ಮುನಿಯಾಲು ಆಯುರ್ವೇದದಿಂದ ರೋಗನಿರೋಧಕ ಶಕ್ತಿವರ್ಧನೆಯ ಔಷಧೀಯ ಸಸ್ಯಗಳ ಉಚಿತ ವಿತರಣೆ.
ಅಂದು ಮುಂಜಾನೆ 9 ಗಂಟೆಯಿಂದ ಸಂಜೆ 4ರ ತನಕ ಉಚಿತವಾಗಿ ಮರಗಳಾದ ಪೇರಳೆ, ಬಿಲ್ವಪತ್ರೆ, ಕಹಿಬೇವು, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ನೇರಳೆ, ತಾರೆಕಾಯಿ, ನೊರೆಕಾಯಿ, ಹಾಗೂ ಬಳ್ಳಿ ಮತ್ತು ಗಿಡಗಳಾದ ಹಿಪ್ಪಲಿ, ಅಮೃತ ಬಳ್ಳಿ, ಸಂಧಿಬೀಳು, ಕಾಳುಮೆಣಸು ಮತ್ತು ಇತರ ಸಸಿಗಳನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟನೆ ಕೋರಿದೆ.