Vydyaloka

ಹೃದಯಕ್ಕೆ ಗಂಡಾಂತರ ತರುವ ಸಿಎಚ್‍ಡಿ-ಆರೋಗ್ಯಕರ ಪಥ್ಯಾಹಾರ ಟಿಪ್ಸ್


ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಎಂಬ ಹೃದ್ರೋಗ ಉಂಟಾಗುತ್ತದೆ.

ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಎಂಬ ಹೃದ್ರೋಗ ಉಂಟಾಗುತ್ತದೆ.ಕೊರೊನರಿ ಅಡಚಣೆಗಳಿಂದಾಗಿ ಸಾಮಾನ್ಯವಾಗಿ ಕಂಡು ಬರುವ ಚಿಹ್ನೆ ಮತ್ತು ಲಕ್ಷಣಗಳೆಂದರೆ, ಎದೆ ನೋವು (ತಾಂತ್ರಿಕವಾಗಿ ಆಂಜೈನಾ ಪೆಕ್ಟೊರಿಸ್ ಎಂದು ಕರೆಯುತ್ತಾರೆ), ಹೃದಯಾಘಾತ (ಮಯೋಕಾರ್ಡಿಯಲ್ ಇನ್‍ಫರ್‍ಕ್ಷನ್), ಪಂಪ್ ಮಾಡುವಿಕೆ ಇಳಿಮುಖ (ಹೃದಯ ವೈಫಲ್ಯ) ಹಾಗೂ ಹೃದಯ ಸ್ತಂಭನದಿಂದ ಹಠಾತ್ ಸಾವು ಸಂಭವಿಸಬಹುದು.

ಹೃದಯಾಘಾತಕ್ಕೆ ಕಾರಣವಾಗುವ ಗಂಡಾಂತರ ಅಂಶಗಳು:

ತಪಾಸಣೆ:

ಹೃದ್ರೋಗದ ಚಿಹ್ನೆಗಳು

ಹೃದಯಾಘಾತ ತಡೆಗೆ ಕ್ರಮಗಳು:

ರಕ್ತದೊತ್ತಡ ನಿಯಂತ್ರಣ : ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಹೃದ್ರೋಗ ಪಾಶ್ರ್ವವಾಯು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮೂತ್ರಪಿಂಡ ವೈಫ್ಯಲಗಳ ಗಂಡಾಂತರವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮಾದರಿ ರಕ್ತದೊತ್ತಡವು ಯಾವಾಗಲೂ 135/85 ಎಂಎಂಎಚ್‍ಜಿಗಿಂತ ಕಡಿಮೆ ಹಾಗೂ ಮಧುಮೇಹವನ್ನು 110/70ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವ ಗುರಿ ಹೊಂದಬೇಕು.ಉಪ್ಪು ಸೇವನೆ ನಿರ್ಬಂಧ, ತೂಕ ನಿಯಂತ್ರಣ ನಿರ್ವಹಣೆ, ಆಲ್ಕೋಹಾಲ್ ತ್ಯಜಿಸುವಿಕೆ, ಏರೋಬಿಕ್ ವ್ಯಾಯಾಮಗಳು ಒತ್ತಡ ನಿರ್ವಹಣೆ ಹಾಗೂ ವೈದ್ಯರ ಸಲಹೆಯಂತೆ ಔಷಧಗಳ ಬಳಕೆಯಂಥ ಪ್ರಜ್ಞಾಪೂರ್ವಕ ಕ್ರಮಗಳಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
ಮಧುಮೇಹ ಮತ್ತು ಹೃದಯ : ಏಳು ಮಂದಿ ಭಾರತೀಯರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ ಹಾಗೂ ಎಲ್ಲ ಹೃದ್ರೋಗಿಗಳಲ್ಲಿ ಶೇ.30 ಮಂದಿ ಮಧುಮೇಹಿಗಳು ಎಂಬುದನ್ನು ಅಂಕಿಅಂಶಗಳು ಬಹಿರಂಗಗೊಳಿಸಿವೆ. ಚಿಕ್ಕ ವಯಸ್ಸಿನಲ್ಲೇ ಗೋಚರಿಸುವ ಡಯಾಬಿಟಿಸ್ ರೋಗಗಳಲ್ಲಿ ಹೃದ್ರೋಗ ವ್ಯಾಪಕವಾಗಿದ್ದು, ಚಿಕಿತ್ಸೆ ನೀಡಲು ತುಂಬಾ ಕಷ್ಟವಾಗುತ್ತದೆ. ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಕಾಣಿಸಿಕೊಳ್ಳಲು ಮತ್ತು ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಸಕ್ಕರೆ ಕಾಯಿಲೆಯನ್ನು ಉತ್ತಮವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ.
ಕೊಲೆಸ್ಟೆರಾಲ್ ನಿಯಂತ್ರಣದ ಮಹತ್ವ: ಕೊಲೆಸ್ಟೆರಾಲ್ ಪ್ರಮಾಣಗಳ ಮೇಲೆ ನಿಗಾ ವಹಿಸುವುದು, ಬ್ಲಾಕ್‍ಗಳು (ರಕ್ತನಾಳಗಳಲ್ಲಿ ಸುಗಮ ರಕ್ತ ಪೂರೈಕೆಗೆ ಅಡಚಣೆಯಾಗುವಿಕೆ) ಅಭಿವೃದ್ದಿಯಾಗುವ ಸಾಧ್ಯತೆ ಬಗ್ಗೆ ಹಾಗೂ ಕೊಲೆಸ್ಟೆರಾಲ್ ಮಟ್ಟಗಳನ್ನು ತಗ್ಗಿಸುವ ಬಗ್ಗೆ ತಿಳಿಸುತ್ತದೆ. ಉತ್ತಮ ಪಥ್ಯಾಹಾರ, ವ್ಯಾಯಾಮ ಹಾಗೂ ಔಷಧಿಗಳ ಮೂಲಕ ಕೊಲೆಸ್ಟೆರಾಲ್ ನಿಯಂತ್ರಣವನ್ನು ಸಾಧಿಸಬಹುದು.

ಹೃದಯಕ್ಕೆ ಆರೋಗ್ಯಕರ ಪಥ್ಯಾಹಾರ ಟಿಪ್ಸ್:

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com
http://tathagathearthospital.com/

Share this: