ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ
ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ವತಿಯಿಂದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ – 2026” ಅನ್ನು ಆಯೋಜಿಸಲಾಗಿದೆ.
“ವೈದ್ಯಲೋಕ” ಆರೋಗ್ಯ ಮಾಸ ಪತ್ರಿಕೆ ಮತ್ತು ಮೀಡಿಯಾ ಐಕಾನ್ ಸಂಸ್ಥೆಗಳು ಈ ಸ್ಪರ್ಧೆಗೆ ಸಹಯೋಗ ನೀಡುತ್ತಿವೆ.
ಸ್ಪರ್ಧೆಯ ಉದ್ದೇಶ:
ಬರವಣಿಗೆಯ ಮೂಲಕ ಆರೋಗ್ಯ ಮತ್ತು ಸ್ವಾಸ್ಥ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಧ್ವನಿಯಾಗುವುದು. ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ ಎಂಬುದು ಪರಿಷತ್ತಿನ ಆಶಯ.
ಕವನ ಮತ್ತು ಕಥೆಗಳಿಗೆ ಕಡ್ಡಾಯ ಮಾರ್ಗಸೂಚಿ:
* ವಿಷಯ ಕಡ್ಡಾಯವಾಗಿ ಆರೋಗ್ಯಕ್ಕೆ ಸಂಬಂಧಿಸಿರಬೇಕು – ಮಧುಮೇಹ, ರಕ್ತದೊತ್ತಡ, ಮಾನಸಿಕ ಆರೋಗ್ಯ, ಪೋಷಣೆ, ವ್ಯಾಯಾಮ, ಸ್ವಚ್ಛತೆ, ಸಾಂಕ್ರಾಮಿಕ ರೋಗ ಜಾಗೃತಿ, ಮಹಿಳಾ ಆರೋಗ್ಯ, ವೃದ್ಧಾಪ್ಯ ಆರೈಕೆ, ಮಾದಕ ದ್ರವ್ಯ ಮುಕ್ತಿ, ಅಂಗಾಂಗ ದಾನ ಇತ್ಯಾದಿ.
*ಶಿಕ್ಷಣ + ಭಾವನೆ ಎರಡೂ ಇರಬೇಕು: ವೈಜ್ಞಾನಿಕ ಮಾಹಿತಿಯೊಂದಿಗೆ ಜನರ ಮನಸ್ಸು ಮುಟ್ಟುವ ಕಥೆ/ಕವನ.
*ಪದ ಮಿತಿ ಇಲ್ಲ: ಆಳವಾದ ಕಥೆ ಬೇಕಾದರೂ, 10 ಸಾಲಿನ ಕವನ ಬೇಕಾದರೂ ಸ್ವಾಗತ. ಸಂಕ್ಷಿಪ್ತವಾಗಿ ಸಂದೇಶ ತಲುಪಿಸುವುದು ಮುಖ್ಯ.
*ನೈಜ ಅನುಭವಕ್ಕೆ ಆದ್ಯತೆ: ರೋಗಿಯ ಕಥೆ, ಡಾಕ್ಟರ್ ಅನುಭವ, ರೋಗ ನಿವಾರಿಸಿದ ಶಿಸ್ತು – ಇಂತಹ ಬರಹಗಳಿಗೆ ಹೆಚ್ಚಿನ ಅಂಕ.
3 ವಿಭಾಗಗಳಲ್ಲಿ ಸ್ಪರ್ಧೆ:
1. ಸಾರ್ವಜನಿಕರು
2. ವೈದ್ಯರು ಮತ್ತು ಆರೋಗ್ಯ ವೃತ್ತಿಪರರು
3. ವೈದ್ಯಕೀಯ ವಿದ್ಯಾರ್ಥಿಗಳು
ಏಕೆ ಭಾಗವಹಿಸಬೇಕು?
– ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸುವರ್ಣ ಅವಕಾಶ
– ಸಾಹಿತ್ಯದ ಮೂಲಕ ಆರೋಗ್ಯ ಜಾಗೃತಿ ಹರಡಲು ವೇದಿಕೆ
– ಆಯ್ದ ಬರಹಗಳು ‘ವೈದ್ಯಲೋಕ’ ಮಾಸಪತ್ರಿಕೆ ಹಾಗೂ ವೆಬ್ಸೈಟ್ನಲ್ಲಿ ಪ್ರಕಟ
– ಆರೋಗ್ಯ ವಿಷಯ ಲೇಖಕರಾಗಿ ಗುರುತಿಸಿಕೊಳ್ಳುವ ಅವಕಾಶ
– ವಿಜೇತರಿಗೆ ಪ್ರಶಸ್ತಿ, ಬಹುಮಾನ ಮತ್ತು ಪ್ರಮಾಣಪತ್ರ
ಆರೋಗ್ಯವೆಂಬುದು ಕೇವಲ ದೇಹದ ವಿಚಾರವಲ್ಲ, ಅದು ಸಾಮಾಜಿಕ ಜವಾಬ್ದಾರಿ ಕೂಡ. ಕವನ, ಕಥೆಗಳ ಮೂಲಕ ಜನರ ಮನಸ್ಸಿಗೆ ತಲುಪಿದರೆ ಜಾಗೃತಿ ಶಾಶ್ವತ. ಎಲ್ಲಾ ಬರಹಗಾರರು, ವೈದ್ಯರು, ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಕೈಜೋಡಿಸಿ.
ಆಯ್ದ ಉತ್ತಮ ಕಥೆ-ಕವನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಲೇಖಕರನ್ನು ಪ್ರೋತ್ಸಾಹಿಸುತ್ತೇವೆ. ಆರೋಗ್ಯ, ಚಿಕಿತ್ಸೆ ಮತ್ತು ಮಾನವತೆ ಈ ಮೂರನ್ನೂ ಬೆಸೆಯುವ ಸಾಹಿತ್ಯ ಇಂದಿನ ಅಗತ್ಯ.
ಆರೋಗ್ಯ, ಚಿಕಿತ್ಸೆ ಮತ್ತು ಮಾನವತೆ – ನಿಮ್ಮ ಪದಗಳು ಆರೋಗ್ಯಕರ ಭವಿಷ್ಯಕ್ಕೆ ಪ್ರೇರಣೆಯಾಗಲಿ!
ಕಥೆ ಮತ್ತು ಕವನ ಕಳುಹಿಸಲು ಕೊನೆಯ ದಿನಾಂಕ: ಜೂನ್ 30, 2026
ಬರಹಗಳನ್ನು ಕಳುಹಿಸಬೇಕಾದ ವಿಳಾಸ:
ಇಮೇಲ್: mediaicon@ymail.com
ವಾಟ್ಸಪ್: 81975 54373
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀಕೃಷ್ಣ ಮಾಯ್ಲೆಂಗಿ : 81975 54373
ಎನ್.ವಿ. ರಮೇಶ್: 98455 65238