Vydyaloka

ದೀಪಾವಳಿ:  ಬೇಡ ಪಟಾಕಿಗಳ ಹಾವಳಿ


ದೀಪಗಳ ಹಬ್ಬ ದೀಪಾವಳಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಪಟಾಕಿ-ಸಿಡಿಮದ್ದುಗಳು, ಬಾಣ-ಬಿರುಸುಗಳು. ಈ ಹಬ್ಬದ ವೇಳೆ ಸಾವಿರಾರು ಕೋಟಿ ರೂಪಾಯಿ ಮೌಲ್ಯ ಪಟಾಕಿಗಳು ಸುಡಲ್ಪಡುತ್ತವೆ ಎಂಬುದು ಒಂದು ಅಂದಾಜು. ಇದು ಆಚರಣೆ, ಸಂತೋಷ ಮತ್ತು ಸಂಭ್ರಮದ ಪ್ರತೀಕವಾದರೂ ಈ ಪಟಾಕಿಗಳು ಮತ್ತು ಬಾಣಬಿರುಸುಗಳಿಂದ ಸಂಭವಿಸಿರುವ ಅನಾಹುತ, ದುರಂತಗಳಿಗೆ ಲೆಕ್ಕವಿಲ್ಲ.
ಭಾರೀ ಶಬ್ದ ಮಾಡುವ ಅಪಾಯಕಾರಿ ಪಟಾಕಿಗಳನ್ನು ನಿಷೇಧಿಸಲಾಗಿದ್ದು, ಈ ಸಂಬಂಧ ಸ್ಫೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ದುರದೃಷ್ಟಕರ. ಉತ್ತಮ ಗುಣಮಟ್ಟದ ಪಟಾಕಿಗಳು, ಸಿಡಿಮದ್ದುಗಳ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದನ್ನು ಬಳಸದಿರುವಿಕೆ ಮುಂತಾದ ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ಈ ಕಾರಣದಿಂದ ಇಡೀ ವಾತಾವರಣ ಕಲುಷಿತಗೊಳ್ಳುತ್ತಿದೆ. ಆಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ರೋಗಗಳು ಈ ಸಂದರ್ಭದಲ್ಲಿ ಉಲ್ಬಣಿಸುತ್ತಿವೆ. ಇದರ ಜೊತೆಗೆ ಪಟಾಕಿಗಳ ಸ್ಫೋಟದಿಂದ ಉಂಟಾಗುವ ಹಾನಿಯನ್ನು ಕಡೆಗಣಿಸುವಂತಿಲ್ಲ. ಭಾರೀ ಶಬ್ದದ ಪಟಾಕಿ-ಸಿಡಿಮದ್ದುಗಳಿಂದ ಶ್ರವಣಶಕ್ತಿ ಕುಂದುತ್ತದೆ. ಅಜಾಗರೂಕತೆಯಿಂದ ಸುಟ್ಟಗಾಯಗಳಾಗುತ್ತವೆ. ಅಮೂಲ್ಯವಾದ ಕಣ್ಣುಗಳಿಗೆ ಹಾನಿಯಾಗುತ್ತದೆ. ಬೆಲೆ ಬಾಳುವ ಬಟ್ಟೆಗಳು ತೂತು ಬಿದ್ದು ಹಾಳಾಗುತ್ತವೆ. ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಾಕು ಪ್ರಾಣಿಗಳು ಹಿಂಸೆಗೆ ಒಳಗಾಗುತ್ತವೆ. ಹೀಗೆ ತೊಂದರೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಇನ್ನು ದೀಪಾವಳಿ ಎಂದರೆ ಕೇವಲ ಪಟಾಕಿಗಳನ್ನು ಸುಡುವುದು ಎನ್ನುವಷ್ಟರ ಮಟ್ಟಿಗೆ ಈ ಹಬ್ಬ ಇತ್ತೀಚಿನ ವರ್ಷಗಳಲ್ಲಿ ಆಚರಿಸಲ್ಪಡುತ್ತಿರುವುದು ದುರದೃಷ್ಟಕರ. ಆದರೆ ಇದಕ್ಕೆ ಕಡಿವಾಣ ಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಹಬ್ಬದಲ್ಲಿ ಪಟಾಕಿ, ಸಿಡಿಮದ್ದುಗಳು ಮತ್ತು ಬಾಣಬಿರುಸುಗಳದ್ದೇ ಕಾರುಬಾರು ಆಗಿರುವಾಗ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಖಂಡಿತವಾಗಿ ವಹಿಸಬೇಕಾಗುತ್ತದೆ.

ಸಲಹೆ, ಸೂಚನೆ ಮತ್ತು ಮುನ್ನೆಚ್ಚರಿಕೆ

Share this: