Vydyaloka

ಮಧುಮೇಹದಿಂದ ಬರುವ ಕಾಲಿನ ತೊಂದರೆಗಳಿಗೆ ನಿಸರ್ಗದತ್ತ ಪರಿಹಾರ

“ಜಿತೇನ ಲಭ್ಯತೇ ಲಕ್ಷ್ಮಿಃ ಮೃತೇನಾಪಿ ಸುರಾಂಗನಾ|
ಕ್ಷಣವಿಧ್ವಂಸಿ ಕಾಯೇಸ್ಮಿನ್ ಕಾ ಚಿಂತಾ ಮರಣೀರಣೀ||”
‘ಶಿಲಾಶಾಸನವು ಹೇಳುವಂತೆ ಜೀವನ ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗಲಕ್ಷ್ಮಿ; ಹೇಗೂ ಈ ಶರೀರ ಒಂದು ದಿನ ಅಳಿಯುವುದು ಇದ್ದೇ ಇದೆ ಅಂದಾಗ ಮರಣಕ್ಕಾಗಿ ಹಾಗೂ ಹೋರಾಟಕ್ಕಾಗಿ ಚಿಂತಿಸುವುದೇಕೆ” ಎಂಬಂತೆ ನಾವು ಇಂದಿನ ಕಾಲದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗಳಿಗೂ ಚಿಂತೆಯನ್ನು ಮಾಡಿಕೊಳ್ಳುತ್ತ ನಮ್ಮೆದುರಿಗೆ ಸುಲಭವಾಗಿ ದೊರೆಯುವ ಪರಿಹಾರವನ್ನು ನಿರ್ಲಕ್ಷಿಸುತ್ತ ಆರೋಗ್ಯ ರಕ್ಷಣೆಗಾಗಿ ಹೆಣಗಾಡುತ್ತಿದ್ದೇವೆ. ಅಂತಹ ಪರಿಹಾರೋಪಾಯಗಳಲ್ಲಿ ಅಗ್ರಸ್ಥಾನ ಪಡೆಯುವಂತದ್ದು ಪ್ರಕೃತಿ ಚಿಕಿತ್ಸೆ ಮನೆಮದ್ದು.
ಇಂದಿನ ಕಾಲದಲ್ಲಿ ನಮ್ಮ ನಡುವೆ ಸಾಮಾನ್ಯವಾಗಿ ಕಾಣುವಂತಹ, ಕಾಡುವಂತಹ ಸಮಸ್ಯೆ ‘ಮಧುಮೇಹ’. ಈ ಮಧುಮೇಹದಿಂದ ಬರುವಂತಹ ಕಾಲು ಉರಿ ಹಾಗೂ ಕಾಲಿಗೆ ಜೋಮು ಹಿಡಿಯುವುದನ್ನು ಕಡಿಮೆ ಮಾಡಲು ಸುಲಭವಾಗಿ ಯಾವ ಯಾವ ರೀತಿಯಾದ ಕ್ರಮಗಳನ್ನು ಅನುಸರಿಸಬೇಕೆಂಬುದಾಗಿ ಈ ಕೆಳಗೆ ನೀಡಲಾಗಿದೆ.
ಯಾವಾಗಿನಂತೆ ಕುರ್ಚಿಯ ಮೇಲೆ ಕುಳಿತು 300 ಬಾರಿ ದಿನಕ್ಕೆ ಮೂರು ಸಲದಂತೆ ಮೇಲೆ ಕೆಳಗೆ ತೂಗು ಆಡಿಸಿದರೆ ಕಾಲಿನ ತೊಂದರೆ ಕಡಿಮೆ ಯಾಗುತ್ತದೆ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:9448729434/9731460353
Email: drvhegde@yahoo.com; nisargamane6@gmail.com
http://nisargamane.com
Share this: