Vydyaloka

“ಅರಿವು” ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಬಿಡುಗಡೆ

ಮಂಗಳೂರು : ಡಾ|| ಮುರಲೀ ಮೋಹನ್ ಚೂಂತಾರು ಬರೆದ “ಅರಿವು” ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ 07.11.2018ನೇ ಬುಧವಾರದಂದು ಲೋಕಾರ್ಪಣೆಗೊಂಡಿತು. ಮಾಜಿ ಸಚಿವ ಬಿ. ರಮಾನಾಥ ರೈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ|| ಚೂಂತಾರು ಬಾಯಿ ಕ್ಯಾನ್ಸರ್ ಬಹಳ ಸುಲಭವಾಗಿ ತಡೆಗಟ್ಟಬಹುದಾದ ಮತ್ತು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ತಂಬಾಕು ಉತ್ಪನ್ನಗಳನ್ನು ವಿಸರ್ಜಿಸಿ ಬಾಯಿ ಕ್ಯಾನ್ಸರ್ ತಡೆಗಟ್ಟಿ ಎಂದು ಕರೆ ನೀಡಿದರು. ಬಿ.ರಮಾನಾಥ ರೈ ಕೇವಲ ವೈದ್ಯಕೀಯ ವೃತ್ತಿಗಷ್ಟೆ ಸೀಮಿತವಾಗದೆ ಡಾ|| ಚೂಂತಾರು ವೈದ್ಯಕೀಯ ಸಾಹಿತ್ಯದಲ್ಲಿ ಬಹಳಷ್ಟು ಜಾಗೃತಿ ಲೇಖನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕುರ, ಚೂಂತಾರು ಸರೋಜಿನಿ ಪ್ರತಿಷ್ಠಾನದ ಅಧ್ಯಕ ಲಕ್ಷ್ಮೀ ನಾರಾಯಣ ಭಟ್ ಚೂಂತಾರು ಉಪಸ್ಥಿತರಿದ್ದರು.

Share this: