ಬೆಂಗಳೂರಿನಲ್ಲಿ ಪಿಸಿಎ ಪ್ರಾರಂಭ

ದೇಹದಾರ್ಢ್ಯ ಪಟುಗಳು ಮತ್ತು ಕ್ರೀಡಾಪಟುಗಳಿಗೆ ಶುಭಸುದ್ದಿ

ಬೆಂಗಳೂರು, : ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾರ್ಢ್ಯ ಸ್ಪರ್ಧೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ ದೇಹದಾಢ್ರ್ಯ ಪಟುಗಳ ಪ್ರಯತ್ನಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರತಿಫಲಿಸುವ ನಿಟ್ಟಿನಲ್ಲಿ ಶ್ರೇಷ್ಠ ಸ್ಪರ್ಧೆಗಳನ್ನು ನಡೆಸಲು ಫಿಸಿಕಲ್ ಕಲ್ಚರ್ ಅಸೋಸಿಯೇಷನ್(ಪಿಸಿಎ)ಗೆ ಶನಿವಾರ ಚಾಲನೆ ನೀಡಲಾಯಿತು. ಪಿಸಿಎ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡಿಂಗ್ ಅಂಡ್ ಫಿಟ್‍ನೆಸ್ ಎಂದಿದ್ದು ಇದು ಕ್ರೀಡಾಪಟುಗಳಿಗೆ ಪ್ರಥಮ ಆದ್ಯತೆ ನೀಡುತ್ತದೆ. ದೇಹದಾರ್ಢ್ಯ ಸಂಸ್ಕøತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ. ಪಿಸಿಎ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಹದಾರ್ಢ್ಯ ಸಂಸ್ಥೆಯಾಗಿದೆ. ಪಿಸಿಎ ಪಾರದರ್ಶಕ ತೀರ್ಪು ನೀಡುವುದಲ್ಲದೆ ಅಭ್ಯರ್ಥಿಗಳಿಗೆ ಅಂತಾರಾಷ್ಟ್ರೀಯ ಅವಕಾಶಗಳ ಸೃಷ್ಟಿಉತ್ತಮ ಗುಣಮಟ್ಟದ ನಿಧಿಯನ್ನು ಸಂಗ್ರಹಿಸುತ್ತದೆ. ಪ್ರಸ್ತುತ ವ್ಯವಸ್ಥೆ ಕ್ರೀಡಾಪಟುಗಳ ಕಲ್ಯಾಣಕ್ಕೆ ಉತ್ತಮ ಕೆಲಸ ಸಾಧ್ಯವಾಗುತ್ತಿಲ್ಲಪಿಸಿಎ ಪೂರ್ವಾಗ್ರಹ ರಹಿತ ತೀರ್ಪುಗಾರಿಕೆ ಅಲ್ಲದೆ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಒದಗಿಸುತ್ತದೆ.

ಶ್ರೇಷ್ಠ ಗುಣಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳು

ಪಿಸಿಎ ಭಾರತದಾದ್ಯಂತ ಗುಣಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳ ಸರಣಿ ಆಯೋಜಿಸಲಿದೆ ಮತ್ತು ಕ್ರೀಡಾಪಟುಗಳಿಗೆ ವೇದಿಕೆ ಸೃಷ್ಟಿಸಲಿದೆಆಗ ಕ್ರೀಡಾಪಟುಗಳು ಇತರೆ ಒತ್ತಡಗಳಿಂದ ಮುಕ್ತರಾಗಿ ದೇಹದಾರ್ಢ್ಯತೆಗೆ ಗಮನ ನೀಡಬಹುದು. ಇದರೊಂದಿಗೆ ಕ್ರೀಡಾಪಟುಗಳು ಉತ್ತಮ ಸ್ಪರ್ಧೆಗಳುಪಾರದರ್ಶಕ ತೀರ್ಪು,ಉತ್ತಮ ಬಹುಮಾನಗಳ ಮೂಲಕ ಅವರನ್ನು ಬೆಳೆಸಿ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುತ್ತದೆ. ಈ ಪ್ರಾರಂಭದ ಸಂದರ್ಭದಲ್ಲಿ ಪಿಸಿಎ ಬಾಡಿ ಪವರ್ ಅಂಡ್ ಇಂಟರ್‍ನ್ಯಾಷನಲ್  ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್‍ನ ಸಿಇಒ ಮತ್ತು ಸಂಸ್ಥಾಪಕ ನಿಕ್ ಓರ್ಟನ್, `ನಾನು ಭಾರತದಲ್ಲಿ ದೇಹದಾರ್ಢ್ಯ ಸ್ಪರ್ಧೆಗಳ ಸರಣಿ ನಡೆಸಲು ಬಹಳ ಉತ್ಸುಕನಾಗಿದ್ದೇನೆ. ಇದು ಶ್ರೇಷ್ಠ ಕ್ರೀಡಾಪಟುಗಳಿಗೆ ಪುರಸ್ಕರಿಸಲಿದೆ. ಪಿಸಿಎ ಇಂಡಿಯಾ ಅಧ್ಯಕ್ಷ ಶ್ರೀ ರಘುನಂದನ್ ಈ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ ಮತ್ತು ನಮ್ಮ ಪೂರ್ಣ ಬೆಂಬಲ ನೀಡಲಿದ್ದೇವೆ‘ ಎಂದರು.

ಪ್ರಮುಖ ಮೈಲಿಗಲ್ಲು

ಪಿಸಿಎ ಇಂಡಿಯಾ 2018ರಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು ಶ್ರೀ ಆರ್.ರಘುನಂದನ್ ಭಾರತಕ್ಕೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಭಾರತದಲ್ಲಿ ಅತ್ಯಂತ ಗೌರವಾನ್ವಿತರಾಗಿರುವ ಶ್ರೀ ರಘುನಂದನ್ ಭಾರತದ ವಿಸ್ತರಣೆಯನ್ನು ನಿರ್ವಹಿಸಲಿದ್ದಾರೆ. ಪಿಸಿಎ ಇಂಡಿಯಾಗೆ ಅವರ ದೂರದೃಷ್ಟಿ ಮತ್ತು ಭಾರತೀಯ ದೇಹದಾಢ್ರ್ಯ ಮತ್ತು ಫಿಟ್‍ನೆಸ್ ಉದ್ಯಮಕ್ಕೆ ಈ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಗಳನ್ನು ಸೃಷ್ಟಿಸಲಿದೆ. ಮುಂದಿನ 5 ವರ್ಷಗಳು ದೇಶಾದ್ಯಂತ ಪಿಸಿಎಗಳ ವಿಸ್ತರಣೆ ಹೆಚ್ಚು ಸ್ಪರ್ಧೆಗಳು ಮತ್ತು ದೊಡ್ಡ ಪ್ರಮಾಣದ ಬಹುಮಾನಗಳಿಂದ ವಿಸ್ತರಿಸಲಿದೆ. ಈ ಜಾಗತಿಕ ಜಾಲದಿಂದ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೂ ಪ್ರವೇಶ ಪಡೆಯುತ್ತಾರೆ. `ಪಿಸಿಎ ದೇಹದ ಸಂಸ್ಕøತಿ ಬೆಳೆದಂತೆ ಬೆಳೆಯುತ್ತದೆ. ನಾವು ಭಾರತದಲ್ಲಿ ದೇಹದಾರ್ಢ್ಯ ಮತ್ತು ಫಿಟ್‍ನೆಸ್ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ಯುವಆವಿಷ್ಕರಿಸುವ ಮತ್ತು ಸುಧಾರಿಸುವ ಉದ್ದೇಶ ಹೊಂದಿದ್ದೇವೆ‘ ಎಂದು ಪಿಸಿಎ ಇಂಡಿಯಾ ಅಧ್ಯಕ್ಷ ರಘುನಂದನ್ ಹೇಳಿದರು.

ದೇಹದಾಢ್ರ್ಯದಲ್ಲಿ ಜಾಗತಿಕ ನಾಯಕ

ಪಿಸಿಎ ಬ್ರಿಟನ್‍ನಲ್ಲಿ ಜಿಮ್ ಮಾಲೀಕರಾದ ರ್ಯಾನ್ ಅಲೆಕ್ಸಾಂಡರ್ ಮತ್ತು ವಾರೆನ್ ಡೈಸನ್ ಅವರಿಂದ ಪ್ರಾರಂಭಗೊಂಡಿದ್ದು ಯಾವುದೇ ಪೂರ್ವಾಗ್ರಹವಿಲ್ಲದೆ ದೇಹದಾರ್ಢ್ಯ ಪಟುಗಳನ್ನು ಗುರುತಿಸುವ ಮತ್ತು ದೇಹದಾರ್ಢ್ಯ ಪಟುಗಳ ಸಂಘಟನೆ ಮಾಡುವ ಉದ್ದೇಶ ಹೊಂದಿದೆ. ಪಿಸಿಎ ವಿಶ್ವದಾದ್ಯಂತ ವಿಸ್ತರಿಸಿದ್ದು ಈಗ ದಕ್ಷಿಣ ಆಫ್ರಿಕಾಅಮೆರಿಕಾ ಮತ್ತು ಆಸ್ಟ್ರೇಲಿಯಾದಿಂದ ದಕ್ಷಿಣ ಕೊರಿಯಾಚೀನಾಯೂರೋಪ್‍ಗೆ ವಿಸ್ತರಿಸಿದೆ. ಪಿಸಿಎ ದೇಹದಾರ್ಢ್ಯ ಮತ್ತು ಫಿಟ್‍ನೆಸ್ ಉದ್ಯಮದಲ್ಲಿ ಜಾಗತಿಕ ಮುಂಚೂಣಿಯಲ್ಲಿದ್ದು ಕ್ರೀಡಾ ಜೀವನಶೈಲಿಯ ಬದ್ಧತೆ ಹೊಂದಿದ್ದು ಬ್ರಾಂಡ್ ಅನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶ ಹೊಂದಿದ್ದು ಸ್ಪರ್ಧಿ ಹಾಗೂ ಪ್ರೇಕ್ಷಕರ ಅನುಭವ ವಿಸ್ತರಿಸಲಿದೆ. ಪಿಸಿಎ ಸ್ಪರ್ಧೆಗಳಲ್ಲಿ ಪುರಸ್ಕರಿಸುವುದು ಮತ್ತು ಅತ್ಯುತ್ತಮ ತಾಣಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. 2017ರಲ್ಲಿ 16 ದೇಶಗ ಳ ಬಾಡಿ ಪವರ್ ಶೋ ಎಕ್ಸ್‍ಪೊದಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದು ಐದು ಹೊಸ ದೇಶಗಳು ಅಮೆರಿಕಾಆಸ್ಟ್ರೇಲಿಯಾಪೋಲೆಂಡ್,  ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರ್ಪಡೆಯಾಗಿವೆ.

ತತ್ವ ಮತ್ತು ಸಿದ್ಧಾಂತಗಳು

  • ಪಿಸಿಎ ಹಲವಾರು ಪ್ರಮುಖ ಉದ್ಯಮದ ನಾಯಕರೊಂದಿಗೆ ಸೇರಿದ್ದು ನಾಲ್ಕು ಪ್ರಮುಖ ತತ್ವಗಳ ಅಡಿ ಕಾರ್ಯ ನಿರ್ವಹಿಸುತ್ತದೆ:
  • ಏಕತೆ ಮತ್ತು ಮೌಲ್ಯಗಳು: ಪ್ರಾಮಾಣಿಕತೆಮುಕ್ತತೆನೈತಿಕತೆ ಮತ್ತು ಪಾರದರ್ಶಕತೆ
  • ವೈವಿಧ್ಯತೆ: ವಿಭಿನ್ನ ಆಲೋಚನೆಗಳುಸಾಮಥ್ರ್ಯಗಳು ಮತ್ತು ಆಸಕ್ತಿಗಳೊಂದಿಗೆ ಆರೋಗ್ಯಕರ ಚರ್ಚೆಗೆ ಉತ್ತೇಜನ
  • ಚಲನಶೀಲತೆ ಮತ್ತು ಆವಿಷ್ಕಾರ: ಫಿಟ್‍ನೆಸ್ ಮತ್ತು ದೇಹದಾರ್ಢ್ಯ ಕ್ಷೇತ್ರವನ್ನು ಸತತ ತಂತ್ರಜ್ಞಾನದ ಅಳವಡಿಕೆ ಮತ್ತು ಸಂಸ್ಥೆಯ ಗುಣಮಟ್ಟನೋಟ ಮತ್ತು ಇಮೇಜ್ ವೃದ್ಧಿಸುವ ಮೂಲಕ ಸುಧಾರಣೆ.

ಬಯಕೆ: ಸಂಸ್ಥೆಯ ಹೃದಯದಲ್ಲಿದೆ

ನಿಕ್ ಓರ್ಟನ್-ಸಿಇಒ ಮತ್ತು ಸಂಸ್ಥಾಪಕರು-ಬಾಡಿ ಪವರ್ ಅಂಡ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್ಪಿಸಿಎ. ರಘುನಂದನ್- ಅಧ್ಯಕ್ಷರು,ಪಿಸಿಎ ಇಂಡಿಯಾಜೋಷ್ ಮಾಲೆ-ಮಿ.ಯೂನಿವರ್ಸ್ಪಿಸಿಎ ಚಾಂಪಿಯನ್ಡಾನ್ ವೇನ್ಸ್- ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು ಫಿಟ್‍ನೆಸ್ ಮಾಡೆಲ್,ಕಿಶೋರ್ ಕುಮಾರ್- ಫಿಟ್‍ಫ್ಯಾಕ್ಟರ್ ಇಂಡಿಯಾ ವಿಜೇತರುಸೊನಾಲಿ ಸ್ವಾಮಿ-ಫಿಟ್‍ಫ್ಯಾಕ್ಟರ್ ಇಂಡಿಯಾ ವಿಜೇತರುಅಂತಾರಾಷ್ಟ್ರೀಯ ದೇಹದಾಢ್ರ್ಯ ಪಟು ಪ್ರಸಾದ್ ಕುಮಾರ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕøತ ಮತ್ತು ಬಾಲಕೃಷ್ಣ-ಮಿ.ಏಷ್ಯಾ ಮತ್ತು ಪಿಸಿಎ ಕ್ರೀಡಾಪಟು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!