Vydyaloka

ಕಾಂಗ್ರೆಸ್ ನಾಯಕ ಕೃಷ್ಣಮೂರ್ತಿ ಹುಟ್ಟು ಹಬ್ಬ- ಆರೋಗ್ಯಮೇಳ

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ಕೃಷ್ಣಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ರಾಮಮೂರ್ತಿ ಬಡಾವಣೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಅಪಾರ ಸಂಖ್ಯೆಯ ಅಭಿಮಾನಿಗಳು,ಪಕ್ಷದ ಕಾರ್ಯಕರ್ತರು, ಬಂಧುಗಳು ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದು, ಕೃಷ್ಣ ಮೂರ್ತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೊರಿದರು.

ಕೃಷ್ಣ ಮೂರ್ತಿ ಅವರ ಪತ್ನಿ ಮತ್ತು ಬೆಂಗಳೂರು ನಗರ ಉತ್ತರ ವಿಭಾಗದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತ ಕೃಷ್ಣ ಮೂರ್ತಿ ಕಾರ್ಯ ಕ್ರಮದ ಉಸ್ತುವಾರಿ ವಹಿಸಿದ್ದರು.

ವೈದ್ಯಲೋಕ, ಹೆಲ್ತ್ ವಿಷನ್ ಮಾಸ ಪತ್ರಿಕೆಗಳು ಮತ್ತು ಸ್ಥಳೀಯ ಆಸ್ಪತ್ರೆ ನಾರಾಯಣಿ ಹೆಲ್ತ್ ಕ್ಲೀನಿಕ್ ಸಹಭಾಗಿತ್ವದಲ್ಲಿ ಆರೋಗ್ಯಮೇಳ ನಡೆಸಲಾಯಿತು.

  

Share this: