Vydyaloka

ಪೌರಕಾರ್ಮಿಕರಿಗಾಗಿ ಕ್ಯಾನ್ಸರ್ ಸ್ಕ್ರೀನಿಂಗ್ & ವಾಕಥಾನ್

ಬೆಂಗಳೂರು: ಪೌರಕಾರ್ಮಿಕರಿಗಾಗಿ ಕ್ಯಾನ್ಸರ್ ಸ್ಕ್ರೀನಿಂಗ್ & ವಾಕಥಾನ್ಕ್ಯಾ. ನ್ಸರ್ ರೋಗಗಳ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಕಲ್ಪ ಚೇಸ್‍ಕ್ಯಾನ್ಸರ್ ಫೌಂಡೇಶನ್ ಮತ್ತು ಜವಾಹರ್ ನವೋದಯ ವಿದ್ಯಾಲಯ ಅಲುಮಿನಿ ಅಸೋಸಿಯೇಷನ್, ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್‍ನ ಬಿಬಿಎಂಪಿ ಕಚೇರಿಯಲ್ಲಿ ವಾಕಥಾನ್ “ಕ್ಯಾನ್‍ವಾಲ್ಕ್ 2020” ಆಯೋಜಿಸಿತ್ತು. ಉಪ ಮುಖ್ಯಮಂತ್ರಿ ಡಾ. ಸಿ ಎನ್‍ಅಶ್ವತ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಕೆ. ಸುಧಾಕರ್, ಕನ್ನಡ ಬಿಗ್ ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಮತ್ತು ಮಿಸ್‍ಇಂಡಿಯಾ ಇಂಟನ್ರ್ಯಾಷನಲ್ ವಿಜೇತೆ ನಿಶಾ ತಲಮಪಲ್ಲಿ ಅವರು ಪಾಲ್ಗೊಂಡು 2019 ವಾಕಥಾನ್‍ಅನ್ನು ಉದ್ಘಾಟಿಸಿದರು. ಕ್ಯಾನ್‍ವಾಲ್ಕ್ 2020 ಕ್ಯಾನ್ಸರ್‍ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಕಾರ್ಯಕ್ರಮವಾಗಿದೆ.
ಪೌರಕರ್ಮಿಕರು ಮತ್ತು ಸಾರ್ವಜನಿಕರಿಗೆ ಮೌಖಿಕ, ಸ್ತನ ಮತ್ತುಗರ್ಭಕಂಠದ ಕ್ಯಾನ್ಸರ್‍ತಪಾಸಣೆ ಮತ್ತು ಸಾಮಾನ್ಯತಪಾಸಣೆ ನಡೆಸಲಾಯಿತು, ಅಲ್ಲಿ ಸಂಕಲ್ಪ ಮತ್ತು ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಉಚಿತಅಲ್ಟ್ರಾಸೌಂಡ್, ಮ್ಯಾಮೊಗ್ರಾಮ್, ಪ್ಯಾಪ್ ಸ್ಮೀಯರ್ ಪರೀಕ್ಷೆಗಳು, ರೋಗನಿರ್ಣಯ ಪರೀಕ್ಷೆಗಳನ್ನು ಒದಗಿಸಿತು. ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳನ್ನು ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಗೆಚಿಕಿತ್ಸೆಗೆ ಆಗಮಿಸಲು ಸಲಹೆ ನೀಡಲಾಯಿತು.
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವಅಗತ್ಯತೆಯ ಬಗ್ಗೆ ಮಾತನಾಡಿದ ಬಿಆರ್ ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಯ ಸರ್ಜಿಕಲ್‍ಆಂಕೊಲಾಜಿಸ್ಟ್ ಮತ್ತು ಸಂಕಲ್ಪಚೇಸ್‍ಕ್ಯಾನ್ಸರ್ ಫೌಂಡೇಶನ್‍ನ ಸ್ಥಾಪಕ ಡಾ. ರಾಜಶೇಖರ್‍ಜಕಾ ಅವರು, “ಡಬ್ಲ್ಯುಎಚ್‍ಒ ಇತ್ತೀಚಿನ ವರದಿಯಲ್ಲಿ ಪ್ರತಿ 10 ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್ ರೋಗವನ್ನು ಹೊಂದುತ್ತಾರೆ. ಮತ್ತು ಪ್ರತಿ 15 ಮಂದಿ ಕ್ಯಾನ್ಸರ್‍ರೋಗದಿಂದ ಬಳಲುತ್ತಿರುವವರಲ್ಲಿ ಸರಾಸರಿ ಒಬ್ಬರು ಸಾಯುತ್ತಾರೆ. 2018 ರಲ್ಲಿ ಭಾರತದಲ್ಲಿ 1.16 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಮತ್ತು 7,84,800 ಕ್ಯಾನ್ಸರ್ ಸಾವುಗಳು ಸಂಭವಿಸಿವೆ. ಜಡ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಬೊಜ್ಜು ಮತ್ತು ಅಜ್ಞಾನವು ಯುವ ಪೀಳಿಗೆಯಲ್ಲಿ ಕ್ಯಾನ್ಸರ್ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಅರಿವಿನ ಕೊರತೆ ಮತ್ತು ಅಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿಪರ್ಯಾಸವೆಂದರೆಇದು ಚಿಕಿತ್ಸೆಯನ್ನು ವಿಳಂಬಗೊಳಿಸುತ್ತದೆ ಮತ್ತು ಪ್ರತಿ ವರ್ಷವೂ ಸಾವು ಹೆಚ್ಚುವಂತೆ ಮಡುತ್ತಿದೆ’ ಎಂದರು.
ಉಚಿತ ಸ್ಕ್ರೀನಿಂಗ್ ಕುರಿತು ಬಿಆರ್ ಲೈಫ್‍ನ ಸಮೂಹ ಸಿಇಒ ಕರ್ನಲ್ ಹೇಮರಾಜ್ ಸಿಂಗ್ ಪರ್ಮಾರ್ ಅವರು ಮಾತನಾಡಿ, “ಕ್ಯಾನ್ಸರ್ ಚಿಕಿತ್ಸೆಯಲ್ಲಿ ತಡೆಗಟ್ಟುವಿಕೆ ಮತ್ತು ಮುಂಚಿನ ಪತ್ತೆ ಮುಖ್ಯವಾಗಿದೆ. ಆದ್ದರಿಂದ, ಪೌರಕರ್ಮಿಕರಿಗೆ ಉಚಿತ ಸ್ಕ್ರೀನಿಂಗ್ ಒದಗಿಸಲು ನಾವು ಸಂಕಲ ಹೊಂದಿ ನಮ್ಮ ಸಹಕಾರದ ಹಸ್ತ ಚಾಚಿದ್ದೇವೆ. ಈ ವಾಕಥಾನ್ ಮೂಲಕ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾವು ಬಯಸುತ್ತೇವೆ ಮತ್ತು ಅವುಗಳನ್ನು ತಡೆಗಟ್ಟುವ ಕಾರಣಗಳು ಮತ್ತು ಮಾರ್ಗಗಳು. ಆಲ್ಕೊಹಾಲ್ ಸೇವನೆ ಮತ್ತು ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲು ಇದು ಉತ್ತಮ ವೇದಿಕೆಯಾಗಿ ಬಳಸಿಕೊಂಡಿದ್ದೇವೆ’ ಎಂದರು.

Share this: