Vydyaloka

ಭುಜ ನೋವಿಗೆ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಣಿಪಾಲ.

ಮಣಿಪಾಲದ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇದೇ ದಿನಾಂಕ 31.07.2017 ರಿಂದ 05.08.2017 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00ರವರೆಗೆ ಭುಜನೋವಿಗೆ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ದಿನಾಂಕ 31.07.2017ರಂದು ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ. ಯವರಿಂದ ಉದ್ಘಾಟನೆಗೊಂಡಿತು.ಉಪಪ್ರಾಂಶುಪಾಲರಾದ ಡಾ.ದಿನೇಶ್ ನಾಯಕ್, ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪತಿ ಆಚಾರ್ಯ, ಸಂಸ್ಥೆಯ ವೈದ್ಯರಾದ ಡಾ.ರವಿಶಂಕರ್ ಶೆಣೈ, ಡಾ.ರಜನೀಶ್ ವಿ ಗಿರಿ, ಡಾ.ಅಜಿತ್‍ಕೆ.ಎಸ್, ಡಾ.ಪ್ರಜ್ಞಾಂಕಿತ ಶೆಟ್ಟಿ, ಡಾ.ಸಿಜಾ ಎಮ್‍ ಮತ್ತು ಡಾ.ವಿಷ್ಣುಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಿನಾಂಕ 31 ರಿಂದ ಆಗಸ್ಟ್ 5ರವರೆಗೆ ಈ ಶಿಬಿರವು ನಡೆಯಲಿದ್ದು, ಭುಜನೋವು, ಫ್ರೊಜೆನ್ ಶೋಲ್ಡರ್ ಹಾಗೂ ಭುಜವನ್ನು ಚಲನೆ ಮಾಡಲು ಕಷ್ಟವಾಗುವ ಲಕ್ಷಣಗಳಿರುವ ರೋಗಿಗಳು ಈ ಚಿಕಿತ್ಸಾಶಿಬಿರದ ಪ್ರಯೋಜನವನ್ನುಉಚಿತವಾಗಿ ಪಡೆಯಬಹುದೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

Share this: