ಆರ್ಥಿಕ ಆರೋಗ್ಯ ಮತ್ತು ಆನಂದಕ್ಕಾಗಿ ಪ್ರಸ್ತುತ ಲೇಖನದಲ್ಲಿ ಹೇಳಲಾದ ಐದು ಮಾರ್ಗಗಳನ್ನು ಅನುಸರಿಸಿ. ದಿನ ನಿತ್ಯದ ಜೀವನದಲ್ಲಿ ವೈಯುಕ್ತಿಕ ಹಣಕಾಸಿನ ಸ್ಥಿತಿ ಒತ್ತಡವನ್ನುಂಟುಮಾಡಬಹುದು. ಆದರೆ ಹಣವೇ ಎಲ್ಲವೂ ಅಲ್ಲ.
“ಆನಂದಕ್ಕೆ ಮಾರ್ಗವಿಲ್ಲ ಆನಂದವೇ ಮಾರ್ಗ” – ಬುದ್ದ
ಭಾರತೀಯರಿಗೆ, ಸುಖಮಯ ಜೀವನಸ್ಥಿತಿ, ಉತ್ತಮ ಆರೋಗ್ಯ, ಉತ್ತಮ ಆರ್ಥಿಕ ಪರಿಸ್ಥಿತಿ, ಸ್ನೇಹಿತರು ಮತ್ತು ಜೀವನದಲ್ಲಿ ಉದ್ದೇಶವಿಟ್ಟುಕೊಳ್ಳುವಿಕೆ, ಹವ್ಯಾಸಗಳು ಹಾಗೂ ಆಸಕ್ತಿಗಳು ಪ್ರೇರಣಕಾರಿ ವಿಷಯಗಳಾಗಿವೆ ಮತ್ತು ಮುಖ್ಯವಾಗಿವೆ. ಮುಂದುವರೆದು, ಭಾರತೀಯರಿಗೆ ವೇತನ ಹೆಚ್ಚಳಕ್ಕಿಂತ ಆರೋಗ್ಯ ಮತ್ತು ಆನಂದ ಮುಖ್ಯವೆಂದೂ, ಆನಂದವು ಯಶಸ್ಸಿನ ಕೀಲಿಕೈಯೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಆನಂದ ಸಿದ್ದಾಂತ – ಹಣದಿಂದ ಆನಂದ?
1. ಹಣವೇ ಎಲ್ಲವೂ ಅಲ್ಲ. ಹಣವು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದ ನಂತರ, ಹಣವು ಹೆಚ್ಚಿನ ಆನಂದವೆಂದು ಅರ್ಥವಲ್ಲ.
2. ಜೀವನವು ಅನುಭವಗಳ ಸಂತೆ. ಅನುಭವಗಳಿಂದ ದೊರೆಯುವ ಆನಂದವು, ವಸ್ತುಗಳಿಂದ ದೊರೆಯುವ ಆನಂದಕ್ಕಿಂತ ಹೆಚ್ಚಿನದವುಗಳಾಗಿರುತ್ತದೆ.
3. ಸ್ವಾರ್ಥಕ್ಕಿಂತ ಸೇವೆಯನ್ನು ಅಭ್ಯಸಿಸಿ. ಸ್ವಂತಕ್ಕಿಂತ ಇತರರಿಗಾಗಿ ಹಣವನ್ನು ಖರ್ಚು ಮಾಡಿ.
4. ಸಣ್ಣದು ಸುಂದರ. ಸಣ್ಣ ಸಣ್ಣವಸ್ತುಗಳಲ್ಲಿ, ದೊಡ್ಡ ವಸ್ತುಗಳನ್ನು ಖರೀದಿಸುವ ಬದಲಾಗಿ ಆನಂದವನ್ನು ಅನುಭವಿಸಿ.
5. ಖರೀದಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೇಡ.
6. ದಾನ ಧರ್ಮದ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ಆರ್ಥಿಕ ಆರೋಗ್ಯ ಮತ್ತು ಆನಂದಕ್ಕಾಗಿ ಐದು ಮಾರ್ಗಗಳು
ದಿನ ನಿತ್ಯದ ಜೀವನದಲ್ಲಿ ವೈಯುಕ್ತಿಕ ಹಣಕಾಸಿನ ಸ್ಥಿತಿ ಒತ್ತಡವನ್ನುಂಟುಮಾಡಬಹುದು. ಸ್ವಾಸ್ಥ್ಯಕ್ಕಾಗಿ ಮತ್ತು ಆನಂದಕ್ಕಾಗಿ ಆರ್ಥಿಕ ಸ್ವಾತಂತ್ರದ ಅಗತ್ಯವಿದೆ. ಆರ್ಥಿಕ ಆರೋಗ್ಯ ಮತ್ತು ಆನಂದಕ್ಕಾಗಿ ಕೆಳಗಿನ ಐದು ಮಾರ್ಗಗಳನ್ನು ಅನುಸರಿಸಿ :
Also Read: ಆರೋಗ್ಯ ಮತ್ತು ಸಂತೋಷದಲ್ಲಿ ಹಣ ಮುಖ್ಯವೇ?