Vydyaloka

ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

ದಿನಾಂಕ 01/07/2015ರ ಬುಧವಾರ ವೈದ್ಯ ದಿನಾಚರಣೆಯ ಅಂಗವಾಗಿ  ಮುನಿಯಾಲು ಆಯುರ್ವೇದ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸಂಸ್ಥೆಯಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಮಧ್ಯಾಹ್ನ 3.00 ಕ್ಕೆ ರಾಷ್ಟ್ರೀಯ  ಸೇವಾ ಯೋಜನೆಯ  ಆರೋಗ್ಯ ಘಟಕ “ಜೀವಾಮೃತಂ” ನ ವೆಬ್ ಸೈಟ್ ನ್ನು ಅನಾವರಣ ಮಾಡಲಾಯಿತು. ಜೊತೆಗೆ ಸಂಸ್ಥೆಯಲ್ಲಿ ಒಂದು ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ವಿಡಿಯೋ ಕ್ಲಿಪ್ ಮತ್ತು ವಿದ್ಯಾರ್ಥಿಗಳು  ತಯಾರಿಸಿದ ಅರಿವು ಮೂಡಿಸುವ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರಾಂಶುಪಾಲರಾದ ಡಾ. ಸತ್ಯನಾರಾಯಣರವರು  ವೈದ್ಯರ ದಿನದ ಪ್ರಾಮುಖ್ಯತೆಯನ್ನು  ತಿಳಿಸಿ, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಸ್ಥೆಯ ರಾಷ್ಟ್ರೀಯ  ಸೇವಾ ಯೋಜನೆಯ ಅಧಿಕಾರಿ ಡಾ. ಪ್ರದೀಪ್, ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕುಮಾರಿ ಪಾರ್ವತಿ ಪ್ರಾರ್ಥನೆ ನೆರವೇರಿಸಿದರು.  ವಿದ್ಯಾರ್ಥಿ ನಾಯಕ ಸಾತ್ವಿಕ್ ಶೆಟ್ಟಿ  ನಿರೂಪಿಸಿದರು.

Share this: