿಯಾ ಯೋಜನೆಯಂತೆÉ, ನಿಮೋನಿಯಾ ತಡೆಯುವಿಕೆ ಹಾಗೂ ಚಿಕಿತ್ಸೆಗಳಿಂದ, 1 ದಶಲಕ್ಷ ಮಕ್ಕಳ ಪ್ರಾಣ ಉಳಿಸಬಹುದು.
ನವೆಂಬರ್ 8 ರಂದು ವಿಶ್ವ ವಿಕಿರಣ ಶಾಸ್ತ್ರ ದಿನಾಚರಣೆ:- ಕ್ರಿ.ಶ. 1895ರಲ್ಲಿ ಇದೇ ದಿನ, ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್, ಕ್ಷಕಿರಣ ಕಂಡು ಹಿಡಿದ ದಿನ. ಗ್ರಂಥಿ ವಿಜ್ಞಾನ ಹಾಗೂ ಕ್ಯಾನ್ಸರ್ನ ವೈದ್ಯಕೀಯ ಆಕೃತಿಗೆ ವಿಕಿರಣ ಪರೀಕ್ಷೆ ಮಹತ್ವದ್ದು. ಜನರು ತಮ್ಮ ಕಾಲ ಕಾಲದ ಆರೋಗ್ಯ ತಪಾಸಣೆಗೆ, ಕ್ಷಕಿರಣ ತಜ್ಞರ ಸೇವೆ ಬಳಸಿಕೊಳ್ಳಬೇಕಾಗಿದೆ.
ವಿಶ್ವ ಉಪಯುಕ್ತತೆ ದಿನಾಚರಣೆ ನವೆಂಬರ್ 9ರಂದು. ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ ಕಾಳಜಿ, ಸರಕಾರಿ ಸಂವಹನ, ಮನರಂಜನೆ, ಕೆಲಸಗಳಿಗಾಗಿ ಬಳಸಲು ಪ್ರಯತ್ನಿಸಬೇಕಾಗಿದೆ. ತಂತ್ರಜ್ಞಾನ, ನಮ್ಮ ಜೀವನ ಸುಧಾರಿಸಬೇಕಲ್ಲದೇ, ಅದರಿಂದ ಒತ್ತಡ, ಅಪಾಯ ಸಂಭವಿಸಬಾರದು. ವೈದ್ಯಕೀಯ ತಂತ್ರಜ್ಞಾನ, ಆರೊಗ್ಯ ಸುಧಾರಿಸಬಲ್ಲದು. ಆದರೆ ಅದರ ಬಳಕೆ ಸುಲಭವಾಗಬೇಕು. ಪೂರ್ಣ ಮನುಷ್ಯನನ್ನು ಮನಸ್ಸಿನಲ್ಲಿಟ್ಟುಕೊಂಡ ಸಂಶೋಧನೆ, ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯಪೂರ್ಣ ಆಹಾರ ಪೂರೈಸಬೇಕು.
ವಿಶ್ವ ಗುಣಮಟ್ಟದ ದಿನ ನವೆಂಬರ್ 10ರಂದು. ಸಾಧನೆಗಳನ್ನು ಸಂಭ್ರಮಿಸಿ, ಹೇಗೆ ಗುಣಮಟ್ಟ, ವ್ಯವಸ್ಥೆಗಳು ಹಾಗೂ ಸಂಸ್ಕರಣಾ ಮಾರ್ಗ ಮಾನವ ಜೀವನದ ಮೇಲೆ ಉದ್ಭವಿಸುವ ಪರಿಣಾಮ ಮಾಡಬಲ್ಲದು ಎಂಬುದರ ಬಗ್ಗೆ ಅರಿವು ಮೂಡಿಸುವುದೇ, ವಿಶ್ವ ಗುಣಮಟ್ಟ ದಿನಾಚರಣೆಯ ಉದ್ದೇಶ. ಗುಣಮಟ್ಟ ಎಂದರೆ ಹೊಸ ಶೋಧ ಹಾಗೂ ಕಾಳಜಿ. ಯಾವ ಶೋಧದಿಂದ ನಿಮಗೆ ನಿಮ್ಮ ಸುತ್ತಲಿನವರಿಗೆ, ಸಮಾಜಕ್ಕೆ, ಪರಿಸರಕ್ಕೆ, ಸುರಕ್ಷತೆ ಹಾಗೂ ನಿರಂತರತೆ, ಸಿಗುವುದೋ, ಎಲ್ಲರಿಗೂ ಉತ್ತಮ ಜೀವನ ಸಿಗುವುದೋ ಅದೇ ಗುಣಮಟ್ಟ. ಈ ನಿಟ್ಟಿನಲ್ಲಿ ಈ ದಿನ ನಾವೆಲ್ಲ ಏನು ಮಾಡಬಹುದು? ಮುಂದಿನ ತಲೆಮಾರಿಗೆ ನೀರಿನ ಪ್ರತಿ ಹನಿ ಉಳಿಸುವೆ, ಮಕ್ಕಳು ಹಾಗೂ ವೃದ್ಧರಿಗೆ ನೆರವು ನೀಡುವೆ, ಹಸಿರುಸಸಿ ನೆಡುವೆ, ನನ್ನ ಎಲ್ಲ ಸೇವೆಗಳಲ್ಲಿ ಮುಗುಳ್ನಗೆ ಇಡುವೆ, ನನ್ನ ಆಹಂಕಾರ ಇಂದು ನುಂಗುವೆ, ಸೌಹಾರ್ದತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ, ಆಹಾರವನ್ನು ತ್ಯಾಜ್ಯ ಮಾಡೋಲ್ಲ, ಅದನ್ನ ನೈರ್ಮಲ್ಯದ ರೀತಿ ವಿಲೇವಾರಿ ಮಾಡುವೆ, ವಿದ್ಯುಚ್ಛಕ್ತಿ ಉಳಿಸುವೆ, ಕಳ್ಳತನ ಮಾಡೋಲ್ಲ, ಸಾÀರ್ವಜನಿಕ ಸ್ಥಳದಲ್ಲಿ ಉಗುಳೋಲ್ಲ, ಸ್ವಾಭಾವಿಕ ಸೌಂದರ್ಯ ಹಾಳು ಮಾಡೋಲ್ಲ, ಗಲೀಜು ಮಾಡೋಲ್ಲ, ಕಾರ್ಬನ್ ಮೊನಾಕ್ಸೈಡ್ ಹೊರಬೀಳುವಂತೆ ಮಾಡೋಲ್ಲ. ಇದೀಗ ಹೇಳಿದ ಚಟುವಟಿಕೆಗಳನ್ನು ಮಾಡುವುದರಿಂದ, ನಾಳಿನ ಭವಿಷ್ಯ ಉತ್ತಮವಾಗಬಲ್ಲದು.
ನವೆಂಬರ್ 13 ವಿಶ್ವ ಕರುಣೆಯ ದಿನ ಜನಾಂಗ, ಧರ್ಮ, ಜಾತಿ ಸೀಮೆಗಳನ್ನು ದಾಟಿ, ಎಲ್ಲ ಮಾನವರತ್ತ ಕರುಣೆ ಬೀರುವ ಉದ್ದೇಶ ಇಲ್ಲಿದೆ. ಏಕೀಕೃತ ಮೈಚಾರಿಕ ಅಲೆಗಳನ್ನು ಹಾಗೂ ಎಲ್ಲರ ಜೀವನಕ್ಕೆ ಕರುಣೆಯ ಕೆಲಸಗಳನ್ನು ಮೇಳೈಸುವ, ವಿಶ್ವ ಅಲೆಗಳನ್ನು ಉತ್ತೇಜಿಸುವ ಗುರಿ ಈ ದಿನದ್ದು.
ನವೆಂಬರ್ 14 ರಂದು ವಿಶ್ವ ಮಧುಮೇಹ ದಿನ. 2015 ರಲ್ಲಿ 415 ದಶಲಕ್ಷ ವಯಸ್ಕರು ಮಧುಮೇಹಿಗಳಾಗಿದ್ದರೆ, ಈ ಸಂಖ್ಯೆ 2040ರ ಹೊತ್ತಿಗೆ 342 ದಶಲಕ್ಷಕ್ಕೆ ಏರಲಿದ್ದು, ಹತ್ತರಲ್ಲಿ ಒಬ್ಬರಿಗೆ ಮಧುಮೇಹ ಇರುತ್ತದೆ. ಬಹಳ ಜನಕ್ಕೆ ಎರಡನೆ ತರಹದ ಮಧುಮೇಹ ಬಹಳ ಕಾಲದಿಂದಿದ್ದರೂ, ಅವರಿಗೆ ಇದರ ಅರಿವಿಲ್ಲ. ತಿಳಿದು ಬರುವ ಸಮಯಕ್ಕೆ ಮಧುಮೇಹದ ಸಂಕೀರ್ಣತೆಗಳು ಹೆಚ್ಚಾಗಿರಬಹುದು.
ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡಲು ಚಾಚಾ ನೆಹರೂ ಕರೆ ನೀಡಿದ್ದಂತೆ, ನಮ್ಮ ದೇಶದಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನ ಅವರ ಪ್ರತಿಭಾ ಪ್ರದರ್ಶನ
ನವೆಂಬರ್ 17ರಂದು ವಿಶ್ವ ಅಕಾಲಿಕ ಜನನ ದಿನ. ಪ್ರತೀವರ್ಷ 15 ದಶಲಕ್ಷ ಶಿಶುಗಳು, ದಿನ ತುಂಬುವ ಮುಂಚೆಯೇ ಹುಟ್ಟುತ್ತವೆ. ಇದೊಂದು ಗಂಭೀರ ಆರೋಗ್ಯ ಸಮಸ್ಯೆ. ಇಲ್ಲಿ ಉಳಿದುಕೊಂಡ ಬಹಳಷ್ಟು ಮಕ್ಕಳಿಗೆ, ಜೀವನದಾದ್ಯಂತ ಆರೋಗ್ಯ ಸಮಸ್ಯೆಗಳಿರುತ್ತವೆ. ಉದಾ: ಮೆದುಳಿನ ತೊಂದರೆಯಾದ ಪಾಶ್ರ್ವವಾಯು, ಮೂರ್ಛೆ ರೋಗ, ದೃಷ್ಟಿ ಹಾಗೂ ಶ್ರವಣ ನಷ್ಟ , ಬೌದ್ದಿಕ ವಿಕಲಾಂಗತೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಆ ಶಿಶುಗಳಿಗೆ ವಿಶೇಷ ಕಾಳಜಿ ನೀಡುವುದೇ, ಈ ದಿನಾಚರಣೆ ಉದ್ದೇಶ. ನವೆಂಬರ್ನಲ್ಲಿ ಮೊವೆಂಬರ್ ಎಂಬ ವಾರ್ಷಿಕ ಆಚರಣೆಯಿದ್ದು, ಆಗ ಪುರುಷರ ಆರೋಗ್ಯ ವಿಷಯಗಳಾದ ಪ್ರಾಸ್ಟೇಟ್ ಕ್ಯಾನ್ಸರ್, ತರಡು ಬೀಜದ ಕ್ಯಾನ್ಸರ್, ಖಿನ್ನತೆ ಹಾಗೂ ಪುರುಷರ ಆತ್ಮಹತ್ಯೆ, ಕ್ಯಾನ್ಸರನ್ನು ಬೇಗ ಪತ್ತೆ ಹಚ್ಚಿ, ತಪಾಸಣೆ ಮಾಡಿ ಪರಿಣಾಮಕಾರಿ ಚಿಕಿತ್ಸೆ ನೀಡಿ, ತಡೆಯಬಹುದಾದ ಸಾವನ್ನು ತಡೆಯುವುದು ಈ ಆಚರೆಣೆಯ ಗುರಿ.ಇವುಗಳ ಬಗ್ಗೆ ಅರಿವು ಮೂಡಿಸಲು ಮೀಸೆ ಬೆಳೆಸುವ ಸಾಂಕೇತಿಕ ಕಾರ್ಯಕ್ರಮ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ಗಳಲ್ಲಿ ನಡೆಯುತ್ತದೆ.
ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238