ಆರೋಗ್ಯಕರ ಜೀವನವನ್ನು ಹೊಂದಲು ಇಷ್ಟಪಡುತ್ತೀರಾ?

ಆರೋಗ್ಯಕರ ಜೀವನವನ್ನು ಹೊಂದಲು ಇಷ್ಟಪಡುತ್ತೀರಾ? ಇವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ಮಾರಕ ಕೋವಿಡ್-19 ಕಾಯಿಲೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ನಮಗೆ ಕಲಿಸಿದೆ. ನಮ್ಮ ಆಯುರ್ವೇದದಲ್ಲಿ ಉಲ್ಲೇಖಿಸಿರುವ ಭಾರತೀಯ ಜೀವನ ಶೈಲಿ ಆರೋಗ್ಯಕ್ಕೆ ಒಳ್ಳೆಯದು.

takshana-ayur1. ಮುಂಜಾನೆಯೇ ಎದ್ದೇಳಬೇಕು :

ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯದ ಒಂದು ಗಂಟೆ ಮುನ್ನವಿರುವ ಪ್ರಶಾಂತ ಸಮಯ. ಮುಂಜಾನೆಯ ಸಮಯವೆಂದರೆ ವಿಶ್ವದ ಸೃಷ್ಟಿಕರ್ತ ಬ್ರಹ್ಮನ ಕಾಲವೆಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದು ತುಂಬಾ ಅತ್ಯಂತ ಶಕ್ತಿ ಅಥವಾ ಬಲವಾಗಿದ್ದು, ಎಲ್ಲ ಸೃಜನ ಪ್ರಕ್ರಿಯೆಗಳೂ ನಡೆಯುವುದು ಇದೇ ಅವಧಿಯಲ್ಲಿ. ಬ್ರಾಹ್ಮಿ ಮುಹೂರ್ತದ ವಾಯುವನ್ನು ವೀರವಾಯು ಎಂದು ಕರೆಯಲಾಗುತ್ತದೆ. ವೀರವಾಯು ದೇಹವು ಉತ್ತಮ ಆರೋಗ್ಯ, ಮುಖದ ಕಾಂತಿ ವೃದ್ಧಿ, ಮನಸ್ಸಿನ ಪ್ರಫುಲ್ಲತೆ ಹಾಗೂ ಬುದ್ದಿಮತ್ತೆಯನ್ನು ಚುರುಕುಗೊಳಿಸುತ್ತದೆ.

2. ನೀರು ಕುಡಿಯಿರಿ :

ಮೂರು ಜೈವಿಕ ಶಕ್ತಿಗಳನ್ನು ಅಂದರೆ ವಾತಾ, ಪಿತ್ತ ಮತ್ತು ಕಫವನ್ನು ಸರಿದಾರಿಯಲ್ಲಿ ತರಲು ಪ್ರತಿ ದಿನ ನಸುಕಿನ ಅವಧಿಯಲ್ಲಿ ಸುಮಾರು 750 ಮಿ.ಲೀ. ನೀರು ಕುಡಿಯಿರಿ. ಆಯುರ್ವೇದದ ಪ್ರಕಾರ, ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಸಮಯದಲ್ಲಿ ಹಾಗೂ ನೈಸರ್ಗಿಕ ಕರೆಗೆ ಹೋಗುವುದಕ್ಕೂ ಮುನ್ನ ನೀರನ್ನು ಕುಡಿಯಬೇಕು. ಇದರಿಂದ ಮೂರೂ ದೋಷಗಳಾದ ವಾತಾ, ಪಿತ್ತ ಮತ್ತು ಕಫ ನಿರ್ಮೂಲನೆಯಾಗಲು ನೆರವಾಗುತ್ತದೆ. ಇದು ಆರೋಗ್ಯಕರ ಚಯಾಪಚಯ ಅಗ್ನಿ ಕ್ರಿಯೆಗೆ ನೆರವಾಗುತ್ತದೆ.  ನೀರನ್ನು ತಾಮ್ರ, ಬೆಳ್ಳಿ ಇತ್ಯಾದಿಯಂಥ ಲೋಹದ ಪಾತ್ರೆಗಳಲ್ಲಿ ಅಥವಾ  ಜೇಡಿಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಬಹುದಾಗಿದೆ. ನೀರನ್ನು ಇವುಗಳಲ್ಲಿ ಸಂಗ್ರಹಿಟ್ಟರೆ ಅವು ಗುಣಕಾರಿ ವಸ್ತುಗಳನ್ನು ಹೀರಿಕೊಳ್ಳುತ್ತದೆ.

water-drink1. ಚಿನ್ನ/ಗಾಜಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಟ್ಟರೆ ಅದು ಎಲ್ಲ ಜೈವಿಕ ಶಕ್ತಿಗಳನ್ನು ಸಂಚಯಿಸಿ ದೃಷ್ಟಿಯನ್ನು ಸುಧಾರಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೂ ಸಹಕಾರಿ.

2. ನೀರನ್ನು ಬೆಳ್ಳಿ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಇದು ಕಣ್ಣುಗಳ ಆರೋಗ್ಯ, ದೃಷ್ಟಿ ವೃದ್ಧಿಗೆ ಸಹಾಯ ಮಾಡಿ ಪಿತ್ತವನ್ನು ನಿವಾರಿಸುತ್ತದೆ. ಆದರೆ ಇದು ವಾತಾ ಮತ್ತು ಕಫವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕಡಿಮೆ ತಾಪಮಾನ ಮಂದಿಗೆ ಇದನ್ನು ಶಿಪಾರಸು ಮಾಡಲಾಗದು.

3. ತಾಮ್ರ ಪಾತ್ರೆಯಲ್ಲಿನ ನೀರು ಬುದ್ದಿಶಕ್ತಿ, ಹಸಿವನ್ನು ಹೆಚ್ಚಿಸಿ ಸ್ರಾವದ ಸಮಸ್ಯೆಯನ್ನು ತಡೆಗಟ್ಟುತ್ತದೆ.

4. ಕಂಚಿನ ಪಾತ್ರೆಯಲ್ಲಿ ನೀರನ್ನು ಶೇಖರಿಸಿಟ್ಟರೆ ಅದು ಹುಳು ನಿವಾರಣೆಗೆ ನೆರವಾಗುತ್ತದೆ.

5. ಕಬ್ಬಿಣ ಪಾತ್ರೆಯಲ್ಲಿನ ನೀರನ್ನು ಕುಡಿದರೆ ಎಡಿಮಾ (ದ್ರವಶೋಥ) ಸಮಸ್ಯೆಯಿಂದ ಉಪಶಮನ ದೊರೆತು, ಶಕ್ತಿ ಲಭಿಸುತ್ತದೆ. ಮರದ ಪಾತ್ರೆಯಲ್ಲಿನ ನೀರು ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ.

6. ಎಲೆಗಳು ತುಂಬಿದ ಪಾತ್ರೆಗಳ ನೀರು ಕುಡಿಯುವುದರಿಂದ ರುಚಿ ಹೆಚ್ಚುತ್ತದೆ, ಪಚನಕ್ರಿಯೆ ಸುಧಾರಿಸುತ್ತದೆ ಹಾಗೂ ವಿಷ ವಸ್ತುಗಳು ನಿರ್ಮೂಲನೆಯಾಗುತ್ತದೆ.

7. ಜೇಡಿಮಣ್ಣಿನ ಪಾತ್ರೆಯಲ್ಲಿನ ತಣ್ಣನೆಯ ನೀರನ್ನು ಬಳಸುವುದರಿಂದ ಉರಿಗಳು ಗುಣಮುಖವಾಗುತ್ತದೆ.

8. ತಾಮ್ರವು ಎಲ್ಲಕ್ಕಿಂತ ಉತ್ತಮ ಎಂದು ಶಿಫಾರಸ್ಸು ಮಾಡಬಹುದಾಗಿದೆ.

3. ಪ್ರತಿನಿತ್ಯವ್ಯಾಯಾಮ:

ಪ್ರತಿ ದಿನ ವ್ಯಾಯಾಮ ಮಾಡುವುದರಿಂದ ವಯಸ್ಸಾಗುವಿಕೆಯನ್ನು ನಿಧಾನ ಮಾಡಬಹುದು. ಇದು ಕೇವಲ ತೂಕವನ್ನು ಕಡಿಮೆ ಮಾಡುವುದಲ್ಲದೇ ಶಕ್ತಿ ಸಂಚಯವಾಗಿ ವ್ಯಕ್ತಿ ಆರೋಗ್ಯವಾಗಿರಲು ಸಹಕಾರಿ. ಭಾರತದ ಸಂಪ್ರದಾಯಿಕ ಯೋಗ ತರಬೇತುದಾರರು ಮತ್ತು ಮಲ್ಲ ಯೋಧರು ತೈಲ ಮರ್ದನ ಮತ್ತು ವ್ಯಾಯಾಮ ವಿಧಾನ ಅನುಸರಿಸುತ್ತಿದ್ದರು. ಇದು ವಾತಾ ಹೆಚ್ಚಾಗದಂತೆ ನೋಡಿಕೊಳ್ಳುತ್ತಿತ್ತು. ಆದರೆ ಇದು ವಿಕೃತ ಕಫವನ್ನು ದಹಿಸಿ ಅಗ್ನಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಪ್ರಕೃತಿಗೆ ಅನುಗುಣವಾಗಿ ವ್ಯಾಯಾಮದ ವಿಧಾನವೂ ವಿಭಿನ್ನವಾಗಿರುತ್ತದೆ. ಆದರೆ ಮೂಲತ: ಮುಖ್ಯವಾದುದು ಮತ್ತು ಉತ್ತಮ ವ್ಯಾಯಾಮ ಎಂದರೆ ವಾಯುವಿಹಾರ.

4. ಸ್ನಾನಕ್ಕೆ ಮುನ್ನ ಮಸಾಜ್:

ಉತ್ತಮ ದೇಹಾರೋಗ್ಯ ಮತ್ತು ಹೊಳೆಯವ ಚರ್ಮಕ್ಕಾಗಿ ಸ್ನಾನಕ್ಕೆ ಮುನ್ನ ಮಸಾಜ್ ಮಾಡಬೇಕು. ಇದನ್ನು ಚಳಿಗಾಲದ ದಿನಗಳಲ್ಲಿ ಹಾಗೂ ಮಾಲಿನ್ಯ ಪ್ರದೇಶಗಳಲ್ಲಿ ಸಂಚರಿಸಿದ ನಂತರ ಮಾಡುವುದು ಒಳ್ಳೆಯದು. ತೈಲದಿಂದ ಮರ್ದನ ಮಾಡುವುದರಿಂದ ಕೊಳೆ ನಿರ್ಮೂಲನೆಯಾಗಿ, ಚರ್ಮ ಜಲದಿಂದ ತುಂಬಿಕೊಂಡು ಮದೃವಾಗಿ ಮತ್ತು ಆರೋಗ್ಯಭರಿತವಾಗಿರುತ್ತದೆ. ಬೆಚ್ಚನೆಯ ಎಣ್ಣೆಯನ್ನು ಲೇಪಿಸಿ ಕೈಗಳಿಂದ ಮರ್ದನ ಮಾಡುವುದರಿಂದ ಅದು ದೈಹಿಕ ಮತ್ತು ಮಾನಸಿಕ ಮಟ್ಟಗಳಲ್ಲಿ  ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮನಸ್ಸು ಪ್ರಶಾಂತವಾಗಿ, ನರ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.

5. ಹೊಟ್ಟೆ ತುಂಬಿಸುವ ಉಪಾಹಾರ ಸೇವಿಸಿ:

ಭಾರೀ ಭೋಜನವನ್ನು ಕಡಿತಗೊಳಿಸಿ. ಅನಾರೋಗ್ಯಕರ ಆಹಾರ ಅಭ್ಯಾಸಗಳು ರೋಗಿಗಳಿಗೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿಯೊಬ್ಬ ಅನುಸರಿಸುವ ಆಹಾರವನ್ನು ವೀಕ್ಷಿಸುವ ಮೂಲಕವೇ ಆತ/ಆಕೆ ಯಾವು ರೀತಿಯ ರೋಗದಿಂದ ಬಳಲುತ್ತಾರೆ ಎಂಬುದನ್ನು ಊಹಿಸಲು ಸಾಧ್ಯ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಆಹಾರ ಮತ್ತು ಆಹಾರಾಭ್ಯಾಸಗಳ ತತ್ತ್ವಗಳ ಪ್ರಾಮುಖ್ಯತೆ ಬಗ್ಗೆ  ತಿಳುವಳಿಕೆ ನೀಡುವುದು ಮುಖ್ಯ. ಆರೋಗ್ಯಕರ ಸಾತ್ವಿಕ ಆಹಾರವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.  ಸೂಕ್ತ ರೀತಿಯಲ್ಲಿ ಉಪಾಹಾರ ಸೇವಿಸುವುದರಿಂದ ಅದು ಹಸಿವನ್ನು ನಿವಾರಿಸಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಆಹಾರವನ್ನು ಸಮರ್ಪಕ ರೀತಿಯಲ್ಲಿ ಸೇವಿಸಿದರೆ ಆಗಾಗ ತಿನ್ನುವ ಅಭ್ಯಾಸ ಸಹಜವಾಗಿಯೇ ತಪ್ಪುತ್ತದೆ. ಆದರೆ, ದಿನದಲ್ಲಿ ಎರಡು ಬಾರಿ ಊಟದ ನಿಯಮವನ್ನು ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟಗಳ ನಡುವೆ ಸಣ್ಣ ಉಪಾಹಾರ ಸೇವಿಸುವ ಮೂಲಕ ಮೂರು ಬಾರಿ ಆಹಾರ ಸೇವನೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು.

6.ನಾಲ್ಕು ಲೋಟಗಳಷ್ಟು ನೀರನ್ನು ಒಂದು ಲೋಟ ಆಗುವ ತನಕ ಕುದಿಸಿ:

ರಾತ್ರಿ ಊಟದ ನಂತರ ಮತ್ತು ಮಲಗುವುದಕ್ಕೆ ಮುನ್ನ ಒಂದು ಕಪ್ ಬಿಸಿ ನೀರಿನ ಕಷಾಯ ಕುಡಿಯಿರಿ.  ತೂಕ ಇಳಿಸಲು ಬಯಸುವವರಲ್ಲಿ ಇದು ತುಂಬಾ ಬದಲಾವಣೆಗಳನ್ನು ತರುತ್ತದೆ. ಇದು ಶೀತ, ನೆಗಡಿ, ಕೆಮ್ಮನ್ನು ನಿವಾರಿಸಿ, ಬೆಳಗಿನ ಜಡತ್ವ, ಮೈಕೈ ನೋವು ಮತ್ತು ದಣಿವನ್ನು ನಿವಾರಿಸುತ್ತದೆ.  ಇದು ಹೊಟ್ಟೆಗೆ ವಿಶ್ರಾಂತಿ ನೀಡಿ, ರಾತ್ರಿ ಊಟ ಪಚನವಾಗಲು ನೆರವಾಗುತ್ತದೆ. ಈ ನೀರಿಗೆ ಬೇರೆ ಏನನ್ನೂ ಸೇರಿಸುವ ಅಗತ್ಯವಿರುವುದಿಲ್ಲ. ದೇಹದಿಂದ ಕಶ್ಮಲಗಳನ್ನು ಹೊರ ಹಾಕಲು ಬಿಸಿ ನೀರಿನ ಕಷಾಯವನ್ನು ಕಾಫಿ ಸೇವಿಸಿದಂತೆ ಸೇವಿಸಬೇಕು. ಇದನ್ನು ದಿನನಿತ್ಯ ಪಾಲಿಸಿದಲ್ಲಿ, ಬೆಳಿಗ್ಗೆ ಬೇಗನೇ ಏಳಲು ಅಲರಾಂ ಬೇಕಾಗುವುದಿಲ್ಲ. ಬೆಳಗಿನ ಕ್ರಿಯೆಗಳು ಸಹಜವಾಗಿ ನಡೆಯುತ್ತದೆ.

ಡಾ. ಎಸ್.ಎಸ್. ಹಿರೇಮಠ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10 ದೂ.: 080-2350 5777, ಮೊಬೈಲ್ : 9341226614 Email : dhanvantari.ayurveda@gmail.com,

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com,

Web: www. dhanvantarihospital.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!