Vydyaloka

ಸಂಜಯ ನಗರ ಆರೋಗ್ಯ ಮೇಳ

ಮಹಾನಸ ಆಯುರ್ವೇದ ಸಂಸ್ಥೆಯಿಂದ ನವೆಂಬರ್ 19 ರಂದು ಆರೋಗ್ಯ ಮೇಳವನ್ನು ಸಂಜಯನಗರದ ಸುಭಾಶ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಶಾಸಕರಾದ ಬೈರತಿ ಸುರೇಶ್ ಈ ಮೇಳವನ್ನು ಉದ್ಘಾಟಿಸಿದರು. ಹಿರಿಯ ಆಯುರ್ವೇದ ತಜ್ಞ ನಿವೃತ್ತ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಮೇಳದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಮಹಿಳೆಯರಿಗೆ ಆರೋಗ್ಯ ಅಡುಗೆಯ ಸ್ಪರ್ಧೆ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ದಂತ ತಪಾಸಣೆ, ಫಿಸಿಯೋಥೆರಪಿ, ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಮಹಾನಸ ಸಂಸ್ಥೆಯ ಡಾ. ಅರ್ಚನ ಹಾಗೂ ಸಮರ್ಪಣ ಟ್ರಸ್ಟ್‍ನ ಶ್ರೀ ಜಯಸಿಂಹ, ಆಯುರ್ವೇದ ತಜ್ಞೆ ಅನ್ನಪೂರ್ಣ ಪಾಲ್ಗೊಂಡಿದ್ದರು. ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು.

Share this: