“ಸಂಜೀವಿನಿ ವೈದ್ಯ ಸಾಹಿತ್ಯದ ಮೇರು ಕೃತಿ” – ಡಾ|| ಬನರಿ

ದಿನಾಂಕ : 3-07-2017ನೇ ಸೋಮವಾರದಂದು ನಗರದ ಹೃದಯ ಭಾಗದಲ್ಲಿರುವ ಓಷನ್‍ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಹಿರಿಯ ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕ ಡಾ|| ಮುರಲೀ ಮೋಹನ್ ಚೂಂತಾರು ಇವರ ಆರನೇ ವೈದ್ಯಕೀಯ ಕೃತಿ “ಸಂಜೀವಿನಿ ಆರೋಗ್ಯ ಮಾರ್ಗದರ್ಶಿ” ಭಾಗ ಎರಡು ಲೋಕಾರ್ಪಣೆಗೊಂಡಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ ಇವರು ಕೃತಿಯನ್ನು ಬಿಡುಗಡೆ ಮಾಡಿದರು. ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇದರ ವಿಂಶತಿಯ ಸಂಭ್ರಮದ ಜೊತೆಗೆ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಕುಟುಂಬ ವೈದ್ಯ ಮತ್ತು ವೈದ್ಯ ಸಾಹಿತಿ ಡಾ|| ರಮಾನಂದ ಬನರಿ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತಿನ ಸ್ಥಾಯಿ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಅರ್ಷದ್ ವರ್ಕಾಡಿ ಭಾಗವಹಿಸಿದ್ದರು. ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈಯವರು ವೈದ್ಯಕೀಯ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ ಕಲೆ ಡಾ|| ಮುರಲೀಯವರಿಗೆ ಸಿದ್ದಿಸಿದೆ. ಅವರು ಬರೆದ ಎಲ್ಲಾ ಆರೂ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವ ಅವಕಾಶ ನನಗೆ ದೊರಕಿದೆ. ಅವರ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಮೆಚ್ಚತಕ್ಕದ್ದು. ಸಾರ್ವಜನಿಕ ಬದುಕಿನಲ್ಲಿ ನಮ್ಮಿಂದ ಲಕ್ಷಾಂತರ ಮಂದಿ ಸಹಕಾರ ಪಡೆದುಕೊಳ್ಳುತ್ತಾರೆ. ಆದರೆ ಅದನ್ನು ನೆನಪಿಟ್ಟುಕೊಳ್ಳುವ ಮಂದಿ ಬಹಳ ಕಡಿಮೆ. ಆದರೆ ಡಾ|| ಚೂಂತಾರು ಅವರು ಇದಕ್ಕೆ ಅಪವಾದ. ಸಹಾಯ ಮಾಡಿದ 25 ವರ್ಷಗಳ ಬಳಿಕವೂ ಎಲ್ಲವನ್ನೂ ನೆನಪಿಟ್ಟುಕೊಂಡಿರುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ ಎಂದು ಕೊಂಡಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ|| ರಮಾನಂದ ಬನರಿ ಅವರು ಮಾತನಾಡುತ್ತಾ ಡಾ|| ಮುರಲಿಯವರು ಬರೆದ “ಸಂಜೀವಿನಿ” ಕೃತಿ, ವೈದ್ಯ ಲೋಕದ ಅಪರೂಪದ ಕೃತಿಯಾಗಿದ್ದು ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವಲ್ಲಿ ಅತೀ ನಿರ್ಣಯಕ ಪಾತ್ರ ವಹಿಸಬಲ್ಲುದು ಎಂದರು. ಇಂದಿನ ದಿನಗಳಲ್ಲಿ ವೈದ್ಯರ ಮೇಲೆ ದಾಳಿ ಮತ್ತು ಸಂಶಯ ಪ್ರವೃತ್ತಿ ಮಾಮೂಲಿಯಾಗಿದೆ. ವೈದ್ಯರ ಮತ್ತು ರೋಗಿಗಳ ನಡುವಿನ ಸಂಬಂಧ ಮೊದಲಿನಂತೆ ಈಗ ಉಳಿದಿಲ್ಲ. ವೈದ್ಯ ಮತ್ತು ರೋಗಿಯ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ “ಸಂಜೀವಿನಿ” ಸಹಕಾರಿಯಾಗಬಲ್ಲುದು ಎಂದರು. ರಾಮಾಯಣದ ಸಮಯದಲ್ಲಿ ರಾಮ ಲಕ್ಷ್ಮಣರಿಗೆ ಹನುಮಂತ ಬೆಟ್ಟದ ಜೊತೆಗೆ ಹೊತ್ತು ತಂದ ಸಂಜೀವಿನಿ ಔಷಧ ಅಮೃತವಾದಂತೆ ಈ “ಸಂಜೀವಿನಿ” ಕೃತಿ ಕೂಡಾ ಜನ ಸಾಮಾನ್ಯರಿಗೆ ಮತ್ತು ಮನೆ ಮನೆಗೂ ತಲುಪಲಿ ಎಂದು ಶುಭ ಹಾರೈಸಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಕೃತಿ ಬಹಳ ಮುಖ್ಯ ಭೂಮಿಕೆ ವಹಿಸಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಹರ್ಷದ್  ವರ್ಕಾಡಿ ಇವರು ಮಾತನಾಡಿ ಎರಡು ದಶಕಗಳಿಂದ ಡಾ|| ಚೂಂತಾರು ಅವರು ಗಡಿನಾಡಿನ ಹೊಸಂಗಡಿಯಲ್ಲಿ ವೈದ್ಯಕೀಯ ಸೇವೆಯ ಜೊತೆಗೆ, ತಮ್ಮ ನಿಖರ ಮತ್ತು ಸರಳ ಭಾಷೆಯ ವೈದ್ಯಕೀಯ ಬರವಣಿಗೆಯಿಂದ ಜನರಲ್ಲಿ ಆರೋಗ್ಯದ ಜಾಗೃತಿ ಹುಟ್ಟು ಹಾಕಿದ ಕೆಲವೇ ಕೆಲವು ಲೇಖಕರಲ್ಲಿ ಒಬ್ಬರು ಎಂದರು. ಕಳೆದೊಂದು ದಶಕಗಳಿಂದ ನಿರಂತರವಾಗಿ ವೈದ್ಯ ಸಾಹಿತ್ಯದ ಕೃಷಿ ಮಾಡುತ್ತಾ ಈದೀಗ ಕರಾವಳಿಯ ಪ್ರಬುದ್ಧ ವೈದ್ಯ ಸಾಹಿತಿಯಾಗಿ ರೂಪುಗೊಂಡಿದ್ದಾರೆ ಮತ್ತು ಅವರ ಕನ್ನಡ ಸೇವೆ ಶ್ಲಾಘನೀಯ ಎಂದು ನುಡಿದರು. ವೇದಿಕೆಯಲ್ಲಿ ಚೂಂತಾರು ಪ್ರತಿಷ್ಠಾನದ ಅಧ್ಯಕ್ಷರಾದ ಚೂಂತಾರು ಲಕ್ಷ್ಮೀ ನಾರಾಯಣ ಭಟ್ ಅವರು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಭಟ್ ಚೊಕ್ಕಾಡಿ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕುಮಾರಿ ಸಿರಿ, ಕುಮಾರಿ ಸ್ವಸ್ಥಿ ಕುಮಾರಿ ಸ್ನೇಹಾ ಪ್ರಾರ್ಥನೆ ಮಾಡಿದರು. ಮಹೇಶ್ ಚೂಂತಾರು ಇವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ| ರಾಜಶ್ರೀ ಮೋಹನ್, ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗ್ಗಡೆ, ವೈದ್ಯ ಸಾಹಿತಿ ಡಾ| ಮೀರಾ, ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಪ್ರಕಾಶ್ ಶೆಟ್ಟಿ ತುಂಬೆ ಮುಂತಾದವರು ಉಪಸ್ಥಿತರಿದ್ದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!