ಬೆಂಗಳೂರು : ಆಯುಷ್ ಆರೋಗ್ಯ ಫೌಂಡೇಷನ್, ಕರ್ನಾಟಕದ ಅತ್ಯಂತ ಜನಪ್ರಿಯ ಆರೋಗ್ಯ ಮಾಸಪತ್ರಿಕೆ ‘ವೈದ್ಯಲೋಕ’ ಸಹಯೋಗದೊಂದಿಗೆ ಇದೀಗ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು ಮೊದಲ ಬಾರಿಗೆ ರಾಜ್ಯ ಮಟ್ಟದ ಆರೋಗ್ಯ ಕವನ ಮತ್ತು ಕಥಾ ಸ್ಪರ್ಧೆ ಏರ್ಪಡಿಸಿದೆ.
- ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವಿದ್ದು, ಪ್ರಶಸ್ತಿ ಪತ್ರದ ಜೊತೆಗೆ ನಗದು ಬಹುಮಾನ ನೀಡಲಾಗುವುದು.
- ಯಾವುದೇ ಆರೋಗ್ಯ ವಿಷಯದ ಬಗ್ಗೆ ಕಥೆ ಮತ್ತು ಕವನ ಬರೆಯಬಹುದು. ಬಹುಮಾನ ಪಡೆದ ಮತ್ತು ಆಯ್ದ ಕಥೆ, ಕವನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವುದರ ಜೊತೆಗೆ ಪುಸ್ತಕವಾಗಿಯೂ ಪ್ರಕಟಿಸಲಾಗುವುದು. ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ, ಪರ್ಯಾಯ ಚಿಕಿತ್ಸೆ, ಪಾರಂಪರಿಕ ವೈದ್ಯರು ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದ್ದು, ವೈದ್ಯ ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ರಾಜ್ಯ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಮೊದಲ ಬಾರಿಯಾಗಿದೆ.
- ಕಥೆ ಮತ್ತು ಕವನಗಳನ್ನು ಇ-ಮೇಲ್ ಮೂಲಕ ಅಥವಾ ಪೋಸ್ಟ್ ಮುಖಾಂತರ ಕಳುಹಿಸಬಹುದು.
ಕಥೆ ಮತ್ತು ಕವನ ಕಳುಹಿಸಲು ಕೊನೆಯ ದಿನಾಂಕ : ಏಪ್ರಿಲ್ 30, 2019
ಕಥೆ ಮತ್ತು ಕವನ ಸ್ಪರ್ಧೆ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
8197554373 / 9844060592 / 9844030946
ವಿಳಾಸ : ಮೀಡಿಯಾ ಐಕಾನ್, ನಂ. 2 &3, ಜನನಿ, 1ನೇ ಮಹಡಿ, 7ನೇ ಅಡ್ಡ ರಸ್ತೆ, ಸೆಂಟ್ರಲ್ ಎಕ್ಸೈಸ್ ಲೇಔಟ್, ಸಂಜಯನಗರ, ಬೆಂಗಳೂರು – 560 094 ಮೊ.: 8197 554373
ಇಮೇಲ್ : mediaicon@ymail.com ವೆಬ್ಸೈಟ್ : www.vydyaloka.in, www.healthvision.in