Vydyaloka

ಜೂ.25ಕ್ಕೆ ತೊನ್ನು ಚಿಕಿತ್ಸಾ ಶಿಬಿರ

ಬೆಂಗಳೂರು: ವಿಶ್ವ ವಿಟಿಲಿಗೊ (ತೊನ್ನು ರೋಗ) ದಿನಾಚರಣೆ ಪ್ರಯುಕ್ತ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‍ಸ್ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ ಜೂ. 25ರಂದು ಚರ್ಮ ವ್ಯಾಧಿಗಳಾದ ಬಿಳಿಮಚ್ಚೆ, ತೊನ್ನು ಹಾಗೂ ಲ್ಯೂಕೊಡೆರ್ಮ ರೋಗಗಳಿಗೆ ಒಂದು ದಿನದ ವಿಶೇಷ ತಪಾಸಣಾ, ಸಲಹಾ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಆಸಕ್ತರು ನೋಂದಣಿ ಹಾಗೂ ವಿವರಕ್ಕೆ ದೂ. 080-22718025 ಸಂಪರ್ಕಿಸಬಹುದು

Share this: